ಉಡುಪಿ: ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸೇವೆಗಾರ ಅಶೋಕ ಸಪಳಿಗ ನಿಧನ – Vishwanews24
ಉಡುಪಿ: ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸೇವೆಗಾರ ಅಶೋಕ ಸಪಳಿಗ ನಿಧನ
ಉಡುಪಿ: ಉಡುಪಿ ಜಿಲ್ಲೆಯ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿನ ಸೇವೆಗಾರ ಅಶೋಕ ಸಪಳಿಗ ಮುಂಡ್ಕೂರು (52) ಅವರು ಅಸೌಖ್ಯದಿಂದ ನಿನ್ನೆ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಮೃತರು ಸಪಳಿಗ ಸಮುದಾಯದ ಯುವ ಗುರಿಕಾರರಾಗಿ, ಸರಳ ಸಜ್ಜನಿಕೆಯಿಂದಲೇ ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಮತ್ತು ಪುತ್ರಿ ಹಾಗೂ ಸಹೋದರರು ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ ಗಂಟೆಗೆ ಮುಂಡ್ಕೂರು ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ.
ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಹೆಸರು ದುರ್ಬಳಕೆ ಆರೋಪ ; ಎರಡು ಕಂಪೆನಿಗಳ ಮೇಲೆ ದೂರು ದಾಖಲು – Vishwanews24
