ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಶತಃಸಿದ್ಧ : ರಾಹುಲ್‌ ಗಾಂಧಿ -Vishwanews24

Featured, ರಾಷ್ಟ್ರ ನ್ಯೂಸ್

ಭೋಪಾಲ್‌: ಪ್ರಧಾನಿ ನರೇಂದ್ರ ಮೋದಿ ನಿವಾಸದ ಕಾವಲು ಕಾಯುವ ಭದ್ರತಾ ಸಿಬ್ಬಂದಿ ಸಹ ‘ಚೌಕಿದಾರ್‌ ಚೋರ್‌ ಹೈ’ ಎನ್ನುತ್ತಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಮಧ್ಯಪ್ರದೇಶದ ವಿವಿಧೆಡೆ ಮಂಗಳವಾರ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಅವರು, ”ದಿಲ್ಲಿಯ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಪ್ರಧಾನಿ ನಿವಾಸದ ಎದುರು ಹೋಗಿ ನೀವು ಸುಮ್ಮನೇ ಚೌಕಿದಾರ್‌ ಎಂದರೂ ಸಾಕು.. ನನಗೆ ವಿಶ್ವಾಸವಿದೆ… ಅಲ್ಲಿನ ಭದ್ರತಾ ಸಿಬ್ಬಂದಿ ‘ಚೋರ್‌ ಹೈ’ ಎಂದು ಪೂರ್ಣಗೊಳಿಸುತ್ತಾರೆ,” ಎಂದರು.

ಲೋಕಸಭೆಗೆ ನಾಲ್ಕು ಹಂತದ ಚುನಾವಣೆ ನಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಮುಖ ಬಿಳುಚಿಕೊಂಡಿದ್ದು, ಸೋಲು ಕಟ್ಟಿಟ್ಟ ಬುತ್ತಿ ಎನ್ನುವುದು ಅವರಿಗೆ ಮನವರಿಕೆಯಾಗಿದೆ ಎಂದು ರಾಹುಲ್‌ ಗಾಂಧಿ ಹೇಳಿದರು.”ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಶತಃಸಿದ್ಧ.

ಆ ನಂತರ ದೇಶದ ಯಾವ ರೈತನೂ ಸಾಲ ಕಟ್ಟಿಲ್ಲ ಎಂಬ ಕಾರಣದಿಂದ ಜೈಲುಪಾಲಾಗುವ ಸನ್ನಿವೇಶ ಇರುವುದಿಲ್ಲ,” ಎಂದು ಭರವಸ ನೀಡಿದರು.