ಉಡುಪಿ: ಸ್ವರ್ಣಾ ನದಿಯಲ್ಲಿ ಈಜಾಡಲು ಹೋಗಿ ಮುಳುಗಿ ಮೃತಪಟ್ಟ ಇಬ್ಬರು ಯುವಕರ ಶವ ಪತ್ತೆ – Vishwanews24
ಉಡುಪಿ: ಸ್ವರ್ಣಾ ನದಿಯಲ್ಲಿ ಈಜಾಡಲು ಹೋಗಿ ಮುಳುಗಿ ಮೃತಪಟ್ಟ ಇಬ್ಬರು ಯುವಕರ ಶವ ಪತ್ತೆ – Vishwanews24
ಉಡುಪಿ: ಸ್ವರ್ಣಾ ನದಿಯಲ್ಲಿ ಈಜಾಡಲು ಹೋಗಿ ಮುಳುಗಿ ಮೃತಪಟ್ಟ ಇಬ್ಬರು ಯುವಕರ ಶವ ಬುಧವಾರ ಬೆಳಿಗ್ಗೆ ಉಗ್ಗೇಲುಬೆಟ್ಟು ಮಡಿಸಾಲು ಪತ್ತೆಯಾಗಿದೆ.
ಮೃತ ಯುವಕರನ್ನು ಅನಾಸ್(16), ಶ್ರೇಯಸ್ (18) ಎಂದು ಗುರುತಿಸಲಾಗಿದೆ.
ಮಂಗಳವಾರ ಅನಾಸ್, ಶ್ರೇಯಸ್ ಮತ್ತು ಇನ್ನೋರ್ವ ಬಾಲಕ ಸ್ವರ್ಣಾ ನದಿಯಲ್ಲಿ ಈಜಾಡಲು ತೆರಳಿದ್ದು, ಅನಾಸ್ ಮತ್ತು ಶ್ರೇಯಸ್ ನೀರುಪಾಲಾಗಿದ್ದು, ನೀರುಪಾಲಾದ ಯುವಕರ ಬಗ್ಗೆ ಮಾಹಿತಿ ನೀಡದೆ ಇನ್ನೋರ್ವ ಬಾಲಕ ಪಾರಾಗಿ ಮನೆಗೆ ಸೇರಿದ್ದ. ಅನಾಸ್ ಮತ್ತು ಶ್ರೇಯಸ್ ಕಾಣೆಯಾದ ಬಗ್ಗೆ ಮನೆಯವರಿಂದ ಪೊಲೀಸರಿಗೆ ದೂರು ನೀಡಿದ್ದು ವಿಚಾರಣೆ ವೇಳೆ ನೀರುಪಾಲಾದ ವಿಚಾರ ಬಯಲಾಗಿದೆ. ಮಂಗಳವಾರದ ಸಂಜೆಯಿಂದ ಸ್ವರ್ಣಾ ನದಿಯಲ್ಲಿ ಹುಡುಕಾಟ ನಡೆಸಿದ್ದು, ಬುಧವಾರ ಈಜು ಪಟು ಈಶ್ವರ್ ಅವರನ್ನು ಕರೆಸಿಕೊಂಡು ಕಾರ್ಯಚರಣೆ ನಡೆಸಿದ್ದು ಹರಿಯುವ ನದಿಯಲ್ಲಿ ಇಬ್ಬರ ಶವ ಪತ್ತೆಯಾಗಿದೆ.
ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ,.
