Featured

ಕನ್ನಡಿಗರ ಬಗ್ಗೆ ನಿಜವಾಗಲೂ ಕಾಳಜಿ ಇದ್ದರೆ, ಪ್ರಧಾನಿಗೆ ಪತ್ರ ಬರೆದು ಅನ್ನಭಾಗ್ಯಕ್ಕಾಗಿ ‌ಅಕ್ಕಿ ಕೊಡಿಸಿ : ಪ್ರಿಯಾಂಕ್ ಖರ್ಗೆ – Vishwanews24

ಕನ್ನಡಿಗರ ಬಗ್ಗೆ ನಿಜವಾಗಲೂ ಕಾಳಜಿ ಇದ್ದರೆ, ಪ್ರಧಾನಿಗೆ ಪತ್ರ ಬರೆದು ಅನ್ನಭಾಗ್ಯಕ್ಕಾಗಿ ‌ಅಕ್ಕಿ ಕೊಡಿಸಿ : ಪ್ರಿಯಾಂಕ್ ಖರ್ಗೆ

ಕಲಬುರಗಿ: ಕನ್ನಡಿಗರ ಬಗ್ಗೆ ನಿಜವಾಗಲೂ ಕಾಳಜಿ ಇದ್ದರೆ, ಪ್ರೀತಿಯಿದ್ದರೆ ಮೊದಲು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಅನ್ನಭಾಗ್ಯಕ್ಕಾಗಿ ‌ಅಕ್ಕಿ ಕೊಡಿಸಿ ಕನ್ನಡಿಗರ ಅಸ್ಮಿತೆ ಉಳಿಸಲಿ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಒಂದು ಕಾಳು ಕಡಿಮೆಯಾದರೂ ಅನ್ನಭಾಗ್ಯ ಅಕ್ಕಿ ತಗೋಬೇಡಿ ಎಂದು ಸರಕಾರದ ವಿರುದ್ಧ ಜನರಿಗೆ ಚೇತರಿಸುವ ಬದಲು, ಕನ್ನಡಿಗರ ಹಸಿವು ನೀಗಿಸಲು ಮುಂದಾಗಲಿ. ಅವರೂ ಮುಖ್ಯಮಂತ್ರಿ ಯಾಗಿದ್ದವರು. ಅವರ ಮಾತಿಗಾದರೂ ಬಿಜೆಪಿ ಹೈಕಮಾಂಡ್ ಕಿಮ್ಮತ್ತು ನೀಡಿ 3400 ರೂ. ಗಳಲ್ಲಾದರೂ ಕ್ವಿಂಟಾಲ್ ಅಕ್ಕಿ ಕೊಡಿಸಲಿ ನಾವು ಸನ್ಮಾನ‌ ಮಾಡುತ್ತೇವೆ ಎಂದರು.

ಫುಡ್ ಕಾರ್ಪೋರೇಷನ್ ಇಂಡಿಯಾ ಜೂನ್ 12ಕ್ಕೆ ನಮ್ಮ ಸರಕಾರದ ಪತ್ರಕ್ಕೆ ಉತ್ತರಿಸಿ 3400 ರೂ ಕ್ವಿಂಟಾಲ್ ನಂತೆ 2.28 ಮೆ.ಟನ್ ಅಕ್ಕಿ ಕೊಡುವುದಾಗಿ ಹೇಳಿ ಮರುದಿನವೇ , ಜೂನ್ 13 ರಂದು ಕರ್ನಾಟಕಕ್ಕೆ ಕೊಡಲಿಕ್ಕಾಗುವುದಿಲ್ಲ. ಇತರೆ ರಾಜ್ಯಗಳಿಗೆ ಹಿಂದಿನಂತೆ ನಿರಂತರವಾಗಿ‌ ಕೊಡಲಾಗುವುದು ಎಂದು ಪತ್ರ ಬರೆದಿದೆ. ಬಿಜೆಪಿಯವರು ಕನ್ನಡಿಗರ ಅನ್ನಭಾಗ್ಯಕ್ಕೆ ಅಡ್ಡಿ ಪಡಿಸುವ ಮೂಲಕ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.

ಬಿಜೆಪಿಯ ಈ ಸೇಡಿನ ರಾಜಕಾರಣ ಕನ್ನಡಿಗರ ಅಸ್ಮಿತೆಗೆ ಧಕ್ಕೆ ಉಂಟು ಮಾಡುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಕನ್ನಡಿಗರು ನಮ್ಮ ಮಾತು ಕೇಳಲಿಲ್ಲ. ಮೋದಿ ಅವರ ಕೈ ಬಲ‌ಪಡಿಸಲಿಲ್ಲ. ಬಿಜೆಪಿಗೆ ವೋಟು ಮಾಡದಿದ್ದರೆ ಮೋದಿ ಆಶೀರ್ವಾದ ಸಿಗುವುದಿಲ್ಲವೆಂದು ಹೇಳಿದ್ದರು. ಈಗ ಆಶೀರ್ವಾದದ ಗೂಢಾರ್ಥ ಗೊತ್ತಾಗುತ್ತಿದೆ. ಪುಡ್ ಕಾರ್ಪೊರೇಷನ್ ಮುಖೇನ ನಮ್ಮ ಯೋಜನೆ ತಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಏನೇ ಆದರೂ ನಾವು ಮತ್ತು ನಮ್ಮ ಸಿಎಂ, ಡಿಸಿಎಂ ಸೇರಿ ಶತಾಯ ಗತಾಯ ಜುಲೈ 1ರಿಂದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುವುದು ಎಂದರು.

25 ಸಂಸದರು ಬಾಯಿ ಬಿಟ್ಟು ಕೇಳಿ: ರಾಜ್ಯದ 25 ಜನ ಸಂಸದರಿದ್ದಾರೆ. ಅವರೆಲ್ಲರೂ ಸಂಸತ್ತಿನಲ್ಲಿ ಮೋದಿ ಅವರಿಗೆ ಪ್ರಶ್ನಿಸಿ, ನಾವು (ಕರ್ನಾಟಕ) ಹಣ ಕೊಟ್ಟು ಅಕ್ಕಿ ಖರೀದಿಸಲು ಅವಕಾಶ ಕೊಡಲಿ. ಅಷ್ಟಾದರೂ ಮಾಡಿ ಕನ್ನಡಿಗರ ಋಣ ತೀರಿಸಲಿ ಎಂದರು.

ಸಚಿವ ಡಾ.ಶರಣಪ್ರಕಾಶ ಪಾಟೀಲ, ಶಾಸಕರಾದ ಅಲ್ಲಂಪ್ರಭು ಪಾಟೀಲ, ಎಮ.ವೈ.ಪಾಟೀಲ, ಕನೀಜ್ ಫಾತಿಮಾ ಸೇರಿದಂತೆ ಇತರರು ಇದ್ದರು.

Vishwa News 24

Recent Posts

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ -vishwanews24

ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…

2 days ago

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

3 days ago

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ – vishwanews24

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…

3 days ago

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ – vishwanews24

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…

3 days ago

ನಾನು ಹಿಂದೂಸ್ತಾನಿ, ನಾನು ಕನ್ನಡಿಗ, ದೇಶದ ಅಭಿಮಾನವನ್ನ ಬಿಜೆಪಿಯವರಿಂದ ಕಲಿಯಬೇಕಿಲ್ಲ : ವಿಪಕ್ಷಗಳಿಗೆ ಜಮೀರ್ ಅಹ್ಮದ್ ಖಾನ್‌  ತಿರುಗೇಟು – vishwanews24

ಸ್ವಕ್ಷೇತ್ರದಲ್ಲಿ 80ನೇ ಸ್ವಾತಂತ್ರ್ಯೋತ್ಸವ  ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಮೀರ್‌ ಅಹ್ಮದ್‌ ಭಾಗಿ ನಾನು ಹಿಂದೂಸ್ತಾನಿ, ನಾನು ಕನ್ನಡಿಗ, ದೇಶದ ಅಭಿಮಾನವನ್ನ ಬಿಜೆಪಿಯವರಿಂದ…

3 days ago

ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶ ನಾವು ವಾಪಸ್ ಪಡೆದಿಲ್ಲ: ಯು.ಟಿ.ಖಾದರ್ ಸ್ಪಷ್ಟನೆ – vishwanews24

ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶ ನಾವು ವಾಪಸ್ ಪಡೆದಿಲ್ಲ: ಯು.ಟಿ.ಖಾದರ್ ಸ್ಪಷ್ಟನೆ ಅಡಿಕೆ ಬೆಲೆ ಕುಸಿಯಲ್ಲ, ಬೆಳೆಗಾರರಿಗೆ ಸಮಸ್ಯೆ…

3 days ago