ಕಟಪಾಡಿ ಗ್ರಾಮಸ್ಥರಿಂದ ಕೊರೋನಾ ವಾರಿಯರ್ಸ್‌ ಗರಡಿ ಜವನೆರ್ ತಂಡಕ್ಕೆ ಗೌರವರ್ಪಣೆ.vishwanews24

Featured, ಉಡುಪಿ

ಕಟಪಾಡಿ ಗ್ರಾಮಸ್ಥರಿಂದ ಕೊರೋನಾ ವಾರಿಯರ್ಸ್‌ ಗರಡಿ ಜವನೆರ್ ತಂಡಕ್ಕೆ ಗೌರವರ್ಪಣೆ.

ಕಟಪಾಡಿ: ಭಾರತ ಲಾಕ್-ಡೌನ್ ಸಮಯದಲ್ಲಿ ಕಟಪಾಡಿ ಹಾಗೂ ಇತರ ಭಾಗದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿದ್ದು ಮಾತ್ರವಲ್ಲದೆ ತುರ್ತು ಕಾರ್ಯದಲ್ಲಿ ಸೇವೆ ಸಲ್ಲಿಸಿದ ಕಟಪಾಡಿ ಗರಡಿ ಜವನೇರ್ ತಂಡಕ್ಕೆ ಕಟಪಾಡಿ ಗ್ರಾಮಸ್ಥರಿಂದ ಅಭಿನಂದನಾ ಕಾರ್ಯಕ್ರಮ ಏಣಗುಡ್ಡೆ ಬ್ರಹ್ಮ ಬೈದರ್ಕಲ ಗರಡಿಯ ವಠಾರದಲ್ಲಿ ಸೋಮವಾರ ನಡೆಯಿತು.

ಈ ಸಂಧರ್ಭದಲ್ಲಿ ಗರಡಿ ಪ್ರಮುಖರಾದ ಉಮೇಶ್ ಬಗ್ಗ ಪೂಜಾರಿ” ಗರಡಿ‌ಜವನೆರ್ ಕಟಪಾಡಿಯ ಯುವಕರ‌ ತಂಡ ಲಾಕ್-ಡೌನ್ ಸಮಯದಲ್ಲಿ ಪ್ರತಿನಿತ್ಯ ಲಾಕ್-ಡೌನ್ ಸಂತ್ರಸ್ತರಿಗೆ ಊಟದ ವ್ಯವಸ್ಥೆ ಮತ್ತು ಇತರ ಸೇವ ಕಾರ್ಯದಲ್ಲಿ ಭಾಗಿಯಾಗಿರುವ ಕಾರ್ಯ ಶ್ಲಾಘನೀಯವಾಗಿದೆ ಮುಂದಿನ‌ ದಿನದಲ್ಲಿಯೂ ಈ‌ ಸೇವೆ ಮುಂದುವರಿಯಬೇಕು ಎಂದರು.”

ಜಿ.ಪ‌ ಸದಸ್ಯೆ ಗೀತಾಂಜಲಿ ಸುವರ್ಣ, ಶಿಲ್ಪಾ ಜಿ‌ ಸುವರ್ಣ, ಪ್ರಮುಖರಾದ ಅಶೋಕ್ ರಾವ್,ವಿನಯ ಬಳ್ಳಾಲ್,ಪ್ರಭಾ ಶೆಟ್ಟಿ,ಪ್ರೇಮ್ ಕುಮಾರ್,ಸುಗುಣ ,ಅಶೋಕ್ ಪೂಜಾರಿ,ಸುಧೀರ್ ಪೂಜಾರಿ,ಹರಿಶ್ಚಂದ್ರ ಅಮೀನ್,ಕಿಶೋರ್ ಅಂಬಾಡಿ,ರಮೇಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.