ನವದೆಹಲಿ, : “ನಾನು ಈ ಹಿಂದೆ ನೀಡಿದ ಭರವಸೆಗಳನ್ನೆಲ್ಲ ಈಡೇರಿಸಿದ್ದೇನೆ, ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿದ್ದೇನೆ ಎಂದು ಹೇಳಿಕೊಳ್ಳುತ್ತಿಲ್ಲ. ಕಾಂಗ್ರೆಸ್ ಕಳೆದ 75 ವರ್ಷಗಳಲ್ಲಿ ಮಾಡಿರದ ಕೆಲಸಗಳನ್ನು ಕೇವಲ 5 ವರ್ಷಗಳಲ್ಲಿ ಮಾಡಿ ಮುಗಿಸಲು ಹೇಗೆ ಸಾಧ್ಯ? ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.
ಬಹಳಷ್ಟನ್ನು ಮಾಡಿದ್ದೇವೆ, ಇನ್ನೂ ಬಹಳಷ್ಟನ್ನು ಮಾಡುವ ಸಾಮರ್ಥ್ಯವಿದೆ ಮತ್ತು ಇದಕ್ಕಾಗಿ ನಿರಂತರ ಪ್ರಯತ್ನಗಳ ಅಗತ್ಯವಿದೆ. ಹೀಗಾಗಿ ನಿಮ್ಮ ಆಶೀರ್ವಾದಗಳ ಅಗತ್ಯವೂ ನನಗಿದೆ ”ಎಂದು ಅವರು ಹೇಳಿದರು.
ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಬಾಕಿ ಉಳಿದಿವೆ. ಇನ್ನೂ ಸಾಕಷ್ಟು ಕೆಲಸ ಮಾಡುವ ಸಾಧ್ಯತೆ ಇದೆ. ಅದಕ್ಕಾಗಿ ನಿರಂತರ ಶ್ರಮ ಮಾಡುವ ಅಗತ್ಯವಿದೆ. ಮತ್ತು ಇದಕ್ಕಾಗಿ ನನಗೆ ಜನರ ಆಶೀರ್ವಾದ ಬೇಕು” ಎಂದು ಮೋದಿ ಹೇಳಿದ್ದಾರೆ. ಹೇಳಿದ ಕೆಲಸ ಪೂರ್ಣಗೊಳಿಸಲು ಮುಂದಿನ ಅವಧಿಯೂ ಬೇಕಾಗಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಮೋದಿ ಅವರು ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಭಯೋತ್ಪಾದನೆ, ಬೆಲೆ ಏರಿಕೆ, ಹಿಂಸಾಚಾರ, ಭ್ರಷ್ಟಾಚಾರ, ಕಪ್ಪು ಹಣ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹೆಚ್ಚಿತ್ತು. ದೇಶದ ಸಂಪತ್ತು, ವಿಶ್ವಾಸಾರ್ಹತೆ, ಸಶಸ್ತ್ರ ಪಡೆಯ ನೈತಿಕತೆ, ಪ್ರಾಮಾಣಿಕತೆಗೆ ಗೌರವ ಕಡಿಮೆ ಆಗಿತ್ತು ಎಂದು ಪ್ರಧಾನಿ ಮೋದಿ ಹೇಳಿದರು.
ಉಡುಪಿ : ವ್ಯಕ್ತಿ ನಾಪತ್ತೆ ಉಡುಪಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ವಿಶ್ವನಾಥ ಶೆಟ್ಟಿ (38) ಎಂಬ…
ಬೈಂದೂರು: ಅಲೆಗಳ ಹೊಡೆತಕ್ಕೆ ಮಗುಚಿ ಬಿದ್ದ ಮೀನುಗಾರಿಕಾ ದೋಣಿ ; ಐವರು ಮೀನುಗಾರರು ಪಾರು ಬೈಂದೂರು : ಪ್ರಬಲ ಅಲೆಗಳ…
ಬಂಟ್ವಾಳ: ಆಕಸ್ಮಿಕ ಬೆಂಕಿ ಅವಘಡ; ಬಚ್ಚಲು ಮನೆ ಮತ್ತು ಹಸುವಿನ ಕೊಟ್ಟಿಗೆ ಭಸ್ಮ ; ಅದೃಷ್ಟವಶಾತ್ ಜಾನುವಾರುಗಳು ಅಪಾಯದಿಂದ ಪಾರು …
ಉಡುಪಿ : ಪರ್ಕಳದಲ್ಲಿ ಮತ್ತೆ ಬೀಡಾಡಿ ಗೋವುಗಳಿಗೆ ಚರ್ಮ ಗಂಟು ರೋಗದ ಭೀತಿ; ಮುನ್ನೆಚ್ಚರಿಕೆ ಕ್ರಮಕ್ಕೆ ಒತ್ತಾಯ ಉಡುಪಿ: ಪರ್ಕಳದಲ್ಲಿ…
ಜಲಪಾತಗಳಲ್ಲಿ ಪ್ರವಾಸಿಗರ ಹುಚ್ಚಾಟ ; ಅಪಾಯಕಾರಿ ಸಾಹಸ , ಸೆಲ್ಫಿ, ಈಜಾಟ : ಸ್ಥಳೀಯರ ಆಕ್ರೋಶ ಮಡಿಕೇರಿ: ಮಳೆಗಾಲದಲ್ಲಿ ಮೈದುಂಬಿ…
ಆಸ್ಪತ್ರೆ, ಶಾಲಾ ಆವರಣ ಕ್ಯಾಂಟೀನ್ಗಳಲ್ಲಿ ಜಂಕ್ ಫುಡ್ ನಿಷೇಧ: ಆರೋಗ್ಯ ಸಚಿವ ಯುಟಿ ಖಾದರ್ ಮಂಗಳೂರು: ರಾಜ್ಯದ ಎಲ್ಲ ಆಸ್ಪತ್ರೆ…