Featured

ಕರಾವಳಿಯ ಯುವ ಪ್ರತಿಭಾವಂತ ಕಲಾವಿದರುಗಳ ಮೊದಲ ಪ್ರಯತ್ನ “ಮಚ್ಚಾ ನೀನ್ ಬದುಕ್ಬೇಕಾ?” ಚಲನಚಿತ್ರದ ಪೋಸ್ಟರ್ ಬಿಡುಗಡೆ – ಸದ್ಯದಲ್ಲೇ ತೆರೆಗೆ -Vishwanews24

ಕರಾವಳಿಯ ಯುವ ಪ್ರತಿಭಾವಂತ ಕಲಾವಿದರುಗಳ ಮೊದಲ ಪ್ರಯತ್ನ “ಮಚ್ಚಾ ನೀನ್ ಬದುಕ್ಬೇಕಾ?” ಚಲನಚಿತ್ರದ ಪೋಸ್ಟರ್ ಬಿಡುಗಡೆ – ಸದ್ಯದಲ್ಲೇ ತೆರೆಗೆ -Vishwanews24

ಬೆಂಗಳೂರು : ಕರಾವಳಿಯ ಯುವಕಲಾವಿದರು ಮತ್ತು ಕನ್ನಡದ ಕೆಲ ಹಿರಿಯ ಕಿರುತೆರೆ ಕಲಾವಿದರು ನಟಿಸಿರುವ “ಮಚ್ಚಾ ನೀನ್ ಬದುಕ್ಬೇಕಾ?” ಎಂಬ ಕನ್ನಡ ಚಲನಚಿತ್ರದ ಮೊದಲ ಪೋಸ್ಟರ್‍ನ್ನು ಇಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು.

ಕರಾವಳಿಯ ಕಲಾವಿದರು ಹಾಗೂ ರಂಗಭೂಮಿಯ ಕೆಲ ಹಿರಿಯ ಕಲಾವಿದರು ಸೇರಿ ಅಭಿನಯಿಸಿರುವ ಕನ್ನಡದ ಚಲನಚಿತ್ರದ “ಮಚ್ಚಾ ನೀನ್ ಬದುಕ್ಬೇಕಾ?” ಎಂಬ ಮೊದಲ ಪೋಸ್ಟರ್‍ನ್ನು ಇಂದು ಬಿಡುಗಡೆ ಮಾಡಿದ್ದು, ಯುವ ಕಲಾವಿದರಾದ ರಮೇಶ್ ಶೆಟ್ಟಿ, ಸುರೇಶ್ ಮಲ್ಪೆ, ಶರಣ್ ಉದ್ಯಾವರ ಹಾಗೂ ಅನೇಕ ಯುವ ಕಲಾವಿದರು ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ.

ಮಂಗಳೂರು ,ಪೆಣಂಬೂರು ಜೊತೆಗೆ ಉಡುಪಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದು ಹಾಡನ್ನು ಸಹ ಈಗಾಗಲೇ ಚಿತ್ರತಂಡ ಚಿತ್ರೀಕರಣ ಮುಗಿಸಿರುತ್ತದೆ.

ಮೂಲತಃ ಭಟ್ಕಳ ನಿವಾಸಿಯಾದ ಜಗದೀಶ್ ಡಿ ಎನ್, ಭಟ್ಕಳ್ ರವರು ಮೊಟ್ಟ ಮೊದಲ ಬಾರಿಗೆ ನಿರ್ದೇಶಿಸಿರುವ ಹೊಸ ಕನ್ನಡ ಚಿತ್ರ ಇದಾಗಿದ್ದು, ಯುವ ಪ್ರತಿಭೆಗಳಾದ ಮುರುಡೇಶ್ವರದ ಆನಂದ ನಾಯ್ಕ್ ಎನ್ನುವವರು ಸಹ ಚಿತ್ರದ ಒಂದು ಹಾಡಿಗೆ ಸಾಹಿತ್ಯವನ್ನು ಬರೆದಿರುತ್ತಾರೆ. ಜೊತೆಗೆ ಮಂಗಳೂರಿನ ಉಮಾ ಮಹೇಶ್ವರ ಸಹ-ನಿರ್ಮಾಪಕರು, ಜೈರಾಮ್ ಶೆಟ್ಟಿ ಕುಂದಾಪುರ.

