ಉಡುಪಿ ​: ಹಿಂದುಗಳ ವಿಚಾರ ಮಾತನಾಡಿದಾಗ ನಮಗೆ ಬೆದರಿಕೆ ಕರೆ ಬರುತ್ತದೆ , ಬೆದರಿಕೆ ಕರೆಗಳಿಗೆ ಬಗ್ಗುವರರೂ ಅಲ್ಲ ಜಗ್ಗುವವರೂ ಅಲ್ಲ:- ಸಚಿವೆ ಶೋಭಾ ಕರಂದ್ಲಾಜೆ

Featured, ಉಡುಪಿ

ಶಾಸಕ ಹರೀಶ್ ಪೂಂಜಾ ರಿಗೆ ಬೆದರಿಕೆ ಖಂಡನೀಯ, ಆರೋಪಿಗಳನ್ನು ತಕ್ಷಣ ಬಂಧಿಸಿ

ಪಿಎಫ್ ಐ ಬ್ಯಾನ್ ಆದ ನಂತರ ಅದರ ಬೆಂಬಲಿಗರು ಹತಾಶರಾಗಿದ್ದಾರೆ..

ನಮಗೆಲ್ಲರಿಗೂ ಬೇರೆಬೇರೆ ದೇಶಗಳಿಂದ ಬೆದರಿಕೆ ಕರೆ ಬರುತ್ತಿದೆ..

ಬೆದರಿಕೆ ಕರೆಗಳಿಗೆ ಬಗ್ಗುವರರೂ ಅಲ್ಲ ಜಗ್ಗುವವರೂ ಅಲ್ಲ..

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ..

ಉಡುಪಿ ​:”ಬೆದರಿಕೆ ಕರೆಗಳಿಗೆ ಬಗ್ಗುವರರೂ, ಜಗ್ಗುವವರೂ ನಾವಲ್ಲ” ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ದುಷ್ಕರ್ಮಿಗಳ ಗುಂಪೊಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರಿಗೆ ಅಡ್ಡಗಟ್ಟಿ ತಲವಾರು ಝಳಪಿಸಿ ಬೆದರಿಕೆ ಹಾಕಿದ ಘಟನೆ ಸಂಬಂಧ ಉಡುಪಿಯಲ್ಲಿ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು “ಪಿಎಫ್ ಐ ಬ್ಯಾನ್ ಆದ ನಂತರ ಅದರ ಬೆಂಬಲಿಗರು ಹತಾಶರಾಗಿದ್ದಾರೆ. ನಮಗೆಲ್ಲರಿಗೂ ಬೇರೆಬೇರೆ ದೇಶಗಳಿಂದ ಬೆದರಿಕೆ ಕರೆ ಬರುತ್ತಿದೆ.ಬೆದರಿಕೆ ಹಾಕಿರುವ ಘಟನೆಯನ್ನು ನಾನು ಖಂಡಿಸುತ್ತೇನೆ. ಈ ಬಗ್ಗೆ ತನಿಖೆ ಮಾಡಿ ಆರೋಪಿಗಳನ್ನು ಪೊಲೀಸರು ಬಂಧಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ – Vishwanews24

ಬೆದರಿಕೆ ಕರೆ ನಿರಂತರವಾಗಿ ನಮಗೂ ಬರುತ್ತಿದೆ.ಹಿಂದುಗಳ ವಿಚಾರ ಮಾತನಾಡಿದಾಗ ನಮಗೆ ಬೆದರಿಕೆ ಕರೆ ಬರುತ್ತದೆ. ಇಂಟರ್ನೆಟ್ ಕರೆಗಳನ್ನು ಪೊಲೀಸರಿಗೆ ಪತ್ತೆ ಮಾಡುವ ಸಾಧ್ಯವಾಗಿಲ್ಲ.

ಬೆದರಿಕೆ ಕರೆಗಳಿಗೆ ಬೆದರುವ ಜಾಯಮಾನ ನಮ್ಮದಲ್ಲ. ಭಯೋತ್ಪಾದಕರಿಗೆ ಮತ್ತು ಬೆಂಬಲಿಗರಿಗೆ ತಕ್ಕ ಶಾಸ್ತಿ ಆಗಬೇಕು. ಬೆದರಿಕೆ ಕರೆಗಳಿಗೆ ಬಗ್ಗುವರರೂ ಅಲ್ಲ ಜಗ್ಗುವವರೂ ಅಲ್ಲ ಎಂದು ಸಚಿವೆ ಹೇಳಿದ್ದಾರೆ.

ನಾನು ಹಿಂದುತ್ವದ ಪರವಾಗಿ ಕೆಲಸ ಮಾಡುವ ಶಾಸಕ ..ಇದಕ್ಕಾಗಿ ಜಿಹಾದಿ ಶಕ್ತಿಗಳು ನನ್ನ ಮೇಲೆ ಹಗೆ ಸಾಧಿಸುವ ಸಾಧ್ಯತೆ ..ಹಿಂದುತ್ವದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ :ಹರೀಶ್ ಪೂಂಜಾ ಪ್ರತಿಕ್ರಿಯೆ

Leave a Reply