ಕಾಂತಾರ’ ರಿಲೀಸ್ ಆಗಿದ್ದೇ ಆಗಿದ್ದು ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗ ಹೊರಹೊಮ್ಮಿದ್ದಾರೆ. ರಿಷಬ್ ಸ್ಟೈಲ್, ರಿಷಬ್ ಹೇರ್ ಸ್ಟೈಲ್, ಕಾಂತಾರದಲ್ಲಿ ಬಳಸಿದ ಬೈಕ್, ಕನ್ನಡಕ ಎಲ್ಲವೂ ಅಭಿಮಾನಿಗಳಿಗೆ ಇಷ್ಟ ಆಗಿದೆ. ಆದ್ರೀಗ ಇದೇ ಗೆಟಪ್ನಲ್ಲಿ ಥೇಟ್ ‘ಕಾಂತಾರ’ದ ಶಿವನನ್ನೇ ಹೋಲುವ ಜೂನಿಯರ್ ರಿಷಬ್ ಶೆಟ್ಟಿ ಪ್ರತ್ಯಕ್ಷ ಆಗಿದ್ದಾರೆ.
ಅಂದ್ಹಾಗೆ ಉಡುಪಿಯಲ್ಲಿರುವ ಜೂನಿಯರ್ ರಿಷಬ್ ಶೆಟ್ಟಿಯ ಅಸಲಿ ಹೆಸರು ಪ್ರದೀಪ್ ಆಚಾರ್ಯ. ಸ್ವಲ್ಪ ಯಾಮಾರಿದ್ರೆ, ರಿಷಬ್ ಶೆಟ್ಟಿ ಅಂತ ಮಿಸ್ ಮಾಡಿಕೊಳ್ಳೋದು ಗ್ಯಾರಂಟಿ. ಯಾಕಂದ್ರೆ, ರಿಷಬ್ ಶೆಟ್ಟಿಯನ್ನೇ ಹೋಲುವ ಪ್ರದೀಪ್ಗೀಗ ಉಡುಪಿಯಲ್ಲಿ ಫುಲ್ ಡಿಮ್ಯಾಂಡ್ ಬಂದಿದೆ. ಈಗಾಗಲೇ ಹೋಟೆಲ್ ಜಾಹೀರಾತಿನಲ್ಲೂ ನಟಿಸಿ ಬಂದಿದ್ದಾರೆ.
ಇವರು ರಿಷಬ್ ಶೆಟ್ರ ತವರು ಜಿಲ್ಲೆಯ ಉಡುಪಿಯ ಶಿರ್ವದ ಪ್ರದೀಪ್ ಆಚಾರ್ಯ. ಮೊಬೈಲ್ ಅಂಗಡಿಯಲ್ಲಿ ಕೆಲಸಕ್ಕಿದ್ದು ಸಿಂಪಲ್ ಲೈಫ್ ಲೀಡ್ ಮಾಡ್ತಿರೋ ಇವ್ರು ಗಡ್ಡ. ಫೇಸ್ ಕಟ್ ನೋಡಿ ಶಾಪ್ಗೆ ಬಂದವರೆಲ್ಲ ‘‘ಓಯ್.. ನೀವ್ ರಿಷಬ್ ಶೆಟ್ರ ಥರ ಕಾಣ್ತೀರಿ ಮಾರ್ರೆ! ಅಂದಿದ್ರಂತೆ.
ಮಂಗಳೂರು: ರಸ್ತೆ ಅಭಿವೃದ್ಧಿ ಕಾಮಗಾರಿ ..🌐 ವಾಹನ ಸಂಚಾರ ನಿಷೇಧ – ಬದಲಿ ಮಾರ್ಗಕ್ಕೆ ಆದೇಶ – Vishwanews24
ಹೀಗೇ ಒಬ್ರು ಇಬ್ರಲ್ಲ, ಹತ್ತಾರು ಜನ ಹೇಳಿದ್ ಮೇಲೆ ಪ್ರದೀಪ್ ಆಚಾರ್ಯ ಕೂಡಾ ಅದಕ್ಕೆ ತಕ್ಕಂತೆ ಬದಲಾದ್ರು. ಜ್ಯೂನಿಯರ್ ರಿಷಬ್ ಕಂ ಕಾಂತಾರದ ಶಿವನಾಗಿ ಬದಲಾದ್ರು. ಆಮೇಲಂತೂ ಕೇಳೋದೆ ಬೇಡ, ಜನರೆಲ್ಲ ಇವ್ರು ಜೊತೆನೆ ಸೆಲ್ಫಿ ತಕೊಳ್ಳೋಕೆ ಶುರುಮಾಡಿಬಿಟ್ರು.
