ಉಡುಪಿ: ಕೊರೋನಾ 2ನೇ ಅಲೆ : ಧಾರ್ಮಿಕ ಉತ್ಸವದ ನೆಪದಲ್ಲಿ ಮನೋರಂಜನೆಗೆ ಅವಕಾಶ ಇಲ್ಲ : ಜಿಲ್ಲಾಧಿಕಾರಿ ಜಿ ಜಗದೀಶ್ -Vishwanews24
ಉಡುಪಿ: ಕೊರೋನಾ 2ನೇ ಅಲೆ : ಈ ಬಾರಿ ಉಡುಪಿ ಉತ್ಸವಕ್ಕೆ ಅವಕಾಶ ಇಲ್ಲ..
ಧಾರ್ಮಿಕ ಉತ್ಸವದ ನೆಪದಲ್ಲಿ ಮನೋರಂಜನೆಗೆ ಅವಕಾಶ ಇಲ್ಲ : ಜಿಲ್ಲಾಧಿಕಾರಿ ಜಿ ಜಗದೀಶ್ -Vishwanews24
ಉಡುಪಿ: ಕೊರೋನಾ ಎರಡನೇ ಅಲೆ ಹೆಚ್ಚಾಗುತ್ತಿರುವವ ಹಿನ್ನಲೆಯಲ್ಲಿ ಜಾತ್ರೆ ಉತ್ಸವ ಧಾರ್ಮಿಕ ಆಚರಣೆಗೆ ಮಾತ್ರ ಸೀಮಿತವಾಗಿರಬೇಕು ಧಾರ್ಮಿಕ ಉತ್ಸವದ ನೆಪದಲ್ಲಿ ಮನೋರಂಜನೆಗೆ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಅವರು ಮಂಗಳವಾರ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ಬಾರಿ ಉಡುಪಿ ಉತ್ಸವಕ್ಕೆ ಅವಕಾಶ ಇಲ್ಲ. ಕೋವಿಡ್ ಕಾಲದಲ್ಲಿ ಎಕ್ಸಿಬಿಷನ್, ಮನೋರಂಜನೆ ಗೆ ಅವಕಾಶ ಇಲ್ಲ ಆದ್ದರಿಂತ ತಮ್ಮ ಬಳಿ ಬಂದ ಅರ್ಜಿಯನ್ನು ರಿಜೆಕ್ಟ್ ಮಾಡಿದ್ದೇವೆ ಈಗಾಗಲೇ ಸಿದ್ಧತೆ ಮಾಡಿದ್ದರೆ ವಾಪಾಸ್ ಕಿತ್ತುಕೊಂಡು ಹೋಗಬೇಕು ಕೋವಿಡ್ ಹೆಚ್ಚಾಗಿರುವುದರಿಂದ ಮೋಜಿನ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಖಡಕ್ಕ್ ಎಚ್ಚರಿಕೆ ನೀಡಿದರು.
ಆದರೆ ಜಿಲ್ಲೆಯಲ್ಲಿ ನಾಟಕ, ಯಕ್ಷಗಾನ ಸಿನೆಮಾ ಬ್ಯಾನ್ ಮಾಡಿಲ್ಲ ಮತ್ತು ಮದುವೆ ಸಭಾಂಗಣದಲ್ಲಿ ನಿಯಮ ಅನುಸರಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಾಗುವುದು ಮತ್ತು ಆಯೋಜಕರು ನಿರ್ಬಂಧಗಳನ್ನು ಪಾಲಿಸದಿದ್ದರೆ ಅವರ ಶಿಸ್ತಿನ ಕ್ರಮ ಖಂಡಿತ ಎಂದರು.
ಇದನ್ನೂ ಓದಿ : ದ.ಕ.:ಹೆಚ್ಚುತ್ತಿರುವ ಕೊರೊನಾ ಸೋಂಕು : ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ :ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ -Vishwanews24
ಮಣಿಪಾಲದ ಎಂಐಟಿ ಹೊರತುಪಡಿಸಿ ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸ್ಥಿತಿ ಸುಭದ್ರವಾಗಿದೆ ಆದರೆಎಂಐಟಿಯಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣ ಬಂದಿದೆ. ಮಣಿಪಾಲ ಎಂಐಟಿಯಲ್ಲಿ 15% ಪಾಸಿಟಿವಿಟಿ ಇದೆ ಮತ್ತು ಜಿಲ್ಲೆಯಲ್ಲಿ 2% ಪಾಸಿಟಿವಿಟಿ ರೇಟ್ ಕಂಡು ಬಂದಿದೆ. ಆದ್ದರಿಂದ ಜಿಲ್ಲೆಯ ಜನಕ್ಕೆ ಆತಂಕಬೇಡ ಆದರೆ ಎಚ್ಚರಿಕೆಯಿಂದ ವರ್ತಿಸಬೇಕು. ಮತ್ತು ಜನ ಕಳೆದ ಬಾರಿಯ ಚಿತ್ರಣ ಒಮ್ಮೆ ನೆನಪಿಸಿಕೊಳ್ಳಬೇಕು. ಅಂತಹ ಪರಿಸ್ಥಿತಿ ಮತ್ತೆ ಬಾರದಂತೆ ಜನರು ಎಚ್ಚರಿಕೆ ವಹಿಸಬೇಕು ಎಂದರು.
ಶಿಕ್ಷಣ ಸಂಸ್ಥೆಗಳು ಕಟ್ಟುನಿಟ್ಟಿನ ಕೊವಿಡ್ ಮಾರ್ಗಸೂಚಿ ಪಾಲಿಸಬೇಕಿದ್ದು, ಒಂದು ವೇಳೆನಿಯಮ ಪಾಲಿಸದಿದ್ದರೆ ಎಪಿಡಮಿಕ್ ಆ್ಯಕ್ಟ್ ಅಡಿಯಲ್ಲಿ ಕ್ರಮ ಕೈಗೊಳ್ಳಲು ಡಿಡಿಪಿಐ, ಡಿಡಿಪಿಯು ಗೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ನಾಲ್ಕು ಸಂಸ್ಥೆಗಳಲ್ಲಿ ಕೊರೋನಾ ಕಾಣಿಸಿಕೊಂಡಿದ್ದು ಹೆಚ್ಚಿನ ಅಧಿಕಾರಿಗಳ ತಂಡಗಳನ್ನು ನಿಯೋಜನೆ ಮಾಡಿದ್ದೇವೆ ಎಂದರು.
