ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ ಪ್ರಕಟ ಕಾಪುವಿನ ಪಿಲಿಕೋಲ ದೈವ ನರ್ತಕ ಗುಡ್ಡ ಪಾನರ ಗೆ ಪ್ರಶಸ್ತಿಯ ಗರಿ :vishwanews24
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ ಪ್ರಕಟ ಕಾಪುವಿನ ಪಿಲಿಕೋಲ ದೈವ ನರ್ತಕ ಗುಡ್ಡ ಪಾನರ ಗೆ ಪ್ರಶಸ್ತಿಯ ಗರಿ
ಕಾಪು : ಉಡುಪಿ ಜಿಲ್ಲೆ ಕಾಪು ತಾಲೂಕಿನ ಮೂಳೂರು ಎಂಬ ಗ್ರಾಮದ ನಾನು ಪಾನರ ಮತ್ತು ರುಕ್ಕು ಪಾನರ್ತಿ ಇವರ ಎರಡನೆಯ ಸುಪುತ್ರನಾದ ಗುಡ್ಡಪಾನರ ಇವರಿಗೆ ಜಾನಪದ ವಿಭಾಗದಲ್ಲಿ 2022ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಸುಮಾರು 43 ವರ್ಷಗಳಿಂದ ದೈವ ನರ್ತಕ ರಾಗಿ ತುಳುನಾಡಿನಲ್ಲಿ ಸೇವೆ ಸಲ್ಲಿಸುತ್ತಿದ್ದು ಕಳೆದ 38 ವರ್ಷಗಳಲ್ಲಿ ಕಾಪು ಗುರು ಬ್ರಹ್ಮ ಮುಗ್ಗೆರ್ಕಳ ದೈವಸ್ಥಾನದಲ್ಲಿ ಪಿಲಿಚಂಡಿ ದೈವಕ್ಕೆ ದೈವ ನರ್ತಕರಾಗಿ ಸೇವೆಯನ್ನ ಸಲ್ಲಿಸುತ್ತಾ ಬರುತ್ತಿದ್ದಾರೆ.

ಕಾಪುವಿನ ಪಿಲಿಚಂಡಿ ದೈವಸ್ಥಾನವು ತುಳುನಾಡಿನ ಐತಿಹಾಸಿಕ ದೈವಸ್ಥಾನಗಳಲ್ಲಿ ಒಂದಾಗಿದೆ.
