Featured

ಉದ್ಯಾವರ : ಉದ್ಯಮಿಗಳ ಪ್ರತಿಷ್ಠೆಗೆ ಜನರು ಹೈರಾಣ – Vishwanews24

ಉದ್ಯಾವರ : ಉದ್ಯಮಿಗಳ ಪ್ರತಿಷ್ಠೆಗೆ ಜನರು ಹೈರಾಣ

ಉದ್ಯಾವರ : ಎಲ್ಲಾ ಕಡೆ ಮಳೆಯಿಂದೆ ರಸ್ತೆಯ ಸಮಸ್ಯೆ ಆದರೆ ಉದ್ಯಾವರದ ಜನರಿಗೆ ಮಳೆಯ ಆರಂಭಕ್ಕಿಂತಲು ಮೊದಲೆ ಜನರು ರಸ್ತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಹೌದು ಉದ್ಯಾವರದಿಂದ ಪಿತ್ರೋಡಿಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಜನರು ಹೊಂಡ ಗುಂಡಗಳಿಂದ ವಾಹನ ಸಂಚಾರ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.

ಎರಡು ತಿಂಗಳ ಹಿಂದೆ ಉದ್ಯಾವರ ಪಂಚಾಯತ್ ಮುಂಭಾಗದಿಂದ ಪಿತ್ರೋಡಿ ಹೋಗುವ 170 ಮೀಟರ್ ರಸ್ತೆಯನ್ನು ಅಗೆಯಲಾಗಿತ್ತು. ಅದರ ಬಳಿಕ ಸಾರ್ವಜನಿಕರು ಜನಪ್ರತಿನಿಧಿಗಳ ಮೇಲೆ ಅಕ್ರೋಶ ವ್ಯೆಕ್ತಪಡಿಸಿದ ಬಳಿಕ ಸಿಮೆಂಟ್ ಮಣ್ಣನ್ನು ಹಾಕಲಾಯಿತು. ಮಳೆಗಾಲ ಪೂರ್ಣ ಪ್ರಮಾಣದಲ್ಲಿ ಆರಂಭವಾದ ಬಳಿಕ ರಸ್ತೆಗೆ ಹಾಕಲಾದ ಸಿಮೆಂಟ್ ಕೊಚ್ಚಿಕೊಂಡುಹೋಗಿ ರಸ್ತೆಯ ತುಂಬ ಹೊಂಡಗಳೆ ತುಂಬಿ ಹೋಗಿದೆ.

ಜಾಣ ಕುರುಡುರಂತೆ ವರ್ತಿಸುತ್ತಿದ್ದಾರೆ ಪಂಚಾಯತ್ ಸದಸ್ಯರು..
ಉದ್ಯಾವರ ಪಂಚಾಯತ್ ನ ಮುಂಭಾಗದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದರು ಪಂಚಾಯತ್ ಸದಸ್ಯರು ಮಾತ್ರ ಜಾಣ ಕುರುಡರಂತೆ ವರ್ತನೆ ಮಾಡುತ್ತಿದ್ದಾರೆ. ನಿತ್ಯ ಅದೇ ದಾರಿಯಲ್ಲಿ ಪಂಚಾಯತ್ ಅಧ್ಯಕ್ಷರು ಸೇರಿ ಸದಸ್ಯರು ಸಂಚಾರ ಮಾಡುತ್ತಿದ್ದರು ಕಾಮಗಾರಿಗೆ ವೇಗ ನೀಡಲು ಇಲ್ಲಿಯವರೆಗೆ ಯಾವುದೇ ಒಂದು ಹೇಳಿಕೆ ಕೊಡದಿರುವುದು ಅನುಮಾನಕ್ಕೆ ಕಾರಣ ವಾಗಿದೆ.

ಉದ್ಯಮಿಗಳ ಒಣ ಪ್ರತಿಷ್ಠೆಯಿಂದ ಜನರು ಹೈರಾಣಾಗಿದ್ದು. ಮುಂದಾದರು ಎಚ್ವೆತ್ತುಕೊಂಡು ರಸ್ತೆ ದುರಸ್ತಿಗೆ ವೇಗ ನೀಡಲಿ ಎಂಬುವುದೆ ಜನರ ಆಶಯ.

Vishwa News 24

Recent Posts

ಉಡುಪಿ : ಆ. 20 ರಂದು ನೇರ ಸಂದರ್ಶನ -vishwanews24

ಉಡುಪಿ : ಆ. 20 ರಂದು ನೇರ ಸಂದರ್ಶನ ಉಡುಪಿ : ನಗರದ ಅಂಬಲಪಾಡಿ ಕರಾವಳಿ ಬೈಪಾಸ್ ಬಳಿಯ ರೀಗಲ್…

15 hours ago

ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ -vishwanews24

ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಗಳ ಮರುಪರಿಶೀಲನೆಗೆ…

15 hours ago

ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22ರಂದು ಉಡುಪಿಯಲ್ಲಿ ಸಭೆ -vishwanews24

ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22ರಂದು ಉಡುಪಿಯಲ್ಲಿ ಸಭೆ ಉಡುಪಿ: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ…

15 hours ago

ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಹೆಚ್ಚುವರಿ ಸಂಚಾರ -vishwanews24

ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಹೆಚ್ಚುವರಿ ಸಂಚಾರ ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಬೇಡಿಕೆಗೆ ಅನುಸಾರ…

15 hours ago

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ -vishwanews24

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…

2 days ago

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ -vishwanews24

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…

2 days ago