ಪಡುಬಿದ್ರಿ,: ಎಲ್ಲೂರು ವಿಶ್ವಕರ್ಮ ಸಮಾಜ ಸೇವಾ ಸಂಘವು ಸಾಕಷ್ಟು ಚಟುವಟಿಕೆಯುಕ್ತವಾಗಿದ್ದು, ನಡೆಸುವ ಧಾರ್ಮಿಕ ಚಟುವಟಿಕೆಯು ಸಂಘಟನಾ ಶಕ್ತಿಗೆ ಪೂರಕವಾಗಲಿದೆ ಸ್ವಂತ ನಿವೇಶನದಲ್ಲಿ ಸಮುದಾಯ ಭವನ ನಿರ್ಮಾಣ ಶೀಘ್ರ ಕೈಗೂಡಲಿ ಎಂದು ಬಂಟಕಲ್ಲು ಶ್ರೀ ವಿಶ್ವಕರ್ಮ ಸಂಘದ ಅಧ್ಯಕ್ಷರಾದ ಮುರಳೀಧರ ಆಚಾರ್ಯ ಇನ್ನಂಜೆ ಹೇಳಿದರು.
ಅವರು ಜ.೩೧ರಂದು ಎಲ್ಲೂರು ಕಂಚುಗರ ಕೇರಿಯ ಸ್ವಂತ ನಿವೇಶನದಲ್ಲಿ ನಡೆದ ವಿಶ್ವಕರ್ಮ ಸಮಾಜ ಸೇವಾ ಸಂಘ ರಿ. ಎಲ್ಲೂರು ಇದರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಕಾಪು ದಂಡತೀರ್ಥ ಶಾಲೆಯ ಚಿತ್ರಕಲಾ ಶಿಕ್ಷಕಿ ಅನುಪಮಾ ದೇವರಾಜ ಆಚಾರ್ಯ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿನ ಆಚಾರ ವಿಚಾರವು ಕುಲದ ಶ್ರೇಷ್ಠತೆಗೆ ಮೌಲ್ಯ ನೀಡಲಿ ಎಂದು ಕರೆ ನೀಡಿದರು.
ಪಡುಬಿದ್ರಿ ಉದಯ ಪುರೋಹಿತ್ ಆಶೀರ್ವಚನ ನೀಡಿದರು. ನಿವೃತ್ತ ತಹಶೀಲ್ದಾರ್ ಗಣೇಶ್ ಪಿ. ಆಚಾರ್ಯ ಪಡುಬಿದ್ರಿ, ಶಿಲ್ಪಿ ಗಣಪತಿ ಆಚಾರ್ಯ ಶಂಕರಪುರ ಸಂಘಕ್ಕೆ ಮಾರ್ಗದರ್ಶನದ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ವೈ.ಸತೀಶ ಎಂ. ಆಚಾರ್ಯ, ಗೌರವಾಧ್ಯಕ್ಷರಾದ ವೈ. ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು.
ಕಾರ್ಯದರ್ಶಿ ವೈ.ಪ್ರಶಾಂತ್ ಆಚಾರ್ಯ ವರದಿ ವಾಚಿಸಿದರು. ಕೋಶಾಽಕಾರಿ ವೈ ಕಿಶೋರ್ ಆಚಾರ್ಯ ಆಯ ವ್ಯಯ ಮಂಡಿಸಿದರು. ಸಂಘಟನಾ ಕಾರ್ಯದರ್ಶಿ ವೈ. ವಿಜಯ ಆಚಾರ್ಯ ಉಚ್ಚಿಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಂಚುಗರ ಕೇರಿ: ಎಲ್ಲೂರು ವಿಶ್ವಕರ್ಮ ಸಂಘದ ವಿಶ್ವಕರ್ಮ ಪೂಜೆ
ಪಡುಬಿದ್ರಿ, ವಿಶ್ವಕರ್ಮ ಸಮಾಜ ಸೇವಾ ಸಂಘ ರಿ. ಎಲ್ಲೂರು ವತಿಯಿಂದ ಶ್ರೀ ವಿಶ್ವಕರ್ಮ ಪೂಜೆಯು ಉದಯ ಪುರೋಹಿತ್ ಪೌರೋಹಿತ್ಯದಲ್ಲಿ ಎಲ್ಲೂರು ಕಂಚುಗರ ಕೇರಿಯ ಸ್ವಂತ ನಿವೇಶನದಲ್ಲಿ ಜ.೩೧ರಂದು ಜರಗಿತು.
ಈ ಸಂದರ್ಭ ಸಂಘದ ಗೌರವಾಧ್ಯಕ್ಷ ವೈ. ರಾಘವೇಂದ್ರ ಆಚಾರ್ಯ, ಅಧ್ಯಕ್ಷ ವೈ ಸತೀಶ ಎಂ ಆಚಾರ್ಯ, ಕಾರ್ಯದರ್ಶಿ ವೈ. ಪ್ರಶಾಂತ್ ಆಚಾರ್ಯ, ಕೋಶಾಽಕಾರಿ ವೈ. ಕಿಶೋರ್ ಆಚಾರ್ಯ, ಗೌರವ ಸಲಹೆಗಾರ ವೈ. ವಾಸುದೇವ ಆಚಾರ್ಯ, ಪದಾಽಕಾರಿಗಳು, ಸದಸ್ಯರು, ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ 15 ಲಕ್ಷ ರೂ.ವಂಚನೆ ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ…
ಹಾಸನ : ಡೆತ್ ನೋಟ್ ಬರೆದಿಟ್ಟು ಪ್ಯಾರಾಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ ಹಾಸನ: ಡೆತ್ ನೋಟ್ ಬರೆದಿಟ್ಟು 21 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿಯೋರ್ವ…
ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘ ಸಭೆ ೨೦೨೩-೨೦೨೪ ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ…
ಆನ್ಲೈನ್ನಲ್ಲಿ ಮಾರಾಟ ಮಾಡೋ ತರಕಾರಿಗೆ ಕೆಮಿಕಲ್ ಸ್ಪ್ರೇ ಮಾಡುವ ಬಗ್ಗೆ ದೂರು ಬಂದಿದೆ.. ಪರಿಶೀಲನೆ ಮಾಡ್ತಿದ್ದೇವೆ, ಮುಂದಿನ ದಿನಗಳಲ್ಲಿ ಕ್ರಮ…
ಕಾಸರಗೋಡು : ನಿಯಂತ್ರಣ ತಪ್ಪಿ ಡಿವೈಡರ್ಗೆ ಢಿಕ್ಕಿ ಹೊಡೆದ ಆ್ಯಂಬುಲೆನ್ಸ್ ; ರೋಗಿ ಮೃತ್ಯು, ನಾಲ್ವರಿಗೆ ಗಾಯ ಕಾಸರಗೋಡು :…
ರಾಜ್ಯ ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ವಂದೇ ಮಾತರಂನ ಎರಡು ಚರಣ ಮಾತ್ರ ಬಳಕೆ: ಡಿ.ಕೆ. ಶಿ ಸ್ಪಷ್ಟನೆ…