ಎಲ್ಲ ಶಾಸಕರು ಒಂದು ತಿಂಗಳ ವೇತನ ರೈತರ ಸಾಲಮನ್ನಾ ನಿಧಿಗೆ ನೀಡಿ : ಬಿ.ಸಿ.ಪಾಟೀಲ್ ಮನವಿ

Featured, ರಾಜ್ಯ ನ್ಯೂಸ್

ಬೆಂಗಳೂರು: ಎಲ್ಲ ಶಾಸಕರು ಒಂದು ತಿಂಗಳ ವೇತನವನ್ನು ರೈತರ ಸಾಲಮನ್ನಾ ನಿಧಿಗೆ ಕೊಡಬೇಕು. ನಾನು ನನ್ನ ಒಂದು ತಿಂಗಳ ವೇತನ ಕೊಡುತ್ತೇನೆ ಎಂದು ಶಾಸಕ ಬಿ.ಸಿ ಪಾಟೀಲ್ ಮನವಿ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿ, ಕಳೆದ ವರ್ಷ ಉಳಿದ ಶಾಸಕರ ಪ್ರದೇಶಾಭಿವೃದ್ಧಿ ಹಣವನ್ನು ರೈತರ ಸಾಲ ಮನ್ನಾಕ್ಕೆ ಬಳಸಲಿ. ರೈತರಿಗೆ ತ್ಯಾಗ ಮಾಡಿದರೆ ತಪ್ಪೇನಿಲ್ಲ ಎಂದರು.

6ನೇ ವೇತನ ಆಯೋಗದ ವರದಿಯನ್ನ ಜಾರಿಗೆ ತಂದಿದ್ದು, ನನ್ನನ್ನೂ ಸೇರಿಸಿ ಸರ್ಕಾರದ ಎಲ್ಲ ಇಲಾಖೆ ನೌಕರರು ಒಂದು ತಿಂಗಳ ವೇತನವನ್ನು ಸರ್ಕಾರಕ್ಕೆ ನೀಡಲಿ. ರೈತರ ಸಾಲಮನ್ನಾಗೆ ಅದು ಬಳಕೆಯಾಗಲಿ ಎಂದರು.

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್​ ಮಾಧ್ಯಮ ಆರಂಭಿಸಿ
ಹಳ್ಳಿಗಳ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್​ ಮಾಧ್ಯಮ ಆರಂಭಿಸಿ. ಆಗ ಹಳ್ಳಿಗಳಲ್ಲಿ ಶಾಲೆಗಳ ಹಾಜರಾತಿ ಸಂಖ್ಯೆ ಹೆಚ್ಚಾಗುತ್ತದೆ. ಇಲ್ಲವಾದರೆ ಮಕ್ಕಳನ್ನು ಕಾನ್ವೆಂಟ್​ಗಳಿಗೆ ಸೇರಿಸುತ್ತಾರೆ. ಇದರ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು