ಬೆಂಗಳೂರು : ಗೆಲುವಿನ ಯಶಸ್ಸಿನ ಶಿಖರವೇರಿ ನಾಗಾಲೋಟ ಮುಂದುವರಿಸಿರುವ ‘ಕಾಂತಾರ’ ಚಿತ್ರ ರೇಟಿಂಗ್ ನಲ್ಲಿ ಕನ್ನಡ ಚಿತ್ರ ರಂಗದ ಸಾರ್ವಕಾಲಿಕ ದಾಖಲೆಗಳನ್ನು ಮುರಿದಿದೆ. IMDb ರೇಟಿಂಗ್ ನಲ್ಲಿ ಕೆಜಿಎಫ್ ಚಿತ್ರವನ್ನು ಮೀರಿಸಿದ್ದು,10 ರಲ್ಲಿ 9.5 ರೇಟಿಂಗ್ ಪಡೆದುಕೊಂಡಿದೆ.
ಈ ಹಿಂದೆ ಕೆಜಿಎಫ್1-8.2, ಕೆಜಿಎಫ್ 2- 8.4 ರೇಟಿಂಗ್ ಪಡೆದುಕೊಂಡಿತ್ತು. ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777- 9.0 ರೇಟಿಂಗ್ ಪಡೆದು ಕೊಂಡಿತ್ತು.
ಕರಾವಳಿಯ ಕಂಬಳ ಮತ್ತು ಭೂತ ಕೋಲದ ಸಂಸ್ಕೃತಿಯನ್ನು ಒಳಗೊಂಡಿರುವ, ದೈವದ ಮಹಿಮೆಯನ್ನು ಸಾರುವ, ಪ್ರಕೃತಿಯ ದಟ್ಟ ಕಾಡಿನ ನಡುವಿನಲ್ಲಿರುವ ಹಳ್ಳಿಗರು ಮತ್ತು ದುಷ್ಟ ಶಕ್ತಿಗಳ ನಡುವಿನ ಹೋರಾಟ, ಅಲ್ಲಿ ಗಮನ ಸೆಳೆಯುವ ಕಥಾ ನಾಯಕ ‘ಶಿವ’ ನಾಗಿ ರಿಷಬ್ ಶೆಟ್ಟಿ ಸಾಟಿಯಿಲ್ಲದ ನಟನೆಯಿಂದ ವಿಶ್ವಾದ್ಯಂತ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಸನ್ನ ಬಾಲಚಂದ್ರ ವರಳೆ ಪ್ರಮಾಣವಚನ ಸ್ವೀಕಾರ – Vishwanews24
ಸೆಪ್ಟೆಂಬರ್ 30 ರಂದು ಕೇವಲ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ‘ಕಾಂತಾರ’ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದು, ವಾರದೊಳಗೆ ಇತರ ಭಾಷೆಗಳಿಂದ ಭಾರಿ ಬೇಡಿಕೆ ಕಂಡು ಕೊಂಡು ಹಿಂದಿ ಯಲ್ಲಿ ಬಿಡುಗಡೆಯಾಗಿದ್ದು, ತಮಿಳು, ತೆಲುಗು ಮತ್ತು ಮಲಯಾಳಂ ನಲ್ಲೂ ತೆರೆಗೆ ಬರುತ್ತಿದೆ.
ಈಗಾಗಲೇ ದಿಗ್ಗಜ ನಟರು ಘಟಾನುಘಟಿ ರಾಜಕಾರಣಿಗಳು ಚಿತ್ರ ಮಂದಿರಕ್ಕೆ ಬಂದು ಚಿತ್ರ ವೀಕ್ಷಿಸಿದ್ದಾರೆ. ಅನೇಕ ಪರಭಾಷಾ ದಿಗ್ಗಜ ನಟರೂ ರಿಷಬ್ ಗೆ ಹೊಗಳಿಗೆಯ ಹೂಮಳೆಯನ್ನೇ ಸುರಿಸಿದ್ದಾರೆ. ಕರಾವಳಿಯಲ್ಲಿ ಕಥಾ ವಸ್ತುವಾಗಿರುವ ದೈವದ ಮಹಿಮೆ, ಎಂದೂ ಚಿತ್ರ ಮಂದಿರದತ್ತ ಕಣ್ಣು ಹಾಯಿಸದವರನ್ನೂ ಚಿತ್ರಮಂದಿರದೊಳಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಹಲವು ಮಂದಿ ಚಿತ್ರ ವೀಕ್ಷಿಸಿ 10 ರಲ್ಲಿ 10 ಅಂಕ ನೀಡಿದ್ದು “ವಿವರಿಸಲು ಪದಗಳಿಲ್ಲ.. ಅತ್ಯುತ್ತಮ ಸಿನಿಮಾ. ಎಲ್ಲರ ಶ್ರಮ ತೆರೆಯ ಮೇಲೆ ಕಾಣಿಸುತ್ತದೆ. ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಮುಂದಿನ ಹಂತವಾಗಿದೆ. ಬಿಜಿಎಂ ಮತ್ತು ಅಜನೀಶ್ ಅವರ ಹಾಡುಗಳು ಗೂಸ್ಬಂಪ್ಸ್ . ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಬೆಂಕಿ. ಸಪ್ತಮಿ ಗೌಡ ಅತ್ಯುತ್ತಮ ಮತ್ತು ರೋಮ್ಯಾಂಟಿಕ್ ಆಗಿದ್ದಾರೆ. ಹೊಸತನದ ಕಥೆಯೊಂದಿಗೆ ಶಿವ ಮತ್ತು ಗ್ಯಾಂಗ್ ಕಥೆಯನ್ನು ಚಲಿಸುವಂತೆ ಮಾಡುತ್ತದೆ. ಕೊನೆಯ ಕ್ಲೈಮ್ಯಾಕ್ಸ್ ಥಿಯೇಟರ್ ಅನುಭವದಲ್ಲೇ ನೋಡಲೇಬೇಕಾಗಿರುವುದು ದೈವಿಕ ಕ್ಷಣವಾಗಿದೆ. ಕನ್ನಡ ಚಿತ್ರರಂಗದ ಹೆಮ್ಮೆಯ ಚಿತ್ರ ಮತ್ತು ಸಾಂಸ್ಕೃತಿಕವಾಗಿ ಆಳವಾಗಿ ಬೇರೂರಲಿದೆ ಎಂದು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…