Featured

ಕರಾವಳಿಯ ಯುವ ಪ್ರತಿಭಾವಂತ ಕಲಾವಿದರುಗಳ ಮೊದಲ ಪ್ರಯತ್ನ “ಮಚ್ಚಾ ನೀನ್ ಬದುಕ್ಬೇಕಾ?” ಚಲನಚಿತ್ರದ ಪೋಸ್ಟರ್ ಬಿಡುಗಡೆ – ಸದ್ಯದಲ್ಲೇ ತೆರೆಗೆ -Vishwanews24

ಕರಾವಳಿಯ ಯುವ ಪ್ರತಿಭಾವಂತ ಕಲಾವಿದರುಗಳ ಮೊದಲ ಪ್ರಯತ್ನ “ಮಚ್ಚಾ ನೀನ್ ಬದುಕ್ಬೇಕಾ?” ಚಲನಚಿತ್ರದ ಪೋಸ್ಟರ್ ಬಿಡುಗಡೆ – ಸದ್ಯದಲ್ಲೇ ತೆರೆಗೆ -Vishwanews24

ಬೆಂಗಳೂರು : ಕರಾವಳಿಯ ಯುವಕಲಾವಿದರು ಮತ್ತು ಕನ್ನಡದ ಕೆಲ ಹಿರಿಯ ಕಿರುತೆರೆ ಕಲಾವಿದರು ನಟಿಸಿರುವ “ಮಚ್ಚಾ ನೀನ್ ಬದುಕ್ಬೇಕಾ?” ಎಂಬ ಕನ್ನಡ ಚಲನಚಿತ್ರದ ಮೊದಲ ಪೋಸ್ಟರ್‍ನ್ನು ಇಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು.

ಕರಾವಳಿಯ ಕಲಾವಿದರು ಹಾಗೂ ರಂಗಭೂಮಿಯ ಕೆಲ ಹಿರಿಯ ಕಲಾವಿದರು ಸೇರಿ ಅಭಿನಯಿಸಿರುವ ಕನ್ನಡದ ಚಲನಚಿತ್ರದ “ಮಚ್ಚಾ ನೀನ್ ಬದುಕ್ಬೇಕಾ?” ಎಂಬ ಮೊದಲ ಪೋಸ್ಟರ್‍ನ್ನು ಇಂದು ಬಿಡುಗಡೆ ಮಾಡಿದ್ದು, ಯುವ ಕಲಾವಿದರಾದ ರಮೇಶ್ ಶೆಟ್ಟಿ, ಸುರೇಶ್ ಮಲ್ಪೆ, ಶರಣ್ ಉದ್ಯಾವರ ಹಾಗೂ ಅನೇಕ ಯುವ ಕಲಾವಿದರು ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ.

ಮಂಗಳೂರು ,ಪೆಣಂಬೂರು ಜೊತೆಗೆ ಉಡುಪಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದು ಹಾಡನ್ನು ಸಹ ಈಗಾಗಲೇ ಚಿತ್ರತಂಡ ಚಿತ್ರೀಕರಣ ಮುಗಿಸಿರುತ್ತದೆ.

ಮೂಲತಃ ಭಟ್ಕಳ ನಿವಾಸಿಯಾದ ಜಗದೀಶ್ ಡಿ ಎನ್, ಭಟ್ಕಳ್ ರವರು ಮೊಟ್ಟ ಮೊದಲ ಬಾರಿಗೆ ನಿರ್ದೇಶಿಸಿರುವ ಹೊಸ ಕನ್ನಡ ಚಿತ್ರ ಇದಾಗಿದ್ದು, ಯುವ ಪ್ರತಿಭೆಗಳಾದ ಮುರುಡೇಶ್ವರದ ಆನಂದ ನಾಯ್ಕ್ ಎನ್ನುವವರು ಸಹ ಚಿತ್ರದ ಒಂದು ಹಾಡಿಗೆ ಸಾಹಿತ್ಯವನ್ನು ಬರೆದಿರುತ್ತಾರೆ. ಜೊತೆಗೆ ಮಂಗಳೂರಿನ ಉಮಾ ಮಹೇಶ್ವರ ಸಹ-ನಿರ್ಮಾಪಕರು, ಜೈರಾಮ್ ಶೆಟ್ಟಿ ಕುಂದಾಪುರ.

