ಉದ್ಯಾವರ : ಉದ್ಯಮಿಗಳ ಪ್ರತಿಷ್ಠೆಗೆ ಜನರು ಹೈರಾಣ – Vishwanews24

Featured, ಉಡುಪಿ

ಉದ್ಯಾವರ : ಉದ್ಯಮಿಗಳ ಪ್ರತಿಷ್ಠೆಗೆ ಜನರು ಹೈರಾಣ

ಉದ್ಯಾವರ : ಎಲ್ಲಾ ಕಡೆ ಮಳೆಯಿಂದೆ ರಸ್ತೆಯ ಸಮಸ್ಯೆ ಆದರೆ ಉದ್ಯಾವರದ ಜನರಿಗೆ ಮಳೆಯ ಆರಂಭಕ್ಕಿಂತಲು ಮೊದಲೆ ಜನರು ರಸ್ತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಹೌದು ಉದ್ಯಾವರದಿಂದ ಪಿತ್ರೋಡಿಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಜನರು ಹೊಂಡ ಗುಂಡಗಳಿಂದ ವಾಹನ ಸಂಚಾರ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.

ಎರಡು ತಿಂಗಳ ಹಿಂದೆ ಉದ್ಯಾವರ ಪಂಚಾಯತ್ ಮುಂಭಾಗದಿಂದ ಪಿತ್ರೋಡಿ ಹೋಗುವ 170 ಮೀಟರ್ ರಸ್ತೆಯನ್ನು ಅಗೆಯಲಾಗಿತ್ತು. ಅದರ ಬಳಿಕ ಸಾರ್ವಜನಿಕರು ಜನಪ್ರತಿನಿಧಿಗಳ ಮೇಲೆ ಅಕ್ರೋಶ ವ್ಯೆಕ್ತಪಡಿಸಿದ ಬಳಿಕ ಸಿಮೆಂಟ್ ಮಣ್ಣನ್ನು ಹಾಕಲಾಯಿತು. ಮಳೆಗಾಲ ಪೂರ್ಣ ಪ್ರಮಾಣದಲ್ಲಿ ಆರಂಭವಾದ ಬಳಿಕ ರಸ್ತೆಗೆ ಹಾಕಲಾದ ಸಿಮೆಂಟ್ ಕೊಚ್ಚಿಕೊಂಡುಹೋಗಿ ರಸ್ತೆಯ ತುಂಬ ಹೊಂಡಗಳೆ ತುಂಬಿ ಹೋಗಿದೆ.

ಜಾಣ ಕುರುಡುರಂತೆ ವರ್ತಿಸುತ್ತಿದ್ದಾರೆ ಪಂಚಾಯತ್ ಸದಸ್ಯರು..
ಉದ್ಯಾವರ ಪಂಚಾಯತ್ ನ ಮುಂಭಾಗದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದರು ಪಂಚಾಯತ್ ಸದಸ್ಯರು ಮಾತ್ರ ಜಾಣ ಕುರುಡರಂತೆ ವರ್ತನೆ ಮಾಡುತ್ತಿದ್ದಾರೆ. ನಿತ್ಯ ಅದೇ ದಾರಿಯಲ್ಲಿ ಪಂಚಾಯತ್ ಅಧ್ಯಕ್ಷರು ಸೇರಿ ಸದಸ್ಯರು ಸಂಚಾರ ಮಾಡುತ್ತಿದ್ದರು ಕಾಮಗಾರಿಗೆ ವೇಗ ನೀಡಲು ಇಲ್ಲಿಯವರೆಗೆ ಯಾವುದೇ ಒಂದು ಹೇಳಿಕೆ ಕೊಡದಿರುವುದು ಅನುಮಾನಕ್ಕೆ ಕಾರಣ ವಾಗಿದೆ.

ಉದ್ಯಮಿಗಳ ಒಣ ಪ್ರತಿಷ್ಠೆಯಿಂದ ಜನರು ಹೈರಾಣಾಗಿದ್ದು. ಮುಂದಾದರು ಎಚ್ವೆತ್ತುಕೊಂಡು ರಸ್ತೆ ದುರಸ್ತಿಗೆ ವೇಗ ನೀಡಲಿ ಎಂಬುವುದೆ ಜನರ ಆಶಯ.

ಮೂಳೂರು ಕಡಲತೀರದಲ್ಲಿ ಹೆಚ್ಚಿದ ಕಡಲ ಕೊರೆತ- ನಿರಂತರ ಮಾಧ್ಯಮಗಳಿಂದ ವರದಿ- ಸ್ಥಳಕ್ಕೆ ದೌಡಾಯಿಸಿದ ಕೇಂದ್ರ ಸಚಿವೆ ಶೋಭಾ  – Vishwanews24

Leave a Reply