ಉಡುಪಿ : ಫೆ.19, ಸಾಂತೂರು-ಪಿಲ್ಲಾರು ನಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮ – Vishwanews24
ಉಡುಪಿ : ಫೆ.19, ಸಾಂತೂರು-ಪಿಲ್ಲಾರು ನಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮ – Vishwanews24
ಉಡುಪಿ : ಕಾಪು ತಾಲೂಕು ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಂತೂರು-ಪಿಲಾರು ಗ್ರಾಮದಲ್ಲಿ ಫೆಬ್ರವರಿ 19 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಸಾಂತೂರು ವಿದ್ಯಾನಗರದ ದುರ್ಗಾ ಮಂದಿರ ಹಾಲ್ನಲ್ಲಿ ಕಾಪು ತಹಶೀಲ್ದಾರ್ ಹಾಗೂ ಇತರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
ಸಾಂತೂರು-ಪಿಲಾರು ಗ್ರಾಮಗಳ ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಅಹವಾಲನ್ನು ಲಿಖಿತವಾಗಿ ಫೆಬ್ರವರಿ 18 ರ ಒಳಗೆ ಗ್ರಾಮ ಲೆಕ್ಕಿಗರಿಗೆ ಸಲ್ಲಿಸಬೇಕು. ಸಲ್ಲಿಸಲಾದ ಅರ್ಜಿಗಳ ಮೇಲೆ ತೆಗೆದುಕೊಂಡ ಕ್ರಮಗಳನ್ನು ಗ್ರಾಮ ವಾಸ್ತವ್ಯ ಸಂಧರ್ಭದಲ್ಲಿ ತಿಳಿಸಲಾಗುವುದು.

ಈ ಮೇಲ್ಕಂಡ ಗ್ರಾಮಗಳ ಸಾರ್ವಜನಿಕರು ಗ್ರಾಮವಾಸ್ತವ್ಯದಲ್ಲಿ ಭಾಗವಹಿಸಿ ಕುಂದುಕೊರತೆಗಳನ್ನು ಬಗೆಹರಿಸಿಕೊಳ್ಳುವಂತೆ ಕಾಪು ತಾಲೂಕು
ತಹಶೀಲ್ದಾರರ ಪ್ರಕಟಣೆ ತಿಳಿಸಿದೆ.
ಉಡುಪಿ ಎಂಜಿಎಂ ಕಾಲೇಜು – ಹಿಜಬ್ ವಿವಾದ : ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆ – Vishwanews24
