ಉಡುಪಿ: ಪ್ರತ್ಯೇಕ ತುಳುನಾಡು ಅಲ್ಲ, ತುಳು ಭಾಷೆಗೆ ಎರಡನೇ ಆದ್ಯತೆ ನೀಡಿ ಎಂದು ಕೇಳುತ್ತಿದ್ದೇವೆ : ಸುನೀಲ್ ಕುಮಾರ್ – Vishwanews24
ಉಡುಪಿ: ನಾವು ಪ್ರತ್ಯೇಕ ತುಳುನಾಡು ಬೇಕು ಎಂದು ಕೇಳುತ್ತಿಲ್ಲ, ತುಳು ಭಾಷೆಗೆ ಎರಡನೇ ಆದ್ಯತೆ ನೀಡಿ ಎಂದು ಕೇಳುತ್ತಿದ್ದೇವೆ : ಸುನೀಲ್ ಕುಮಾರ್
ಉಡುಪಿ: ನಾವು ತುಳುನಾಡು ಪ್ರತ್ಯೇಕ ಬೇಕು ಎಂದು ಕೇಳುತ್ತಿಲ್ಲ. ತುಳು ಬಾಷೆಗೆ ಎರಡನೇ ಆಧ್ಯತೆ ನೀಡಿ ಎಂದು ಕೇಳುತ್ತಿದ್ದೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಅವರು ಹೇಳಿದ್ದಾರೆ.
ತುಳು ಭಾಷೆಗೆ ರಾಜ್ಯದಲ್ಲಿ ಎರಡನೇ ಸ್ಥಾನ ನೀಡುವಂತೆ ಕೇಳಿಕೊಂಡ ವಿಚಾರವಾಗಿ ಸಚಿವರು ಕನ್ನಡಕ್ಕೆ ದ್ರೋಹ ಮಾಡಿದ್ದಾರೆ ಎಂಬ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ರಾಜ್ಯದಲ್ಲಿ ಕನ್ನಡಕ್ಕೇ ಮೊದಲ ಆಧ್ಯತೆ. ಕನ್ನಡದ ಆಧ್ಯತೆ ಬಿಟ್ಟು ಬೇರೆ ಯಾವುದರ ಬಗ್ಗೆಯೂ ಆಲೋಚನೆ ಮಾಡಲು ಸಾಧ್ಯವಿಲ್ಲ. ಕನ್ನಡದ ಎಲ್ಲಾ ಚಟುವಟಿಕೆ ಹಾಗೂ ಕನ್ನಡಿಗರ ಜೊತೆಗೆ ಅವಿನಾಭಾವ ಸಂಬಂಧ ಇಟ್ಟುಕೊಂಡಿರುವುದು ತುಳುನಾಡು. ನಾವು ತುಳುನಾಡು ಪ್ರತ್ಯೇಕ ಬೇಕು ಎಂದು ಕೇಳುತ್ತಿಲ್ಲ. ತುಳು ಬಾಷೆಗೆ ಎರಡನೇ ಆಧ್ಯತೆ ನೀಡಿ ಎಂದು ಕೇಳುತ್ತಿದ್ದೇವೆ. ಕನ್ನಡಕ್ಕೇ ಪರಮೋಚ್ಚ ಆಧ್ಯತೆ ಎಂದರು. ಹಾಗೂ ಬೇರೆ ರಾಜ್ಯಗಳಲ್ಲಿ ಅಲ್ಲಿನ ಆಡಳಿತ ಭಾಷೆಯ ಜೊತೆಗೆ ಸ್ಥಳೀಯ ಭಾಷೆಗೆ ಎರಡನೇ ಆಧ್ಯತೆ ನೀಡಿರುವ ಹಿನ್ನೆಲೆಯಲ್ಲಿ ನಾವು ತುಳು ಭಾಷೆಗೆ ರಾಜ್ಯದಲ್ಲಿ ಎರಡನೇ ಸ್ಥಾನ ಕೇಳುತ್ತಿದ್ದೇವೆ. ಈ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಸಮಿತಿಯ ರಚನೆ ಮಾಡಲಾಗಿದೆ ಅದರ ವರದಿ ನೋಡಿಕೊಂಡು ಸರಕಾರ ತೀರ್ಮಾಣ ಕೈಗೊಳ್ಳುತ್ತದೆ ಎಂದರು.
ಇದೇ ವೇಳೆ ಕ್ಯಾಂಪ್ಕೋದ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರ ಹಾಗೂ ಸಹಕಾರಿಗಳ ದೊಡ್ಡ ಸಮ್ಮೇಳನ ನಡಿತಾ ಇದೆ. ಸಹಕಾರಿ ಹಾಗೂ ಗೃಹ ಸಚಿವ ಅಮಿತ್ ಶಾ ವರು ಬರುತ್ತಿರುವುದರಿಂದ ಸಹಜವಾಗಿಯೇ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದ್ದು, ಚುನಾವಣೆಗೆ ವೇಗ ಸಿಕ್ಕೇ ಸಿಗುತ್ತದೆ. ಈ ಎರಡೂ ಜಿಲ್ಲೆಯಲ್ಲಿಯೂ ಎಲ್ಲಾ ಕಡೆ ಗೆಲ್ಲಬೇಕು ಎಂದು ತಯಾರಿ ನಡೆಯುತ್ತಿದೆ. ಅಭಿವೃದ್ಧಿ ಮತ್ತು ಹಿಂದುತ್ವದ ಕಾರಣಕ್ಕೆ ಜಿಲ್ಲೆಯ ಜನ ಬಿಜೆಪಿಯ ಕೈ ಹಿಡಿಯುತ್ತಾರೆ ಎಂಬ ಭರವಸೆ ಇದೆ ಎಂದರು.
