ಉಡುಪಿ: ಬಸ್ಸುಗಳು ಪರವಾನಿಗೆಯಲ್ಲಿ ನಿಗಧಿಪಡಿಸಿದ ಮಾರ್ಗದಲ್ಲಿ ಸಂಚರಿಸಲು ಸೂಚನೆ – vishwanews24
ಉಡುಪಿ: ಬಸ್ಸುಗಳು ಪರವಾನಿಗೆಯಲ್ಲಿ ನಿಗಧಿಪಡಿಸಿದ ಮಾರ್ಗದಲ್ಲಿ ಸಂಚರಿಸಲು ಸೂಚನೆ
ಉಡುಪಿ: ಸಂತೆಕಟ್ಟೆಯಿ0ದ ಉಡುಪಿಗೆ ಬರುವ ಸಿಟಿ ಬಸ್ಸುಗಳ ಬಸ್ಸಿನ ಪರವಾನಿಗೆಯಲ್ಲಿ ನಿಟ್ಟೂರು–ಎನ್.ಎಚ್ 17 ಎಂದು ನಮೂದಿಸಿರುವ ಬಸ್ಸುಗಳು ಅಂಬಾಗಿಲು–ಕರಾವಳಿ ಬೈಪಾಸ್–ಅಂಬಲಪಾಡಿ ಬೈಪಾಸ್– ಬ್ರಹ್ಮಗಿರಿ–ಅಜ್ಜರಕಾಡು–ಹಳೇ ತಾಲೂಕು ಕಚೇರಿ ಮೂಲಕ ಸಿಟಿ ಬಸ್ಸು ನಿಲ್ದಾಣ ತಲುಪಲು, ಸಂತೆಕಟ್ಟೆಯಿ0ದ ಉಡುಪಿಗೆ ಬರುವ ಉಳಿದ ಸಿಟಿ ಬಸ್ಸುಗಳು ಅಂಬಾಗಿಲು–ತಾ0ಗದಗಡಿ–ಗು0ಡಿಬೈಲು– ಕಲ್ಸಂಕ ಮಾರ್ಗವಾಗಿ ಸಂಚರಿಸಿ ಸಿಟಿ ಬಸ್ಸು ನಿಲ್ದಾಣ ತಲುಪಲು ಮತ್ತು ಬಾರ್ಕೂರು ಬ್ರಹ್ಮಾವರ– ಹೊನ್ನಾಳ–ಹೆಬ್ರಿ–ಪೆರ್ಡೂರು–ಕುಕ್ಕೆಹಳ್ಳಿ ಕಡೆಯಿಂದ ಬರುವ ಷಟಲ್ ಸರ್ವೀಸ್ ಬಸ್ಸುಗಳು ಅಂಬಾಗಿಲು ಗುಂಡಿಬೈಲು ಮೂಲಕ ಕಲ್ಸಂಕ ಬಂದು ಉಡುಪಿ ಬಸ್ ನಿಲ್ದಾಣ ತಲುಪುವಂತೆ ಅಧಿಸೂಚನೆ ಹೊರಡಿಸಲಾಗಿರುತ್ತದೆ.
ಆದರೆ ಈಗಾಗಲೇ ಹಲವು ಬಾರಿ ಈ ಕುರಿತು ನೋಟೀಸ್ ನೀಡಿ ಪ್ರಕರಣ ದಾಖಲಿಸಿದ್ದರೂ ಕೂಡ ಅಂಬಾಗಿಲು–ಕಲ್ಪ0ಕ ಮಾರ್ಗದಲ್ಲಿ ಬಸ್ಸುಗಳು ಸಂಚರಿಸದಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದು, ಇದು ಅಂತಿಮ ಸೂಚನೆ ಎಂದು ಪರಿಗಣಿಸಿ ಸಂತೆಕಟ್ಟೆಯಿ0ದ ಉಡುಪಿಗೆ ಬರುವ ಸಿಟಿ ಬಸ್ಸುಗಳ ಬಸ್ಸಿನ ಪರವಾನಿಗೆಯಲ್ಲಿ ನಿಟ್ಟೂರು–ಎನ್.ಎಚ್ 17 ಎಂದು ನಮೂದಿಸದೇ ಇರುವ ಸಿಟಿ ಬಸ್ಸುಗಳು ಮತ್ತು ಬಾರ್ಕೂರು ಬ್ರಹ್ಮಾವರ–ಹೊನ್ನಾಳ–ಹೆಬ್ರಿ– ಪೆರ್ಡೂರು–ಕುಕ್ಕೆಹಳ್ಳಿ ಕಡೆಯಿಂದ ಬರುವ ಷಟಲ್ ಸರ್ವೀಸ್ ಬಸ್ಸುಗಳು ಅಂಬಾಗಿಲು–ತಾ0ಗದಗಡಿ– ಗುಂಡಿಬೈಲು–ಕಲ್ಸ0ಕ ಮಾರ್ಗವಾಗಿ ಕಡ್ಡಾಯವಾಗಿ ಸಂಚರಿಸುವ0ತೆ ಸಂಬ0ದಪಟ್ಟ ಎಲ್ಲಾ ಬಸ್ಸು ಮಾಲೀಕರಿಗೆ ಆದೇಶಿಸಲಾಗಿದೆ. ತಪ್ಪಿದಲ್ಲಿ ಪರವಾನಿಗೆ ರದ್ದು ಪಡಿಸಲು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ : ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ – vishwanews24
