ಕರಾವಳಿಯಲ್ಲಿ ಜ್ಯೂ.ರಿಷಬ್​ ಶೆಟ್ಟಿ : ಉಡುಪಿಯಲ್ಲಿ ಹವಾ ಸೃಷ್ಟಿಸುತ್ತಿರುವ ಶಿರ್ವದ ಪ್ರದೀಪ್ ಆಚಾರ್ಯ – Vishwanews24

Featured, ಉಡುಪಿ

ಕರಾವಳಿಯಲ್ಲಿ ಜ್ಯೂ.ರಿಷಬ್​ ಶೆಟ್ಟಿ , ಉಡುಪಿಯಲ್ಲಿ ಹವಾ ಸೃಷ್ಟಿಸುತ್ತಿರುವ ಶಿರ್ವದ ಪ್ರದೀಪ್ ಆಚಾರ್ಯ

ಕಾಂತಾರ’ ರಿಲೀಸ್ ಆಗಿದ್ದೇ ಆಗಿದ್ದು ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗ ಹೊರಹೊಮ್ಮಿದ್ದಾರೆ. ರಿಷಬ್ ಸ್ಟೈಲ್, ರಿಷಬ್ ಹೇರ್‌ ಸ್ಟೈಲ್, ಕಾಂತಾರದಲ್ಲಿ ಬಳಸಿದ ಬೈಕ್, ಕನ್ನಡಕ ಎಲ್ಲವೂ ಅಭಿಮಾನಿಗಳಿಗೆ ಇಷ್ಟ ಆಗಿದೆ. ಆದ್ರೀಗ ಇದೇ ಗೆಟಪ್‌ನಲ್ಲಿ ಥೇಟ್ ‘ಕಾಂತಾರ’ದ ಶಿವನನ್ನೇ ಹೋಲುವ ಜೂನಿಯರ್‌ ರಿಷಬ್ ಶೆಟ್ಟಿ ಪ್ರತ್ಯಕ್ಷ ಆಗಿದ್ದಾರೆ.

ಅಂದ್ಹಾಗೆ ಉಡುಪಿಯಲ್ಲಿರುವ ಜೂನಿಯರ್ ರಿಷಬ್ ಶೆಟ್ಟಿಯ ಅಸಲಿ ಹೆಸರು ಪ್ರದೀಪ್ ಆಚಾರ್ಯ. ಸ್ವಲ್ಪ ಯಾಮಾರಿದ್ರೆ, ರಿಷಬ್ ಶೆಟ್ಟಿ ಅಂತ ಮಿಸ್ ಮಾಡಿಕೊಳ್ಳೋದು ಗ್ಯಾರಂಟಿ. ಯಾಕಂದ್ರೆ, ರಿಷಬ್ ಶೆಟ್ಟಿಯನ್ನೇ ಹೋಲುವ ಪ್ರದೀಪ್‌ಗೀಗ ಉಡುಪಿಯಲ್ಲಿ ಫುಲ್ ಡಿಮ್ಯಾಂಡ್ ಬಂದಿದೆ. ಈಗಾಗಲೇ ಹೋಟೆಲ್ ಜಾಹೀರಾತಿನಲ್ಲೂ ನಟಿಸಿ ಬಂದಿದ್ದಾರೆ.

ಅದೇ ಸ್ಟೈಲ್, ಅದೇ ಲುಕ್ಕು, ಅದೇ ಹೇರ್​ಸ್ಟೈಲ್. ಪಂಚೆ ಉಟ್ಟು rx100 ಬೈಕ್ ಹತ್ತಿದರೆ ಕೇಳೋದೇ ಬೇಡ ನಟ ರಿಷಬ್ ಶೆಟ್ಟಿ ಅಂತನೇ ಹೇಳುತ್ತೀರಿ. ಆದರೆ ಈ ಚಿತ್ರದಲ್ಲಿರುವವರು ನಟ ರಿಷಬ್ ಶೆಟ್ಟಿ ರೀತಿಯಲ್ಲಿ ಕಂಡರೂ ಇವರು ಅವರಲ್ಲ. ಕಾಂತರಾ ಚಿತ್ರದಲ್ಲಿ ರಿಷಬ್ ಶೆಟ್ಟಿ ನಿರ್ವಹಿಸಿರುವ ಶಿವನ ಪಾತ್ರಧಾರಿಯನ್ನೇ ಹೋಲುವ ವ್ಯಕ್ತಿ ಒಬ್ಬ ಉಡುಪಿಯಲ್ಲಿ ಪತ್ತೆಯಾಗಿದ್ದಾರೆ. ಹಾವಾ ಭಾವ ಭಂಗಿ ಪ್ರತಿಯೊಂದರಲ್ಲೂ ಥೇಟ್ ರಿಷಬ್ ಶೆಟ್ಟಿಯ ಪಾತ್ರದ್ದೇ ತದ್ರೂಪ.

