ಜಿಲ್ಲೆ

ಕಟಪಾಡಿಯಲ್ಲಿ ನಡೆಯಿತು ಕೊರಗಜ್ಜನ ಬೆಚ್ಚಿ ಬೀಳಿಸುವ ಪವಾಡ.

ಹೌದು ತುಳುನಾಡಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತನ್ನ ಪವಾಡವನ್ನು ತೋರಿಸುತ್ತಿರುವ ಸತ್ಯದ ಕೊರಗಜ್ಜನ ಕಲೆ ಕಾರ್ಣಿಕ ಅವನ ಬಳಿ ಯಾವುದೇ ದೂರುದುಮ್ಮನವನ್ನ ನೀಡಿದರೆ ಉದಯವಾದ ಸೂರ್ಯ ಅಸ್ತಂಗತವಾಗುವ ಮುನ್ನವೇ ತನ್ನ ಕಾರ್ಣಿಕ ಶಕ್ತಿಯನ್ನ ತೋರ್ಪಾಡಿಸುತ್ತಾನೆ ಅಂತಹದೇ ಒಂದು ಘಟನೆ ಕಟಪಾಡಿಯಲ್ಲಿ ನಡೆದಿದೆ.

ಅದೊಂದು ರಾತ್ರಿ ಒಂದಿಷ್ಟು ಅನ್ಯಕೋಮಿನ ಹುಡುಗರ ಗುಂಪೊಂದು ಕಟಪಾಡಿ ಎಸ್.ವಿಎಸ್ ಕಾಲೇಜು ಮುಂಭಾಗದಲ್ಲಿರುವ ಪೇಟೆಬೆಟ್ಟು ಶ್ರೀ ಬಬ್ಬುಸ್ವಾಮೀ ದೈವಸ್ಥಾನದ ಕಾಣಿಕೆಹುಂಡಿಗೆ ಕನ್ನ ಹಾಕಿದ್ರು , ಕೇವಲ ಅಷ್ಟೇ ಮಾಡಿದ್ರೇ ದೈವವೂ ಕ್ಷಮೆ ನೀಡುತ್ತಿತ್ತೆನೊ. ಆದ್ರೇ ಈ ಹುಡುಗ್ರು ಶಿವಲಿಂಗದಂತಿರುವ ಕಾಣಿಕೆ ಡಬ್ಬಿಯ ಮೇಲೆ ಮೂತ್ರಮಾಡಿ, ಡಬ್ಬಿಯ ಒಳಗೆ ಒಂದಿಷ್ಟು ಕಸ ಮತ್ತು ಕಾಂಡೋಮ್ ಹಾಕಿ ದೈವ ಏನೂ ಮಾಡುತ್ತೆ ಅಂತ ದರ್ಪ ಮೆರೆದಿದ್ದಾರೆ.

ದಿನಗಳೆದಂತೆ ವಾರ್ಷಿಕೋತ್ಸವದ ದಿನದಂದು ದೈವಸ್ಥಾನದ ಹತ್ತು ಸಮಸ್ತರು ಸೇರಿದಾಗ ಈ ವಿಚಾರ ತಿಳಿಯಿತು ಆದರೇ ಈ ಕೃತ್ಯವೆಸಗಿದವರಾರೆಂದು ತಿಳಿಯದೇ ಹೋದಾಗ ಸರ್ವರೂ ಜತೆಗೂಡಿ ಕೊರಗಜ್ಜ ಮತ್ತು ಬಬ್ಬು ಸ್ವಾಮೀಗೆ ದೂರು ಸಲ್ಲಿಸಿದ್ದರು, ದೂರು ಸಲ್ಲಿಸಿದ ತಿಂಗಳು ಕಳೆಯೊದರೊಳಗೆ ಕಟಪಾಡಿ ಅಸುಪಾಸಿನಲ್ಲೊಂದು ವಿಚಿತ್ರ ಘಟನೆ ನಡೆಯಿತು, ಮೂತ್ರಮಾಡಿ ಹೋಗಿದ್ದ ಹುಡುಗ ದಿನಹೋದಂತೆ ಮಾನಸಿಕಮಂದಮತಿಯಂತೆ ವರ್ತಿಸಿ, ಸೊಂಟದಿಂದ ಕೆಳಗೆ ಬಲವಿಲ್ಲದಂತಾಗಿ ಯಾವುದೇ ಔಷಧಿಯಲ್ಲಿ ಗುಣಮುಖವಾಗದೇ ಇದ್ದ ಸಂದರ್ಭದಲ್ಲಿ ತಂದೆತಾಯಂದಿರು ದಿಗ್ಭ್ರಮೆಯಾಗಿ ಪರವೂರ ಜ್ಯೋತಿಷ್ಯರ ಬಳಿ ವಿಚಾರಣೆ ನಡೆಸಿದಾಗ ಈ ಮೇಲಿನ ವಿಚಾರ ತಿಳಿಯಿತು, ಕೂಡಲೇ ಆ ಹುಡುಗನ ತಂದೆ ದೈವಸ್ಥಾನದ ಸದಸ್ಯರ ಬಳಿ ವಿಚಾರ ತಿಳಿಸಿ ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸಿದರು.

ತದನಂತರ ನಿನ್ನೆಯ ದಿನ ಪೇಟೆಬೆಟ್ಟು ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಕೊರಗಜ್ಜ ಮತ್ತು ಬಬ್ಬುಸ್ವಾಮಿಯ ದರ್ಶನ ಸೇವೆ ನಡೆಸಿದಾಗ ಈ ಎಲ್ಲಾ ಅಂಶಗಳನ್ನ ಆ ಹುಡುಗ ಬಾಯಿಬಿಟಿದ್ದು ಆತನ ಜತೆ ಇನ್ನೂ ಎರಡು ಮಂದಿ ಹುಡುಗರು ಸೇರಿಕೊಂಡಿದ್ದಾರೆಂದು ಹೇಳಿದ್ದಾನೆ.ನಂತರ ಅಜ್ಜನ ಬಳಿ ಕ್ಷಮೆಯಾಚಿಸಿದ್ದು ಕೊರಗಜ್ಜ ಆ ಹುಡುಗನಿಗೆ ಅಭಯ ವಾಕ್ಯ ನೀಡಿ ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ., ಇನ್ನುಳಿದ ಹುಡುಗರ ಪೈಕಿ ಒರ್ವನ ಕಿಡ್ನಿಯನ್ನ ಮತ್ತೋರ್ವನ ಜೀವವನ್ನೆ ಬಲಿ ಪಡೆದಿರುವ ಮಾಹಿತಿ ಲಭ್ಯವಾಗಿದೆ.

ಒಟ್ಟಾರೆಯಾಗಿ ತುಳುನಾಡಿನ ವಿಶೇಷ ಪರಂಪರೆ ದೈವಗಳ ಕಲೆಕಾರ್ಣೀಕ ನಂಬಿದವರಿಗೆ ಇಂಬು ಇದೆಯೆಂಬ ಸತ್ಯ ಕಟಪಾಡಿಯಲ್ಲಿ ಮತ್ತೊಮ್ಮೆ ರುಜುವತಾಗಿದೆ.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

1 day ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

2 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

2 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

2 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

2 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

2 days ago