Featured

ಉಡುಪಿ :ಪಕ್ಷದ ವಿಚಾರಧಾರೆಯನ್ನು ಜನತೆಯ ಮುಂದಿಡಲು ಸಾಮಾಜಿಕ ಜಾಲತಾಣ ಅತ್ಯಂತ ಪರಿಣಾಮಕಾರಿ : ಕ್ಯಾ. ಗಣೇಶ್‌ಕಾರ್ಣಿಕ್ -Vishwanews24

ಉಡುಪಿ :ಪಕ್ಷದ ವಿಚಾರಧಾರೆಯನ್ನು ಜನತೆಯ ಮುಂದಿಡಲು ಸಾಮಾಜಿಕ ಜಾಲತಾಣ ಅತ್ಯಂತ ಪರಿಣಾಮಕಾರಿ : ಕ್ಯಾ. ಗಣೇಶ್‌ಕಾರ್ಣಿಕ್ -Vishwanews24

ಉಡುಪಿ : ಸಾಮಾಜಿಕ ಜಾಲತಾಣಗಳ ಪರಿಣಾಮಕಾರಿ ನಿರ್ವಹಣೆ ಕೇವಲ ವಿಜ್ಞಾನ ಮಾತ್ರವಲ್ಲಅದೊಂದುಕೌಶಲ್ಯ. ಮಾಧ್ಯಮದ ಜವಾಬ್ದಾರಿ ಇರುವ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣ ಕ್ಷೇತ್ರದ ಕನಿಷ್ಠ ಜ್ಞಾನ ಹೊಂದಿರುವುದು ಮತ್ತು ಪಕ್ಷದ ಮಾರ್ಗಸೂಚಿಗಳನ್ನು ಪಾಲಿಸಿ ಅದನ್ನು ಬಳಸುವುದು ಅಪೇಕ್ಷಣೀಯವಾಗಿದೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ವಕ್ತಾರ ಕ್ಯಾಪ್ಟನ್‌ ಗಣೇಶ್‌ ಕಾರ್ಣೀಕ್ ತಿಳಿಸಿದರು.
ಅವರು ದಿನಾಂಕ ೨೦-೦೨-೨೦೨೧ ಶನಿವಾರ ಉಡುಪಿ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆದ ಜಿಲ್ಲಾ ಸಾಮಾಜಿಕ ಜಾಲತಾಣ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಸಮಾಜ ಸೇವೆ ಮತ್ತುರಾಜಕೀಯಕ್ಷೇತ್ರದಲ್ಲಿ ಮಾಹಿತಿ ಮತ್ತು ಸಂವಹನ ಜನಸಮೂಹದಲ್ಲಿಜಾಗೃತಿ ಮೂಡಿಸುವಲ್ಲಿ ಸಾಮಾಜಿಕಜಾಲತಾಣ ಪ್ರಮುಖ ಪಾತ್ರ ವಹಿಸುತ್ತದೆ. ಈ ಕೆಲಸಕ್ಕಾಗಿ ಹಲವಾರು ದಶಕಗಳ ಕಾಲ ದಿನಪತ್ರಿಕೆ, ಮ್ಯಾಗಜೀನ್ ಮತ್ತು ಜರ್ನಲ್ ಗಳನ್ನು ನೆಚ್ಚಿಕೊಳ್ಳಲಾಗುತ್ತಿತ್ತು. ೨೦ ನೇ ಶತಮಾನದ ಮಧ್ಯ ಭಾಗದಲ್ಲಿಎಲೆಕ್ಟಾçನಿಕ್ ಸಂವಹನ ಪ್ರಾಮುಖ್ಯತೆ ಪಡೆಯಿತು. ೨೧ ನೇ ಶತಮಾನದಲ್ಲಿಡಿಜಿಟಲ್ ಮಾಧ್ಯಮದ ಬಳಕೆ ಹೆಚ್ಚಾಗಿ ಜನರನ್ನುತಲುಪಲು ಸಾಮಾಜಿಕ ಜಾಲತಾಣಗಳ ಬಳಕೆ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷರಾದಕುಯಿಲಾಡಿ ಸುರೇಶ್ ನಾಯಕ್‌ಅವರುಕಾರ್ಯಾಗಾರ ಉದ್ಘಾಟಿಸಿ ಮಾತನಾಡಿಅತ್ಯಂತಕಡಿಮೆ ಸಮಯದಲ್ಲಿ ಹಲವರನ್ನು ಮತ್ತು ಹಲವು ವಿಷಯಗಳನ್ನು ತಲುಪಲು ಸಾಧ್ಯವಾಗುವುದರಿಂದ ಸಾಮಾಜಿಕಜಾಲತಾಣವನ್ನು ಸಮೂಹ ಮಾಧ್ಯಮಎಂದು, ಪ್ರಕಟಿಸಿದ ವಿಷಯಗಳು ಒಬ್ಬರಿಂದ  ಹಲವರನ್ನು ತಲುಪುವಕಾರಣ ಇದನ್ನು ಸಾರ್ವಜನಿಕ ಸಂವಹನ ವೇದಿಕೆ ಎಂದು ಪರಿಗಣಿಸಬಹುದುಎಂದುಅವರು ತಿಳಿಸಿದರು.
ರಾಜ್ಯ ಸಾಮಾಜಿಕ ಜಾಲತಾಣ ಸಮಿತಿ ಸದಸ್ಯರಾದ ನಿತಿನ್‌ರಾಜ್ ನಾಯಕ್ ಮಾತನಾಡಿ ಜವಾಬ್ದಾರಿಯುತರಾಷ್ಟಿçÃಯ ಪಕ್ಷವಾದ ಬಿಜೆಪಿ ದೇಶದೆಲ್ಲಡೆ ಸಾಮಾಜಿಕ ಮತ್ತು ಕೋಮು ಸೌಹಾರ್ದವನ್ನು ಬಯಸುತ್ತದೆ. ಪಕ್ಷದಕಾರ್ಯಕರ್ತ ಸಾಮಾಜಿಕಜಾಲತಾಣದಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದರೆರಾಷ್ಟಿçÃಯ ಮೌಲ್ಯಗಳನ್ನು ಉತ್ತೇಜಿಸಬೇಕು ಮತ್ತು ವಿಭಜನಕಾರಿಯಾದ ಪೋಸ್ಟ್ಗಳನ್ನು ಫಾರ್‌ವರ್ಡ್ ಮತ್ತುಪೋಸ್ಟ್ ಮಾಡದೇ ಇರುವುದು ಉತ್ತಮ ಎಂದು ತಿಳಿಸಿದರು.

ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ ಮಾತನಾಡಿ ಸಾಮಾಜಿಕಜಾಲತಾಣ ಸಾಂಪ್ರದಾಯಕಎನ್ನಬಹುದಾದ ಮುದ್ರಣ ಮತ್ತು ಟಿ. ವಿ. ಮಾಧ್ಯಮಗಳಿಗಿಂತ ಬಿನ್ನವಾಗಿದ್ದು, ನಾವು ಪ್ರಕಟಿಸಿದ ವಿಷಯಗಳ ಕುರಿತು ಪ್ರತಿಕ್ರಿಯೆ ನೀಡಲು ಹಾಗು ಸಂವಾದ ನಡೆಸಲುಅವಕಾಶವನ್ನು ಮಾಡಿಕೊಡುತ್ತದೆ. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನು ಹಂಚಿಕೊಳ್ಳುವ ಮೊದಲು ಮರುಓದುವಅಭ್ಯಾಸ ಮಾಡಿಕೊಳ್ಳಿ ಎಂದು ಕರೆ ನೀಡಿದರು.

ಜಿಲ್ಲಾ ಸಾಮಾಜಿಕಜಾಲತಾಣದ ಸಂಚಾಲಕರಾದ ಚ0ದ್ರಶೇಖರ ಪ್ರಭುಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಸಾಮಾಜಿಕ ಜಾಲತಾಣದ ಸದಸ್ಯ ಹರ್ಷಿತ್‌ರೈಕಾರ್ಯಕ್ರಮ ನಿರೂಪಿಸಿ, ಸಹಸಂಚಾಲಕರಾದ ಪ್ರಭಾಚಂದ್ರ ನಾಯಕ್ ಸ್ವಾಗತಿಸಿ, ವಂದಿಸಿದರು.

Vishwa News 24

Recent Posts

ಮಲ್ಪೆ : ಬೋಟ್‌ನಲ್ಲಿ ಮೀನುಗಾರ ಕಾರ್ಮಿಕನ ಕೊಲೆ ಪ್ರಕರಣ: ಆರೋಪಿ ಬಂಧನ – vishwanews24

ಮಲ್ಪೆ : ಬೋಟ್‌ನಲ್ಲಿ ಮೀನುಗಾರ ಕಾರ್ಮಿಕನ ಕೊಲೆ ಪ್ರಕರಣ: ಆರೋಪಿ ಬಂಧನ ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು…

4 minutes ago

ಉಡುಪಿ :ಆ. 27 ರಂದು ನೇರ ಸಂದರ್ಶನ – vishwanews24

ಉಡುಪಿ :ಆ. 27 ರಂದು ನೇರ ಸಂದರ್ಶನ   ಉಡುಪಿ : ನಗರದ ಡಿ.ಬಿ.ಎಸ್ ಬ್ಯಾಂಕ್, ಧರಣಿ ಆರ್ಕೇಡ್, ಕಲ್ಸಂಕ, ಗುಂಡಿಬೈಲು…

16 minutes ago

ಈದ್ ಮಿಲಾದ್: ದ.ಕ/ಉಡುಪಿ ಜಿಲ್ಲೆಗೆ ಆ.25ರಂದು ಸಾರ್ವತ್ರಿಕ ರಜೆ ಘೋಷಣೆ – vishwanews24

ಈದ್ ಮಿಲಾದ್: ದ.ಕ/ಉಡುಪಿ ಜಿಲ್ಲೆಗೆ ಆ.25ರಂದು ಸಾರ್ವತ್ರಿಕ ರಜೆ ಘೋಷಣೆ ಮಂಗಳೂರು: ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಆ. 25ರ ಮಂಗಳವಾರ…

17 hours ago

ಬದುಕಿದ್ದಾಗ ಭಿಕ್ಷುಕಿಯಾಗಿದ್ದ ವೃದ್ಧೆ ಸತ್ತ ಮೇಲೆ ಲಕ್ಷಾಧಿಪತಿ ..- vishwanews24

ಮೃತಪಟ್ಟ ಭಿಕ್ಷುಕಿಯ ಮನೆಯಲ್ಲಿ 30 ಲಕ್ಷ ರೂ. ನಗದು ಪತ್ತೆ ಮಂಡ್ಯ: ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದು,…

20 hours ago

ಬ್ರಹ್ಮಾವರ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ; ಆರೋಪಿ ಮಗನ ಬಂಧನ – vishwanews24

ಬ್ರಹ್ಮಾವರ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ; ಆರೋಪಿ ಮಗನ ಬಂಧನ ಉಡುಪಿ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ…

20 hours ago

ಕಾರ್ಕಳ ಪುರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್‌ ಭೇಟಿ.. ಕಡತಗಳ ಪರಿಶೀಲನೆ – vishwanews24

ಕಾರ್ಕಳ ಪುರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್‌ ಭೇಟಿ.. ಕಡತಗಳ ಪರಿಶೀಲನೆ ಕಾರ್ಕಳ: ಸಾರ್ವಜನಿಕರ ಅರ್ಜಿ ಹಾಗೂ ಕಡತಗಳ ವಿಲೇವಾರಿ ಬಗ್ಗೆ…

21 hours ago