ಲಾಕ್ ಡೌನ್ ಸಂದರ್ಭದಲ್ಲಿ ಶೇಕಡಾ 60ರಷ್ಟು ಚಿತ್ರೀಕರಣ ಮುಗಿಸಿರುವ ಈ ಚಿತ್ರ ತಂಡ ಅಗಷ್ಟ್ ತಿಂಗಳ ಒಳಗೆ ಪೋಸ್ಟ್ ಪ್ರೋಡಕ್ಷನ್ ಕೆಲಸವನ್ನು ಮುಗಿಸಿ ಸೆಪ್ಟೆಂಬರ್ ಅಂತ್ಯದ ಒಳಗೆ ಚಿತ್ರದ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇದು ಐಷಾರಾಮಿ ಜೀವನದ ಆಸೆಗೆ ಕುಟುಂಬಕ್ಕೆ ಆಸರೆ ಆಗಬೇಕಾದ ಒಬ್ಬ ಮಧ್ಯಮ ಕುಟುಂಬದ ಕಾಲೇಜು ಯುವಕ ಹೇಗೆ ಬೆಂಗಳೂರಿನಲ್ಲಿ ಪರಿಸ್ಥಿತಿಗೆ ಬದಲಾಗಿ ಜೀವನದಲ್ಲಿ ಎನಾಗುತ್ತಾನೆ ಎಂಬ ಕಥಾವಸ್ತು ಇದಾಗಿದ್ದು , ಸಮಾಜಕ್ಕೆ ಉತ್ತಮ ರೀತಿಯಲ್ಲಿ ಸಂದೇಶಗಳನ್ನು ಸೇರಿಸಲಾಗಿದೆ. ಕಳೆದ ಕೆಲ ತಿಂಗಳ ಹಿಂದೆ ಬಿಡುಗಡೆ ಆಗಬೇಕಿದ್ದ ಈ ಚಿತ್ರ ಕೊರೊನಾದಿಂದ ಪೊಸ್ಟ್ ಪ್ರೊಡಕ್ಷನ್ ಹಾಗೂ ಔಟ್ ಡೋರ್ ಚಿತ್ರೀಕರಣ ಮುಂದೆ ಹೋಗಿದ್ದ ಕಾರಣ, ಚಿತ್ರದ ಮೊದಲ ಪೋಸ್ಟರ್ ಇಂದು ಬಿಡುಗಡೆಯಾಗಿದೆ.

ನಮ್ಮ ಕರಾವಳಿಯಲ್ಲಿರುವ ಪ್ರತಿಯೊಬ್ಬರು  ಯುವಪ್ರತಿಭೆಗಳಿಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡುವ ಮೂಲಕ ರಾಜ್ಯಮಟ್ಟದಲ್ಲಿ ಇವರನ್ನು ಇನ್ನೊಮ್ಮೆ ಗುರುತಿಸುವ ಹಾಗೆ ಆಗಲಿ ಎಂದು ಭಟ್ಕಳದ ಜಗದೀಶ್.ಡಿ.ಎನ್ ತಿಳಿಸಿದ್ದಾರೆ

ನಮಸ್ಕಾರ ಸ್ನೇಹಿತರೆ, ಇದು ನಮ್ಮ ಉತ್ತರ ಕನ್ನಡದ ಅನೇಕ ಯುವ ಪ್ರತಿಭೆಗಳ ಮೊದಲ ಪ್ರಯತ್ನ *ಮಚ್ಚ ನೀನ್ ಬದುಕ್ಬೇಕಾ?..* ಹಾಗೂ ನಮ್ಮ ಚಿತ್ರದ ಮೊದಲ ಪೊಸ್ಟರ್.ನಿಮ್ಮ ಸ್ನೇಹಿತರಿಗೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮುಲಕ ನಿಮ್ಮ ಆಶೀರ್ವಾದ ಮತ್ತು ಬೆಂಬಲವನ್ನು ನೀಡಿ ಈ ಮೂಲಕ ನಮ್ಮ ಈ ಮೊದಲ ಪ್ರಯತ್ನಕ್ಕೆ ಬೆಂಬಲವಾಗಿ ಜೊತೆಗಿರಲು ಬಯಸುತ್ತೇವೆ ಧನ್ಯವಾದಗಳು..

