ಉದ್ಧವ್‌ ಠಾಕ್ರೆಗೆ ಶುಭ ಹಾರೈಸಿದ ರಾಹುಲ್ !!.. ಶಿವಸೇನೆಗೆ ಹತ್ತಿರವಾಗ್ತಾರಾ ರಾಹುಲ್​?

Featured, ರಾಷ್ಟ್ರ ನ್ಯೂಸ್

ಮುಂಬೈ: ಬಿಜೆಪಿ ಹಾಗೂ ಮಿತ್ರಪಕ್ಷ ಶಿವಸೇನೆ ನಡುವೆ ಎಲ್ಲವೂ ಸರಿಯಾಗಿಲ್ಲ. ಮಹಾರಾಷ್ಟ್ರದಲ್ಲಿ ಒಟ್ಟೊಟ್ಟಿಗೆ ಸರ್ಕಾರ ನಡೆಸ್ತಿದ್ರೂ ಉಭಯ ಪಕ್ಷಗಳ ನಡುವೆ ವಿಪಕ್ಷಗಳ ಹಾಗೇ ಆರೋಪ-ಪ್ರತ್ಯಾರೋಪ ನಡೆಯುತ್ತಿವೆ. ಈ ಸುದ್ದಿಗಳ ನಡುವೆ ಇದೀಗ ಎಐಸಿಸಿ ಅಧ್ಯಕ್ಷ ರಾಹುಲ್​​ ಗಾಂಧಿ ಌಂಟಿ ಬಿಜೆಪಿ ಅಜೆಂಡಾ ಹಿಡಿದು ಲೋಕಸಭೆ ಚುನಾವಣೆಗೆ ತಯಾರಾಗುತ್ತಿದ್ದಾರೆ.

ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರ 58ನೇ ಹುಟ್ಟುಹಬ್ಬಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಶುಕ್ರವಾರ ಟ್ವೀಟ್‌ ಮೂಲಕ ಶುಭ ಕೋರಿದ್ದಾರೆ. ಇದು ರಾಜಕೀಯ ವಲಯ ಹುಬ್ಬೇರಿಸುವಂತೆ ಮಾಡಿದೆ.

ಲೋಕಸಭೆಯಲ್ಲಿ ಪ್ರಧಾನಿಯನ್ನು ಆಲಿಂಗಿಸಿಕೊಂಡ ಕೆಲ ದಿನಗಳಲ್ಲೇ ರಾಹುಲ್‌, ಇದೇ ಮೊದಲ ಬಾರಿ ಠಾಕ್ರೆ ಅವರಿಗೆ ಶುಭ ಕೋರಿದ್ದಾರೆ. ವೈಯಕ್ತಿಕ ಸಂಬಂಧ ಗಳಿಸಲು ರಾಹುಲ್‌ ರಾಜಕೀಯ ವೈರತ್ವವನ್ನು ಮೀರಬಲ್ಲರು ಎಂಬುದನ್ನು ಸಹ ಇದು ಸಂಕೇತಿಸುತ್ತದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಉದ್ಧವ್​ ಠಾಕ್ರೆ ಜನ್ಮದಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಶುಭ ಕೋರಿದ್ದಾರೆ. ಆದರೆ ಎಲ್ಲರ ಶುಭಾಶಯಗಳ ನಡುವೆ ರಾಹುಲ್​ ಗಾಂಧಿ ತಮ್ಮ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಮಾಡಿರುವ ಬಹಿರಂಗ ಶುಭಾಶಯ ವಿನಿಮಯ ರಾಜಕೀಯದಲ್ಲಿ ಸಂಚಲನ ಮೂಡಿಸ್ತಿದೆ. ಇನ್ನು ಇತ್ತೀಚಗಷ್ಟೆ  ಸಂಸತ್​ನಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣ ಹಾಗೂ ಮೋದಿಗೆ ನೀಡಿದ ಅಪ್ಪುಗೆಯ ಬಗ್ಗೆ ಶಿವಸೇನೆ ತನ್ನದೇ ಸ್ಟೈಲ್​ನಲ್ಲಿ ಶ್ಲಾಘನೆ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಇದೀಗ ರಾಹುಲ್​ ಗಾಂಧಿ ಹುಟ್ಟುಹಬ್ಬದ ಶುಭಾಶಯಗಳನ್ನ ಹೇಳಿರುವುದು ಬಿಜೆಪಿ ಪಾಳಯದಲ್ಲಿ ಮತ್ತಷ್ಟು ಆತಂಕಕ್ಕೂ ಕಾರಣವಾಗಿದೆ ಎನ್ನಲಾಗಿದೆ.
ನಿಗೂಢ ನಡೆ: ಬಿಜೆಪಿ ಜತೆ ಶಿವಸೇನೆಯ ಸಂಬಂಧ ಮುರಿದು ಬೀಳುವ ಹಂತಕ್ಕೆ ತಲುಪಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ ನಾಯಕನ ನಡೆ ಕುತೂಹಲ ಮೂಡಿಸಿದೆ.

ಜಾಹಿರಾತು: vyshali Bar& Family Restaurant kaup: 

prop: NAYESH P SHETTY: 9620427036