ಕಾಂಗ್ರೆಸ್ ಪಕ್ಷದ ಅನುಮತಿ ಇಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ- ಹೆಚ್. ಡಿ. ಕುಮಾರಸ್ವಾಮಿ

Featured, ರಾಜ್ಯ ನ್ಯೂಸ್

 ಕಾಂಗ್ರೆಸ್ ಪಕ್ಷದ ಅವಲಂಬಿತ ಮುಖ್ಯಮಂತ್ರಿ ತಾನಾಗಿದ್ದು,  ಆ ಪಕ್ಷದ ಅನುಮತಿ ಪಡೆಯದೇ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ  ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯದ ಅಭಿವೃದ್ದಿ ವಿಚಾರದಲ್ಲಿ ನನ್ನ ಜವಾಬ್ದಾರಿ ಬೇರೆಯಾಗಿರುತ್ತದೆ. ಆದರೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಬೇಕಾದ್ದರೆ, ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿಯೇ  ಇರಬೇಕಾಗುತ್ತದೆ ಎಂದು ಕುಮಾರಸ್ವಾಮಿ ಪುನರ್ ಉಚ್ಚರಿಸಿದರು.ಜೆಡಿಎಸ್ ಪಕ್ಷವನ್ನು ಸ್ವಂತ ಬಲದ ಆಧಾರದ ಮೇಲೆ ಅಧಿಕಾರಕ್ಕೆ ತರುವಂತೆ ಜನತೆಯಲ್ಲಿ ಮನವಿ ಮಾಡಿದ್ದೇ. ಆದರೆ,  ಈಗ ಕಾಂಗ್ರೆಸ್ ನಾಯಕರು ಮೇಲೆ ಅವಲಿಂಬಿತವಾಗುವಂತೆ ಮಾಡಿದ್ದಾರೆ. ಇದು ನನ್ನ ಸ್ವತಂತ್ರ ಸರ್ಕಾರವಲ್ಲ,  ರಾಜ್ಯದ 6 ಕೋಟಿ ಜನಸಂಖ್ಯೆಯ ಕಾರಣದಿಂದ ನಾನು ಇಲ್ಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.