ಉಡುಪಿ : ಚಾಕು ತೋರಿಸಿ ವ್ಯಕ್ತಿಯ ಅಪಹರಣ – ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಣ ಕಸಿದು ಜೀವ ಬೆದರಿಕೆ – vishwanews24

Featured, ಉಡುಪಿ

ಉಡುಪಿ: ಚಾಕು ತೋರಿಸಿ ವ್ಯಕ್ತಿಯ ಅಪಹರಿಸಿ ಹಣ ಲೂಟಿ ; ಜೀವಬೆದರಿಕೆ

ಉಡುಪಿ : ಚಾಕು ತೋರಿಸಿ ವ್ಯಕ್ತಿಯೊಬ್ಬರನ್ನು ಅಪಹರಿಸಿ, ಅವರಲ್ಲಿದ್ದ 1 ಲ.ರೂ. ಅನ್ನು ಕಸಿದು ಜೀವಬೆದರಿಕೆ ಹಾಕಿದ ಘಟನೆ ಉಡುಪಿ ನಗರದಲ್ಲಿ ನಡೆದಿದೆ.

ಆತ್ರಾಡಿಯ ಮಹಮ್ಮದ್‌ ನಿಹಾಲ್‌ ಅವರು ಬಸ್‌ನ ಕಲೆಕ್ಷನ್‌ ವ್ಯವಹಾರ ಮಾಡಿಕೊಂಡಿದ್ದು, ಜೂ. 20ರಂದು ಬಸ್‌ನ ಕಲೆಕ್ಷನ್‌ ಹಣ ವನ್ನು ತೆಗೆದುಕೊಂಡು ಉಡುಪಿ ಸರ್ವಿಸ್‌ ಬಸ್‌ ನಿಲ್ದಾಣದ ಬೇಕರಿ ಬಳಿ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಬಲವಂತವಾಗಿ ಅವರನ್ನು ಕಾರಿನಲ್ಲಿ ಕರೆದೊಯ್ದಿದ್ದಾರೆ.

ಸುಪ್ರಸಿದ್ಧ ಪ್ರವಾಸಿ ತಾಣ ಎತ್ತಿನಭುಜಕ್ಕೆ ಪ್ರವಾಸಿಗರಿಗೆ ನಿರ್ಬಂಧ : ಅರಣ್ಯ ಇಲಾಖೆ ಆದೇಶ – vishwanews24

ಬಳಿಕ ಚಾಕು ತೋರಿಸಿ, ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಣವನ್ನು ಕಸಿದು ಜೀವ ಬೆದರಿಕೆ ಹಾಕಿದ್ದಾರೆ.
ಆರೋಪಿಗಳನ್ನು ಶಾರೀಕ್‌, ಇರ್ಫಾನ್‌ ಎಂದು ಗುರುತಿಸಲಾಗಿದೆ. ಇವರ ಜತೆಗೆ ಇನ್ನೂ ಇಬ್ಬರು ಅಪರಿಚಿತರು ಇದ್ದರು ಎಂದು ಮಹಮ್ಮದ್‌ ನಿಹಾಲ್‌ ಉಡುಪಿ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಕಾಪು  ಬಿಜೆಪಿ ವತಿಯಿಂದ  ವೀರಭದ್ರ ಸಭಾಂಗಣದಲ್ಲಿ ಯೋಗ ದಿನಾಚರಣೆ ಆಚರಣೆ – vishwanews24

Leave a Reply