ಕರಾವಳಿಯ ಯುವ ಪ್ರತಿಭಾವಂತ ಕಲಾವಿದರುಗಳ ಮೊದಲ ಪ್ರಯತ್ನ “ಮಚ್ಚಾ ನೀನ್ ಬದುಕ್ಬೇಕಾ?” ಚಲನಚಿತ್ರದ ಪೋಸ್ಟರ್ ಬಿಡುಗಡೆ – ಸದ್ಯದಲ್ಲೇ ತೆರೆಗೆ -Vishwanews24
ಬೆಂಗಳೂರು : ಕರಾವಳಿಯ ಯುವಕಲಾವಿದರು ಮತ್ತು ಕನ್ನಡದ ಕೆಲ ಹಿರಿಯ ಕಿರುತೆರೆ ಕಲಾವಿದರು ನಟಿಸಿರುವ “ಮಚ್ಚಾ ನೀನ್ ಬದುಕ್ಬೇಕಾ?” ಎಂಬ ಕನ್ನಡ ಚಲನಚಿತ್ರದ ಮೊದಲ ಪೋಸ್ಟರ್ನ್ನು ಇಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು.
ಕರಾವಳಿಯ ಕಲಾವಿದರು ಹಾಗೂ ರಂಗಭೂಮಿಯ ಕೆಲ ಹಿರಿಯ ಕಲಾವಿದರು ಸೇರಿ ಅಭಿನಯಿಸಿರುವ ಕನ್ನಡದ ಚಲನಚಿತ್ರದ “ಮಚ್ಚಾ ನೀನ್ ಬದುಕ್ಬೇಕಾ?” ಎಂಬ ಮೊದಲ ಪೋಸ್ಟರ್ನ್ನು ಇಂದು ಬಿಡುಗಡೆ ಮಾಡಿದ್ದು, ಯುವ ಕಲಾವಿದರಾದ ರಮೇಶ್ ಶೆಟ್ಟಿ, ಸುರೇಶ್ ಮಲ್ಪೆ, ಶರಣ್ ಉದ್ಯಾವರ ಹಾಗೂ ಅನೇಕ ಯುವ ಕಲಾವಿದರು ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ.
ಮಂಗಳೂರು ,ಪೆಣಂಬೂರು ಜೊತೆಗೆ ಉಡುಪಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದು ಹಾಡನ್ನು ಸಹ ಈಗಾಗಲೇ ಚಿತ್ರತಂಡ ಚಿತ್ರೀಕರಣ ಮುಗಿಸಿರುತ್ತದೆ.
ಮೂಲತಃ ಭಟ್ಕಳ ನಿವಾಸಿಯಾದ ಜಗದೀಶ್ ಡಿ ಎನ್, ಭಟ್ಕಳ್ ರವರು ಮೊಟ್ಟ ಮೊದಲ ಬಾರಿಗೆ ನಿರ್ದೇಶಿಸಿರುವ ಹೊಸ ಕನ್ನಡ ಚಿತ್ರ ಇದಾಗಿದ್ದು, ಯುವ ಪ್ರತಿಭೆಗಳಾದ ಮುರುಡೇಶ್ವರದ ಆನಂದ ನಾಯ್ಕ್ ಎನ್ನುವವರು ಸಹ ಚಿತ್ರದ ಒಂದು ಹಾಡಿಗೆ ಸಾಹಿತ್ಯವನ್ನು ಬರೆದಿರುತ್ತಾರೆ. ಜೊತೆಗೆ ಮಂಗಳೂರಿನ ಉಮಾ ಮಹೇಶ್ವರ ಸಹ-ನಿರ್ಮಾಪಕರು, ಜೈರಾಮ್ ಶೆಟ್ಟಿ ಕುಂದಾಪುರ.