ಲಾಕ್ ಡೌನ್ ಸಂದರ್ಭದಲ್ಲಿ ಶೇಕಡಾ 60ರಷ್ಟು ಚಿತ್ರೀಕರಣ ಮುಗಿಸಿರುವ ಈ ಚಿತ್ರ ತಂಡ ಅಗಷ್ಟ್ ತಿಂಗಳ ಒಳಗೆ ಪೋಸ್ಟ್ ಪ್ರೋಡಕ್ಷನ್ ಕೆಲಸವನ್ನು ಮುಗಿಸಿ ಸೆಪ್ಟೆಂಬರ್ ಅಂತ್ಯದ ಒಳಗೆ ಚಿತ್ರದ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇದು ಐಷಾರಾಮಿ ಜೀವನದ ಆಸೆಗೆ ಕುಟುಂಬಕ್ಕೆ ಆಸರೆ ಆಗಬೇಕಾದ ಒಬ್ಬ ಮಧ್ಯಮ ಕುಟುಂಬದ ಕಾಲೇಜು ಯುವಕ ಹೇಗೆ ಬೆಂಗಳೂರಿನಲ್ಲಿ ಪರಿಸ್ಥಿತಿಗೆ ಬದಲಾಗಿ ಜೀವನದಲ್ಲಿ ಎನಾಗುತ್ತಾನೆ ಎಂಬ ಕಥಾವಸ್ತು ಇದಾಗಿದ್ದು , ಸಮಾಜಕ್ಕೆ ಉತ್ತಮ ರೀತಿಯಲ್ಲಿ ಸಂದೇಶಗಳನ್ನು ಸೇರಿಸಲಾಗಿದೆ. ಕಳೆದ ಕೆಲ ತಿಂಗಳ ಹಿಂದೆ ಬಿಡುಗಡೆ ಆಗಬೇಕಿದ್ದ ಈ ಚಿತ್ರ ಕೊರೊನಾದಿಂದ ಪೊಸ್ಟ್ ಪ್ರೊಡಕ್ಷನ್ ಹಾಗೂ ಔಟ್ ಡೋರ್ ಚಿತ್ರೀಕರಣ ಮುಂದೆ ಹೋಗಿದ್ದ ಕಾರಣ, ಚಿತ್ರದ ಮೊದಲ ಪೋಸ್ಟರ್ ಇಂದು ಬಿಡುಗಡೆಯಾಗಿದೆ.

ನಮ್ಮ ಕರಾವಳಿಯಲ್ಲಿರುವ ಪ್ರತಿಯೊಬ್ಬರು  ಯುವಪ್ರತಿಭೆಗಳಿಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡುವ ಮೂಲಕ ರಾಜ್ಯಮಟ್ಟದಲ್ಲಿ ಇವರನ್ನು ಇನ್ನೊಮ್ಮೆ ಗುರುತಿಸುವ ಹಾಗೆ ಆಗಲಿ ಎಂದು ಭಟ್ಕಳದ ಜಗದೀಶ್.ಡಿ.ಎನ್ ತಿಳಿಸಿದ್ದಾರೆ

ನಮಸ್ಕಾರ ಸ್ನೇಹಿತರೆ, ಇದು ನಮ್ಮ ಉತ್ತರ ಕನ್ನಡದ ಅನೇಕ ಯುವ ಪ್ರತಿಭೆಗಳ ಮೊದಲ ಪ್ರಯತ್ನ *ಮಚ್ಚ ನೀನ್ ಬದುಕ್ಬೇಕಾ?..* ಹಾಗೂ ನಮ್ಮ ಚಿತ್ರದ ಮೊದಲ ಪೊಸ್ಟರ್.ನಿಮ್ಮ ಸ್ನೇಹಿತರಿಗೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮುಲಕ ನಿಮ್ಮ ಆಶೀರ್ವಾದ ಮತ್ತು ಬೆಂಬಲವನ್ನು ನೀಡಿ ಈ ಮೂಲಕ ನಮ್ಮ ಈ ಮೊದಲ ಪ್ರಯತ್ನಕ್ಕೆ ಬೆಂಬಲವಾಗಿ ಜೊತೆಗಿರಲು ಬಯಸುತ್ತೇವೆ ಧನ್ಯವಾದಗಳು..

AJ Creative Minds 2020

 

Vishwa News 24

Recent Posts

ಎಸ್‌ಟಿಪಿಯನ್ನು ಮೂಳೂರಿನಿಂದ ಬೆಳಪು ಪ್ರದೇಶಕ್ಕೆ ಸ್ಥಳಾಂತರ ಮಾಡಿದರೆ ಕಾಪು ಪುರಸಭೆಗೆ ಸಂಪೂರ್ಣ ಸ್ವಾಗತ : ದೇವಿಪ್ರಸಾದ್ ಶೆಟ್ಟಿ – vishwanews24

ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…

21 hours ago

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ – vishwanews24

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…

24 hours ago

ಬಿಜೆಪಿ ನಡೆಸಿರುವ ಅಪವಿತ್ರ ಮೈತ್ರಿ ಇತಿಹಾಸವನ್ನು ದೇಶ ಮರೆತಿಲ್ಲ : ಬಿ.ಕೆ.ಹರಿಪ್ರಸಾದ್ – vishwanews24

ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…

24 hours ago

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ – vishwanews24

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…

1 day ago

ವಿವಾಹಿತ ಮಹಿಳೆ  ಜತೆ ಲಿವ್ ಇನ್ ರಿಲೇಶನ್‌ ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  – vishwanews24

ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…

1 day ago

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ – vishwanews24

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…

1 day ago