AJ Creative Minds 2020

 

Vishwa News 24

Recent Posts

ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಮೊಬೈಲ್ ಪತ್ತೆ : ಜೈಲಾಧಿಕಾರಿ ಸಸ್ಪೆಂಡ್, SPಗೆ ಶೋಕಾಸ್ ನೋಟಿಸ್ – vishwanews24

ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಮೊಬೈಲ್ ಪತ್ತೆ : ಜೈಲಾಧಿಕಾರಿ ಸಸ್ಪೆಂಡ್, SPಗೆ ಶೋಕಾಸ್ ನೋಟಿಸ್ ಬೆಂಗಳೂರು: ಜೀವಾವಧಿ ಶಿಕ್ಷೆಗೆ ಗುರಿಯಾಗಿ…

3 minutes ago

ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಬಸ್‌ ಹಾಗೂ ಬೈಕ್ ಢಿಕ್ಕಿ; ಸವಾರ ಮೃತ್ಯು, ಸಹ ಸವಾರ ಗಂಭೀರ -vishwanews24

ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಬಸ್‌ ಹಾಗೂ ಬೈಕ್ ಢಿಕ್ಕಿ; ಸವಾರ ಮೃತ್ಯು, ಸಹ ಸವಾರ ಗಂಭೀರ ಬೆಳ್ತಂಗಡಿ: ನೀರಚಿಲುಮೆಯ ತಿರುವಿನಲ್ಲಿ ಕೆಎಸ್ಸಾರ್ಟಿಸಿ…

21 hours ago

ಮೂಡುಬಿದಿರೆ: ಮನೆಯಲ್ಲಿ ಸಿಲಿಂಡರ್ ಸ್ಫೋಟ; ಮೂವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ -vishwanews24

ಮೂಡುಬಿದಿರೆ: ಮನೆಯಲ್ಲಿ ಸಿಲಿಂಡರ್ ಸ್ಫೋಟ; ಮೂವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ ಮೂಡುಬಿದಿರೆ : ಮನೆಯಲ್ಲಿನ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ…

21 hours ago

ಉಡುಪಿ : ಮರಕ್ಕೆ ಬೈಕ್ ಢಿಕ್ಕಿ ; ಯುವಕ ಮೃತ್ಯು -vishwanews24

ಉಡುಪಿ : ಮರಕ್ಕೆ ಬೈಕ್ ಢಿಕ್ಕಿ ; ಯುವಕ ಮೃತ್ಯು ಉಡುಪಿ: ಮಣಿಪಾಲದಿಂದ ಪರ್ಕಳ ಕಡೆಗೆ ತೆರಳುತ್ತಿದ್ದ ಬುಲೆಟ್ ಬೈಕ್…

21 hours ago

ಉಡುಪಿ: ಸಾಯಿರಾಜ್ ಸೊಸೈಟಿ ಸಿಇಒ ಆತ್ಮಹತ್ಯೆ ಪ್ರಕರಣ:ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಕೋಟ್ಯಂತರ ರೂಪಾಯಿ ನಷ್ಟ ;  ಡೆತ್ ನೋಟ್ ನಲ್ಲಿ ಬಹಿರಂಗ! -vishwanews24

ಉಡುಪಿ: ಸಾಯಿರಾಜ್ ಸೊಸೈಟಿ ಸಿಇಒ ಆತ್ಮಹತ್ಯೆ ಪ್ರಕರಣ.. ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಕೋಟ್ಯಂತರ ರೂಪಾಯಿ ನಷ್ಟ ;  ಡೆತ್ ನೋಟ್ ನಲ್ಲಿ…

22 hours ago

ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಸಿಟಿಯು ನೇತೃತ್ವದಲ್ಲಿ ಜೈಲ್ ಭರೋ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ – vishwanews24

ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಸಿಟಿಯು ನೇತೃತ್ವದಲ್ಲಿ ಜೈಲ್ ಭರೋ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ ಉಡುಪಿ: ಕೇಂದ್ರ…

2 days ago