ಇವರು ರಿಷಬ್ ಶೆಟ್ರ ತವರು ಜಿಲ್ಲೆಯ ಉಡುಪಿಯ ಶಿರ್ವದ ಪ್ರದೀಪ್ ಆಚಾರ್ಯ. ಮೊಬೈಲ್ ಅಂಗಡಿಯಲ್ಲಿ ಕೆಲಸಕ್ಕಿದ್ದು ಸಿಂಪಲ್ ಲೈಫ್ ಲೀಡ್ ಮಾಡ್ತಿರೋ ಇವ್ರು ಗಡ್ಡ. ಫೇಸ್ ಕಟ್ ನೋಡಿ ಶಾಪ್ಗೆ ಬಂದವರೆಲ್ಲ ‘‘ಓಯ್.. ನೀವ್ ರಿಷಬ್ ಶೆಟ್ರ ಥರ ಕಾಣ್ತೀರಿ ಮಾರ್ರೆ! ಅಂದಿದ್ರಂತೆ.

ಮಂಗಳೂರು: ರಸ್ತೆ ಅಭಿವೃದ್ಧಿ ಕಾಮಗಾರಿ ..🌐 ವಾಹನ ಸಂಚಾರ ನಿಷೇಧ – ಬದಲಿ ಮಾರ್ಗಕ್ಕೆ ಆದೇಶ – Vishwanews24

ಹೀಗೇ ಒಬ್ರು ಇಬ್ರಲ್ಲ, ಹತ್ತಾರು ಜನ ಹೇಳಿದ್ ಮೇಲೆ ಪ್ರದೀಪ್ ಆಚಾರ್ಯ ಕೂಡಾ ಅದಕ್ಕೆ ತಕ್ಕಂತೆ ಬದಲಾದ್ರು. ಜ್ಯೂನಿಯರ್ ರಿಷಬ್ ಕಂ ಕಾಂತಾರದ ಶಿವನಾಗಿ ಬದಲಾದ್ರು. ಆಮೇಲಂತೂ ಕೇಳೋದೆ ಬೇಡ, ಜನರೆಲ್ಲ ಇವ್ರು ಜೊತೆನೆ ಸೆಲ್ಫಿ ತಕೊಳ್ಳೋಕೆ ಶುರುಮಾಡಿಬಿಟ್ರು.

ಉಡುಪಿಯಲ್ಲಿ ಜೂ.ರಿಷಬ್ ಶೆಟ್ಟಿಗೆ ಫುಲ್ ಡಿಮ್ಯಾಂಡ್: ಸೆಲ್ಫಿ ಕೊಡ್ತಾರಾ 'ಕಾಂತಾರ' ಹೀರೊ?  | After Kantara Success Junior Rishab Shetty Aka Pradeep Acharya Full  Demand In Udupi - Kannada Filmibeat

ಅರ್ಧ ಕೈ ತೋಳಿನ ಶರ್ಟು, ಯಮಹಾ ಆರ್​ಎಕ್ಸ್ 100 ಬೈಕು, ಹೇರ್ ಸ್ಟೈಲು, ಕನ್ನಡಕ ಹೀಗೆ ಎಲ್ಲವೂ ರಿಷಬ್ರನ್ನೇ ಹೋಲುತ್ತೆ ಅನ್ನೋದೆ ಪ್ರದೀಪ್ ಆಚಾರ್ಯ ಅವರಿಗೆ ಡಿಮ್ಯಾಂಡ್ ಬರೋಕೆ ಕಾರಣವಾಗಿದೆ.

ಸೆಲ್ಫಿಗಾಗಿ ಬರುವ ಜನರೊಂದಿಗೆ ಪ್ರದೀಪ್ ಮುಜುಗರ ಪಡುತ್ತಲೇ ಪೋಸ್ ಕೊಡುತ್ತಾರೆ. ಕಾಂತರಾ ಸಿನಿಮಾ ಬಿಡುಗಡೆಯಾಗುವ ಮುಂಚೇನೆ ಇವರ ಬಳಿ ಆರ್​ಎಕ್ಸ್ ಹಂಡ್ರೆಡ್ ಬೈಕ್ ಇತ್ತು. ಇಗಂತೂ ಬಿಳಿ ಪಂಚೆ ಉಟ್ಟುಕೊಂಡು ಆರ್​ಎಕ್ಸ್ ಹಂಡ್ರೆಡ್ ಬೈಕ್ ಹತ್ತಿದರೆ ಜನ ಮೂಗಿನ ಮೇಲೆ ಬೆರಳಿಟ್ಟು ನೋಡುತ್ತಾರೆ.

📛 ಮಂಗಳೂರು: ಹಣದಾಸೆಗಾಗಿ ಹಣತೆ ವ್ಯಾಪಾರಿಯ ಹತ್ಯೆ : ಆರೋಪಿ ಬಂಧನ – Vishwanews24

 

Leave a Reply