ಕಟಪಾಡಿಯಲ್ಲಿ ನಡೆಯಿತು ಕೊರಗಜ್ಜನ ಬೆಚ್ಚಿ ಬೀಳಿಸುವ ಪವಾಡ.

Featured, ಉಡುಪಿ, ಜಿಲ್ಲೆ

ಹೌದು ತುಳುನಾಡಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತನ್ನ ಪವಾಡವನ್ನು ತೋರಿಸುತ್ತಿರುವ ಸತ್ಯದ ಕೊರಗಜ್ಜನ ಕಲೆ ಕಾರ್ಣಿಕ ಅವನ ಬಳಿ ಯಾವುದೇ ದೂರುದುಮ್ಮನವನ್ನ ನೀಡಿದರೆ ಉದಯವಾದ ಸೂರ್ಯ ಅಸ್ತಂಗತವಾಗುವ ಮುನ್ನವೇ ತನ್ನ ಕಾರ್ಣಿಕ ಶಕ್ತಿಯನ್ನ ತೋರ್ಪಾಡಿಸುತ್ತಾನೆ ಅಂತಹದೇ ಒಂದು ಘಟನೆ ಕಟಪಾಡಿಯಲ್ಲಿ ನಡೆದಿದೆ.

ಅದೊಂದು ರಾತ್ರಿ ಒಂದಿಷ್ಟು ಅನ್ಯಕೋಮಿನ ಹುಡುಗರ ಗುಂಪೊಂದು ಕಟಪಾಡಿ ಎಸ್.ವಿಎಸ್ ಕಾಲೇಜು ಮುಂಭಾಗದಲ್ಲಿರುವ ಪೇಟೆಬೆಟ್ಟು ಶ್ರೀ ಬಬ್ಬುಸ್ವಾಮೀ ದೈವಸ್ಥಾನದ ಕಾಣಿಕೆಹುಂಡಿಗೆ ಕನ್ನ ಹಾಕಿದ್ರು , ಕೇವಲ ಅಷ್ಟೇ ಮಾಡಿದ್ರೇ ದೈವವೂ ಕ್ಷಮೆ ನೀಡುತ್ತಿತ್ತೆನೊ. ಆದ್ರೇ ಈ ಹುಡುಗ್ರು ಶಿವಲಿಂಗದಂತಿರುವ ಕಾಣಿಕೆ ಡಬ್ಬಿಯ ಮೇಲೆ ಮೂತ್ರಮಾಡಿ, ಡಬ್ಬಿಯ ಒಳಗೆ ಒಂದಿಷ್ಟು ಕಸ ಮತ್ತು ಕಾಂಡೋಮ್ ಹಾಕಿ ದೈವ ಏನೂ ಮಾಡುತ್ತೆ ಅಂತ ದರ್ಪ ಮೆರೆದಿದ್ದಾರೆ.

ದಿನಗಳೆದಂತೆ ವಾರ್ಷಿಕೋತ್ಸವದ ದಿನದಂದು ದೈವಸ್ಥಾನದ ಹತ್ತು ಸಮಸ್ತರು ಸೇರಿದಾಗ ಈ ವಿಚಾರ ತಿಳಿಯಿತು ಆದರೇ ಈ ಕೃತ್ಯವೆಸಗಿದವರಾರೆಂದು ತಿಳಿಯದೇ ಹೋದಾಗ ಸರ್ವರೂ ಜತೆಗೂಡಿ ಕೊರಗಜ್ಜ ಮತ್ತು ಬಬ್ಬು ಸ್ವಾಮೀಗೆ ದೂರು ಸಲ್ಲಿಸಿದ್ದರು, ದೂರು ಸಲ್ಲಿಸಿದ ತಿಂಗಳು ಕಳೆಯೊದರೊಳಗೆ ಕಟಪಾಡಿ ಅಸುಪಾಸಿನಲ್ಲೊಂದು ವಿಚಿತ್ರ ಘಟನೆ ನಡೆಯಿತು, ಮೂತ್ರಮಾಡಿ ಹೋಗಿದ್ದ ಹುಡುಗ ದಿನಹೋದಂತೆ ಮಾನಸಿಕಮಂದಮತಿಯಂತೆ ವರ್ತಿಸಿ, ಸೊಂಟದಿಂದ ಕೆಳಗೆ ಬಲವಿಲ್ಲದಂತಾಗಿ ಯಾವುದೇ ಔಷಧಿಯಲ್ಲಿ ಗುಣಮುಖವಾಗದೇ ಇದ್ದ ಸಂದರ್ಭದಲ್ಲಿ ತಂದೆತಾಯಂದಿರು ದಿಗ್ಭ್ರಮೆಯಾಗಿ ಪರವೂರ ಜ್ಯೋತಿಷ್ಯರ ಬಳಿ ವಿಚಾರಣೆ ನಡೆಸಿದಾಗ ಈ ಮೇಲಿನ ವಿಚಾರ ತಿಳಿಯಿತು, ಕೂಡಲೇ ಆ ಹುಡುಗನ ತಂದೆ ದೈವಸ್ಥಾನದ ಸದಸ್ಯರ ಬಳಿ ವಿಚಾರ ತಿಳಿಸಿ ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸಿದರು.

ತದನಂತರ ನಿನ್ನೆಯ ದಿನ ಪೇಟೆಬೆಟ್ಟು ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಕೊರಗಜ್ಜ ಮತ್ತು ಬಬ್ಬುಸ್ವಾಮಿಯ ದರ್ಶನ ಸೇವೆ ನಡೆಸಿದಾಗ ಈ ಎಲ್ಲಾ ಅಂಶಗಳನ್ನ ಆ ಹುಡುಗ ಬಾಯಿಬಿಟಿದ್ದು ಆತನ ಜತೆ ಇನ್ನೂ ಎರಡು ಮಂದಿ ಹುಡುಗರು ಸೇರಿಕೊಂಡಿದ್ದಾರೆಂದು ಹೇಳಿದ್ದಾನೆ.ನಂತರ ಅಜ್ಜನ ಬಳಿ ಕ್ಷಮೆಯಾಚಿಸಿದ್ದು ಕೊರಗಜ್ಜ ಆ ಹುಡುಗನಿಗೆ ಅಭಯ ವಾಕ್ಯ ನೀಡಿ ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ., ಇನ್ನುಳಿದ ಹುಡುಗರ ಪೈಕಿ ಒರ್ವನ ಕಿಡ್ನಿಯನ್ನ ಮತ್ತೋರ್ವನ ಜೀವವನ್ನೆ ಬಲಿ ಪಡೆದಿರುವ ಮಾಹಿತಿ ಲಭ್ಯವಾಗಿದೆ.

ಒಟ್ಟಾರೆಯಾಗಿ ತುಳುನಾಡಿನ ವಿಶೇಷ ಪರಂಪರೆ ದೈವಗಳ ಕಲೆಕಾರ್ಣೀಕ ನಂಬಿದವರಿಗೆ ಇಂಬು ಇದೆಯೆಂಬ ಸತ್ಯ ಕಟಪಾಡಿಯಲ್ಲಿ ಮತ್ತೊಮ್ಮೆ ರುಜುವತಾಗಿದೆ.