ಕಟೀಲು ದೇವಿ ಹೆಸರಲ್ಲಿ ಬೆಡ್‌ಶೀಟ್‌ ವ್ಯಾಪಾರಿಗಳಿಂದ ವಯೋವೃದ್ಧ ದಂಪತಿಗಳಿಗೆ ಹಣ ವಂಚನೆ -Vishwanews24

ಉಡುಪಿ

ಉಡುಪಿ: ಜಿಲ್ಲೆಯ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿಯಲ್ಲಿ ಬೆಡ್ ಶೀಟ್ ವ್ಯಾಪಾರಿಗಳ ಸೋಗಿನಲ್ಲಿ ಬಂದು ವಯೋವೃದ್ಧ ದಂಪತಿಗಳನ್ನು ವಂಚಿಸಿದ ಘಟನೆ ಅ.೧೭ರಂದು ನಡೆದಿದ್ದೂ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ನಿವೃತ್ತ ಸಂಸ್ಕೃತ ಶಿಕ್ಷಕ ಮಾಲಾಡಿ ಗುರುರಾಜ್‌ ಭಟ್‌ (89) ಹಾಗೂ ಶಾಂತಮ್ಮ (82) ದಂಪತಿಯ ಮನೆಗೆ ಅ.17ರಂದು ಆಗಮಿಸಿದ ಬೆಡ್‌ಶೀಟ್‌ ವ್ಯಾಪಾರಿಗಳು ಈ ಕೃತ್ಯ ಎಸಗಿದ್ದಾರೆ.

ಬೆಈ ಸಂದರ್ಭ ಮನೆಯ ಮಾಲಿಕರು ಯಾವುದೇ ವಸ್ತುಗಳು ನಮಗೆ ಬೇಡವೆಂದರೂ ಕೇಳದೆ ನಾವು ಕಟೀಲು ದೇವಳದ ದುರ್ಗಾಪರಮೇಶ್ವರಿ ನೇಕಾರರ ಸಂಘದಿಂದ ಬಂದಿದ್ದು, ದೇವಸ್ಥಾನದ ಅಭಿವೃದ್ಧಿಗಾಗಿ ನಾವು ಈ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ ಇದರಲ್ಲಿ ನೀವು ಖರೀದಿಸುವ ಈ ಬೆಡ್ ಶೀಟ್‌ನಿಂದ ದೇವಳಕ್ಕೂ ಹಾಗೂ ಸಂಘಟನೆಗೂ ಸಹಾಯ ಮಾಡಿದಂತಾಗುತ್ತದೆ ಎಂದು ನಂಬಿಸಿ, ಮಾಲಿಕರನ್ನು ಸಂಪೂರ್ಣ ವಿಶ್ವಾಸಕ್ಕೆ ತೆಗೆದುಕೊಂಡು 1 ಸಾವಿರ ವಸ್ತುಗಳ ಖರೀದಿಗೆ, ಯಾವ ರಶೀದಿ ನೀಡದೇ 14 ಸಾವಿರ ಹಣ ಪಡೆದು ವಂಚಿಸಿ ಪರಾರಿಯಾಗಿದ್ದಾರೆ.