ಉದ್ಯಾವರ : ಎಲ್ಲಾ ಕಡೆ ಮಳೆಯಿಂದೆ ರಸ್ತೆಯ ಸಮಸ್ಯೆ ಆದರೆ ಉದ್ಯಾವರದ ಜನರಿಗೆ ಮಳೆಯ ಆರಂಭಕ್ಕಿಂತಲು ಮೊದಲೆ ಜನರು ರಸ್ತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಹೌದು ಉದ್ಯಾವರದಿಂದ ಪಿತ್ರೋಡಿಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಜನರು ಹೊಂಡ ಗುಂಡಗಳಿಂದ ವಾಹನ ಸಂಚಾರ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.
ಎರಡು ತಿಂಗಳ ಹಿಂದೆ ಉದ್ಯಾವರ ಪಂಚಾಯತ್ ಮುಂಭಾಗದಿಂದ ಪಿತ್ರೋಡಿ ಹೋಗುವ 170 ಮೀಟರ್ ರಸ್ತೆಯನ್ನು ಅಗೆಯಲಾಗಿತ್ತು. ಅದರ ಬಳಿಕ ಸಾರ್ವಜನಿಕರು ಜನಪ್ರತಿನಿಧಿಗಳ ಮೇಲೆ ಅಕ್ರೋಶ ವ್ಯೆಕ್ತಪಡಿಸಿದ ಬಳಿಕ ಸಿಮೆಂಟ್ ಮಣ್ಣನ್ನು ಹಾಕಲಾಯಿತು. ಮಳೆಗಾಲ ಪೂರ್ಣ ಪ್ರಮಾಣದಲ್ಲಿ ಆರಂಭವಾದ ಬಳಿಕ ರಸ್ತೆಗೆ ಹಾಕಲಾದ ಸಿಮೆಂಟ್ ಕೊಚ್ಚಿಕೊಂಡುಹೋಗಿ ರಸ್ತೆಯ ತುಂಬ ಹೊಂಡಗಳೆ ತುಂಬಿ ಹೋಗಿದೆ.
ಜಾಣ ಕುರುಡುರಂತೆ ವರ್ತಿಸುತ್ತಿದ್ದಾರೆ ಪಂಚಾಯತ್ ಸದಸ್ಯರು..
ಉದ್ಯಾವರ ಪಂಚಾಯತ್ ನ ಮುಂಭಾಗದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದರು ಪಂಚಾಯತ್ ಸದಸ್ಯರು ಮಾತ್ರ ಜಾಣ ಕುರುಡರಂತೆ ವರ್ತನೆ ಮಾಡುತ್ತಿದ್ದಾರೆ. ನಿತ್ಯ ಅದೇ ದಾರಿಯಲ್ಲಿ ಪಂಚಾಯತ್ ಅಧ್ಯಕ್ಷರು ಸೇರಿ ಸದಸ್ಯರು ಸಂಚಾರ ಮಾಡುತ್ತಿದ್ದರು ಕಾಮಗಾರಿಗೆ ವೇಗ ನೀಡಲು ಇಲ್ಲಿಯವರೆಗೆ ಯಾವುದೇ ಒಂದು ಹೇಳಿಕೆ ಕೊಡದಿರುವುದು ಅನುಮಾನಕ್ಕೆ ಕಾರಣ ವಾಗಿದೆ.
ಉದ್ಯಮಿಗಳ ಒಣ ಪ್ರತಿಷ್ಠೆಯಿಂದ ಜನರು ಹೈರಾಣಾಗಿದ್ದು. ಮುಂದಾದರು ಎಚ್ವೆತ್ತುಕೊಂಡು ರಸ್ತೆ ದುರಸ್ತಿಗೆ ವೇಗ ನೀಡಲಿ ಎಂಬುವುದೆ ಜನರ ಆಶಯ.
ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ ಉಡುಪಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು…
ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು ವಿಟ್ಲ: ಮರ ಹಾಗೂ…
ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಕಾರು…
ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ ಜಿ…
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ‘ನುವಾ’ ವಜ್ರಾಭರಣ ಅನಾವರಣ ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ…
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…