ಅರ್ಧ ಕೈ ತೋಳಿನ ಶರ್ಟು, ಯಮಹಾ ಆರ್ಎಕ್ಸ್ 100 ಬೈಕು, ಹೇರ್ ಸ್ಟೈಲು, ಕನ್ನಡಕ ಹೀಗೆ ಎಲ್ಲವೂ ರಿಷಬ್ರನ್ನೇ ಹೋಲುತ್ತೆ ಅನ್ನೋದೆ ಪ್ರದೀಪ್ ಆಚಾರ್ಯ ಅವರಿಗೆ ಡಿಮ್ಯಾಂಡ್ ಬರೋಕೆ ಕಾರಣವಾಗಿದೆ.
ಸೆಲ್ಫಿಗಾಗಿ ಬರುವ ಜನರೊಂದಿಗೆ ಪ್ರದೀಪ್ ಮುಜುಗರ ಪಡುತ್ತಲೇ ಪೋಸ್ ಕೊಡುತ್ತಾರೆ. ಕಾಂತರಾ ಸಿನಿಮಾ ಬಿಡುಗಡೆಯಾಗುವ ಮುಂಚೇನೆ ಇವರ ಬಳಿ ಆರ್ಎಕ್ಸ್ ಹಂಡ್ರೆಡ್ ಬೈಕ್ ಇತ್ತು. ಇಗಂತೂ ಬಿಳಿ ಪಂಚೆ ಉಟ್ಟುಕೊಂಡು ಆರ್ಎಕ್ಸ್ ಹಂಡ್ರೆಡ್ ಬೈಕ್ ಹತ್ತಿದರೆ ಜನ ಮೂಗಿನ ಮೇಲೆ ಬೆರಳಿಟ್ಟು ನೋಡುತ್ತಾರೆ.
📛 ಮಂಗಳೂರು: ಹಣದಾಸೆಗಾಗಿ ಹಣತೆ ವ್ಯಾಪಾರಿಯ ಹತ್ಯೆ : ಆರೋಪಿ ಬಂಧನ – Vishwanews24
ಮಂಗಳೂರು: ಕರಾವಳಿಯ ಮೀನುಗಾರ ಮುಖಂಡ , ಬಿಜೆಪಿ ಹಿರಿಯ ನಾಯಕ ರಾಮಚಂದ್ರ ಬೈಕಂಪಾಡಿ ನಿಧನ ಮಂಗಳೂರು : ಕರಾವಳಿಯ ಪ್ರಭಾವಿ…
ಮಂಗಳೂರು: ಯುವತಿ ನಾಪತ್ತೆ ; ಪ್ರಕರಣ ದಾಖಲು ಮಂಗಳೂರು: ಮುಲ್ಕಿ ತಾಲೂಕು ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಬಿಜಾಪುರ ಕಾಲನಿ ನಿವಾಸಿ…
ಮನೆಯಲ್ಲಿ ಜೋಕಾಲಿ ಹಾಕಿದ್ದ ಸೀರೆ ಕೊರಳಿಗೆ ಸುತ್ತಿಕೊಂಡು 10 ವರ್ಷದ ಬಾಲಕಿ ಸಾವು ಚಿಕ್ಕಮಗಳೂರು: ಮನೆಯಲ್ಲಿ ಜೋಕಾಲಿ ಹಾಕಿದ್ದ ಸೀರೆ…
ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ನಜೀರ್ ಅಹ್ಮದ್ ಬೆಂಗಳೂರು : ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಎಂಎಲ್ಸಿ…
ಉಡುಪಿ: ಹೃದಯಾಘಾತದಿಂದ ಲೆಕ್ಕಪರಿಶೋಧಕ ನಿಧನ ಉಡುಪಿ: ಕುಕ್ಕಿಕಟ್ಟೆಯ ದಿನಸಿ ವ್ಯಾಪಾರಿ ದಿ. ಮರ್ತಪ್ಪ ಶೆಣೈ ಅವರ ಪುತ್ರ, ಲೆಕ್ಕಪರಿಶೋಧಕ ದೀಪಕ್…
ಶಿರ್ವ : ಮಾನಸಿಕ ಖಿನ್ನತೆ ಹಿನ್ನೆಲೆ : ವ್ಯಕ್ತಿ ಆತ್ಮಹತ್ಯೆ… ಶಿರ್ವ: ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರ್ವ ಗ್ರಾಮದ…