ಕಾನೂನಿನ ಮುಂದೆ ಯಾರು ದೊಡ್ಡವರಲ್ಲ :ಡಿಕೆಶಿ ಗೆ ಶ್ರೀರಾಮಲು -Vishwanews24

Featured, ರಾಜ್ಯ ನ್ಯೂಸ್

ವಿಜಯಪುರ : ಕಾನೂನಿನ ಮುಂದೆ ಯಾರು ದೊಡ್ಡವರಲ್ಲ. ಡಿಕೆ ಶಿವಕುಮಾರ್​ ತಪ್ಪಿ ಮಾಡಿಲ್ಲ ಎಂದರೇ ಚಿಂತಿಸುವ ಅಗತ್ಯವಿಲ್ಲ. ಒಂದು ವೇಳೆ ಅವರು ಉಪ್ಪು ತಿಂದಿದ್ದರೆ ನೀರು ಕುಡಿಯುತ್ತಾರೆ ಎಂದು ಸಚಿವ ಬಿ ಶ್ರೀರಾಮಲು ಟಾಂಗ್ ನೀಡಿದ್ದಾರೆ.

ಮಾಧ್ಯಮದ ಎದುರು ಮಾತನಾಡಿದ ಅವರು, ಡಿಕೆ ಶಿವಕುಮಾರ್​ ರಾಜಕಾರಣಿ ಹೊರತಾಗಿ ಒಬ್ಬ ಉದ್ಯಮಿ ಕೂಡ. ಅವರು ಐಟಿ ಅಧಿಕಾರಿಗಳ ದಾಳಿ ವೇಳೆ ಪೇಪರ್​ ಹರಿದು ಹಾಕಿರುವ ಘಟನೆ ಎಲ್ಲರಿಗೂ ತಿಳಿದಿದೆ. ಅವರು ಎಲ್ಲೋ ಮಾಡಿದ ತಪ್ಪನ್ನು ರಾಜಕೀಯಕ್ಕೆ ಸಂಬಂಧ ಕಲ್ಪಿಸುತ್ತಿದ್ದಾರೆ. ಅವರ ಮೇಲೆ ಹಗೆತನ ಮಾಡುವ ಅಗತ್ಯ ಇಲ್ಲ. ಈ ಕುರಿತು ತನಿಖೆ ನಡೆಯಲಿ ತಪ್ಪಾಗಿದ್ದರೆ ಶಿಕ್ಷೆಯಾಗಲಿ ಎಂದರು.

ಕಾನೂನುನಿಂದ ತಪ್ಪಿಸಿಕೊಳ್ಳುತ್ತೇವೆ ಎಂಬುದುದು ಸುಳ್ಳು. ಕಾನೂನು ಮುಂದೆ ಎಲ್ಲರೂ ಒಂದೇ. ಅವರು ಮಾಡಿರುವ ಅಕ್ರಮಗಳನ್ನು ನೋಡಿದ್ದೇವೆ. ಗುಜರಾತ್​ ಶಾಸಕರನ್ನು ಕರೆದುಕೊಂಡು ಬಂದು ರೆಸಾರ್ಟ್​ನಲ್ಲಿಟ್ಟುಕೊಂಡಿದನ್ನು ನೋಡಿದ್ದೇವೆ. ಭ್ರಷ್ಟಾಚಾರ, ಹವಾಲಾ ದಂಧೆ, ಅನಧಿಕೃತ ಹಣದ ವ್ಯವಹಾರ ಮಾಡಿದವರ ವಿರುದ್ಧ ಈ ಹಿಂದೆಯೂ ಕ್ರಮ ಕೈಗೊಳ್ಳಾಗಿದೆ. ಈಗಲೂ ಕಾನೂನು ಕ್ರಮಕ್ಕೆ ಮುಂದಾಗುತ್ತದೆ ಎಂದರು.