ಲಾಕ್ ಡೌನ್ ಸಂದರ್ಭದಲ್ಲಿ ಶೇಕಡಾ 60ರಷ್ಟು ಚಿತ್ರೀಕರಣ ಮುಗಿಸಿರುವ ಈ ಚಿತ್ರ ತಂಡ ಅಗಷ್ಟ್ ತಿಂಗಳ ಒಳಗೆ ಪೋಸ್ಟ್ ಪ್ರೋಡಕ್ಷನ್ ಕೆಲಸವನ್ನು ಮುಗಿಸಿ ಸೆಪ್ಟೆಂಬರ್ ಅಂತ್ಯದ ಒಳಗೆ ಚಿತ್ರದ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇದು ಐಷಾರಾಮಿ ಜೀವನದ ಆಸೆಗೆ ಕುಟುಂಬಕ್ಕೆ ಆಸರೆ ಆಗಬೇಕಾದ ಒಬ್ಬ ಮಧ್ಯಮ ಕುಟುಂಬದ ಕಾಲೇಜು ಯುವಕ ಹೇಗೆ ಬೆಂಗಳೂರಿನಲ್ಲಿ ಪರಿಸ್ಥಿತಿಗೆ ಬದಲಾಗಿ ಜೀವನದಲ್ಲಿ ಎನಾಗುತ್ತಾನೆ ಎಂಬ ಕಥಾವಸ್ತು ಇದಾಗಿದ್ದು , ಸಮಾಜಕ್ಕೆ ಉತ್ತಮ ರೀತಿಯಲ್ಲಿ ಸಂದೇಶಗಳನ್ನು ಸೇರಿಸಲಾಗಿದೆ. ಕಳೆದ ಕೆಲ ತಿಂಗಳ ಹಿಂದೆ ಬಿಡುಗಡೆ ಆಗಬೇಕಿದ್ದ ಈ ಚಿತ್ರ ಕೊರೊನಾದಿಂದ ಪೊಸ್ಟ್ ಪ್ರೊಡಕ್ಷನ್ ಹಾಗೂ ಔಟ್ ಡೋರ್ ಚಿತ್ರೀಕರಣ ಮುಂದೆ ಹೋಗಿದ್ದ ಕಾರಣ, ಚಿತ್ರದ ಮೊದಲ ಪೋಸ್ಟರ್ ಇಂದು ಬಿಡುಗಡೆಯಾಗಿದೆ.
ನಮ್ಮ ಕರಾವಳಿಯಲ್ಲಿರುವ ಪ್ರತಿಯೊಬ್ಬರು ಯುವಪ್ರತಿಭೆಗಳಿಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡುವ ಮೂಲಕ ರಾಜ್ಯಮಟ್ಟದಲ್ಲಿ ಇವರನ್ನು ಇನ್ನೊಮ್ಮೆ ಗುರುತಿಸುವ ಹಾಗೆ ಆಗಲಿ ಎಂದು ಭಟ್ಕಳದ ಜಗದೀಶ್.ಡಿ.ಎನ್ ತಿಳಿಸಿದ್ದಾರೆ
ರಾಜ್ಯದ ಹಿತಕ್ಕಾಗಿ ಬಂದ್ ವಾಪಸ್ ಪಡೆದಿರುವ ಎಲ್ಲಾ ಸಂಘಟನೆಗಳಿಗೆ ಧನ್ಯವಾದಗಳು :ಸಿಎಂ ಬೆಂಗಳೂರು: ʻರಾಜ್ಯದ ಹಿತಕ್ಕಾಗಿ ಬಂದ್ ವಾಪಸ್ ಪಡೆದಿರುವ…
ಉಡುಪಿಯ ಪ್ರಥಮ ಮಹಿಳಾ ಕಮರ್ಷಿಯಲ್ ಪೈಲಟ್ ಆಗಿ ಕೌಡೂರಿನ ಶೈನಿ ಅಸ್ಮಾ ಸಲ್ಡಾನಾ ಕಾರ್ಕಳ: ಕೌಡೂರು ರಂಗನಪಲೆಯ ಶೈನಿ ಅಸ್ಮಾ…
ನವಿಮುಂಬಯಿ: ಉಡುಪಿ ಪುತ್ತಿಗೆ ಶ್ರೀಪಾದರಿಂದ ಚಾತುರ್ಮಾಸ ವ್ರತ ಸ್ವೀಕಾರ ಉಡುಪಿ: ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಬುಧವಾರ…
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಮಣಿಪಾಲದಲ್ಲಿ ಬೃಹತ್ ತಿರಂಗಾ ಯಾತ್ರೆ ಉಡುಪಿ: ಸ್ವಾತಂತ್ರ್ಯ ಹೋರಾಟವನ್ನು ಸ್ಮರಿಸುವ ಹಾಗೂ ನಾಗರಿಕರಲ್ಲಿ…
ಭಜರಂಗದಳ ಮುಖಂಡ ಪುನೀತ್ ಅತ್ತಾವರಗೆ 3 ತಿಂಗಳು ಉಡುಪಿ ಜಿಲ್ಲೆ ಪ್ರವೇಶ ನಿರ್ಬಂಧ : ಜಿಲ್ಲಾಧಿಕಾರಿ ಆದೇಶ ಉಡುಪಿ: ಕಾನೂನು…
USನಲ್ಲಿ ಹೆತ್ತತಾಯಿ-ತಮ್ಮನನ್ನೇ ಕೊಂದ ಭಾರತೀಯ ಮೂಲದ ಬಾಲಕ .. ಹತ್ಯೆಗೆ Chat GPT ಸೇರಿದಂತೆ AI ಬಳಕೆ ಆರೋಪ ವಾಷಿಂಗ್ಟನ್:…