Featured

ಕಾಪು:ಪಂಚಾಯತ್ ಶಿಫಾರಸು ಮಾಡಿದ್ರೆ  ಪಟ್ಟಣ ಪಂಚಾಯತ್ ಆಗಿ ಸುಂದರ ಶಿರ್ವ ನಿರ್ಮಾಣ : ವಿನಯ್ ಕುಮಾರ್ ಸೊರಕೆ – Vishwanews24

ಕಾಪು:ಪಂಚಾಯತ್ ಶಿಫಾರಸು ಮಾಡಿದ್ರೆ  ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯತ್ ಆಗಿ ಸುಂದರ ಶಿರ್ವ ನಿರ್ಮಾಣ : ವಿನಯ್ ಕುಮಾರ್ ಸೊರಕೆ

ಕಾಪು: ಪಂಚಾಯತ್ ಶಿಫಾರಸು ಮಾಡಿದ್ರೆ ಮುಂದಿನ ದಿನಗಳಲ್ಲಿ ಶಿರ್ವವನ್ನು ಪಟ್ಟಣ ಪಂಚಾಯತ್ ಮಾಡೋ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು ಅಂತಾ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

ಶಿರ್ವದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಕಾಪು ಕ್ಷೇತ್ರಕ್ಕೆ ಶಿರ್ವ ಕೇಂದ್ರ ಸ್ಥಳ. ಶಿರ್ವ ಪಟ್ಟಣ ಪಂಚಾಯತ್ ಮಾಡುವಷ್ಟು ಎಲ್ಲಾ ಅರ್ಹತೆವನ್ನು,ಅವಕಾಶವನ್ನು ಹೊಂದಿದೆ. ಪಂಚಾಯತ್ ಶಿಫಾರಸು ಮಾಡಿದ್ರೆ ಶಿರ್ವಕ್ಕೆ ಇನ್ನಷ್ಟು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಪಟ್ಟಣ ಪಂಚಾಯತ್ ಆಗಿ ಸುಂದರ ಶಿರ್ವವನ್ನು ಮಾಡಲು ಸಾಧ್ಯವಿದೆ ಅಂತಾ ಸೊರಕೆ ಹೇಳಿದ್ದಾರೆ.ಪ್ರತೀ ಪಂಚಾಯತ್‌ಗೆ ಮೂರು ತಿಂಗಳಿಗೊಮ್ಮೆ ಭೇಟಿ ನೀಡುತ್ತದೆ ಎಂದರು. ಜನಸಂಪರ್ಕ ಸಭೆ, ಪಂಚಾಯತ್ ಭೇಟಿ ಮಾಡೋದು ಇದು‌ ಶಾಸಕರ ಜವಬ್ದಾರಿ. ನಾನು ಶಾಸಕನಾಗಿದ್ದಾಗ ಮೂರು ತಿಂಗಳಿಗೊಮ್ಮ ಪಂಚಾಯತ್ ಗೆ ಭೇಟಿ ಕೊಡೋದು. ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಸ್ಥಳೀಯ ಪಂಚಾಯತ್ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವ ಕೆಲಸ ಮಾಡ್ತಾ ಇದ್ದೆ. ಕಳೆದ 5 ವರ್ಷಗಳಿಂದ ಅವೆಲ್ಲವೂ‌ ನಿಂತು‌ಹೋಗಿದೆ. .‌ಕಾಮಗಾರಿಗಳಲ್ಲಿ‌ಕಮಿಷನ್ ಹೊಡೆಯೋ‌ ಕೆಲಸ.. ತಾಲೂಕು ಕಚೇರಿಗಳಲ್ಲಿ ಬ್ರೋಕರ್ ಗಳೇ ತುಂಬಿ‌ಹೋಗಿ ಜನರ ಕೆಲಸಗಳು ಆಗ್ತಾ ಇಲ್ಲ. ಎಲ್ಲದಕ್ಕೂ ಕಡಿವಾಣ ಹಾಕೋ‌‌ ಕೆಲಸವಾಗಬೇಕಿದೆ ಎಂದರು.

ಜನರ ಕೆಲಸಕ್ಕೆ ಆದ್ಯತೆ ಸಿಗಬೇಕಾಗಿದೆ ಅಂತಾ ಸೊರಕೆ ಹೇಳಿದ್ದಾರೆ. ಈ ದೇಶದ ಬೆಳವಣಿಗೆಯಲ್ಲಿ ಕಾರ್ಮಿಕ‌ ವರ್ಗದ ಶ್ರಮ ಬಹಳಷ್ಟು ಇದೆ.ಕಾರ್ಮಿಕರನ್ನು ತುಳಿಯೋ‌ ಕೆಲಸ ಕೂಡಾ ಆಡಳಿತರೂಡ ಸರ್ಕಾರ ಮಾಡ್ತಿದೆ ಅಂತಾ ಅವರು ಆರೋಪ ಮಾಡಿದರು.

ಪ್ರಾಕೃತಿಕವಾಗಿ ಮಾನವ ಸಂಪನ್ಮೂಲವನ್ನು ಹೊಂದಿದ‌ ಊರು ಕಾಪು. ವಿಭಿನ್ನ ಸಮುದಾಯವನ್ನು ಹೊಂದಿದ ಊರು ಕಾಪು.ಕುಡಿಯುವ ನೀರಿನ‌ ಸಮಸ್ಯೆ ಮನೆ ನಿವೇಶನದ ಅರ್ಜಿ‌ ಬಾಕಿ‌ ಇದೆ. ಪಾದೂರಿನಲ್ಲಿ‌ ಕಚ್ಛಾ ತೈಲ ಘಟಕದ ಸಂತ್ರಸ್ತರಿಗೆ ದೇಶದಲ್ಲಿ‌ ಎಲ್ಲೂ ಸಿಗದ ಪರಿಹಾರವನ್ನು ಕೊಡಿಸುವ ಕೆಲಸ ಮಾಡಿದ್ದೇನೆ ಎಂದರು.

ಕೈಗಾರಿಕೆಗಳಲ್ಲಿ ಊರಿನ‌ ಜನರಿಗೆ ಉದ್ಯೋಗ ಕೆಲಸ ಕೊಡೋ ಕೆಲಸ ಹೆಚ್ಚು ಆಗಬೇಕು.‌ ಮನೆಗೊಂದು‌ ಉದ್ಯೋಗ ಕೊಡುವ ಬಂಪರ್ ಯೋಜನೆಯನ್ನು‌ ನಾವು ನೀಡುವುದಾಗಿ ವಿನಯ ಕುಮಾರ್ ಸೊರಕೆ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ ಕಾಂಗ್ರೆಸ್ ಸರಕಾರ ಬಂದ್ರೆ ಬಡವರಿಗೆ ಜನ‌ಸಾಮಾನ್ಯರಿಗೆ ಸಹಾಯ ಆಗುತ್ತದೆ. ಸೊರಕೆಯವರು ಪ್ರತೀ ಪಂಚಾಯತ್ ಮಟ್ಟಕ್ಕೆ ಬಂದು ಎಲ್ಲಾ ವ್ಯವಸ್ಥೆ ಗಳನ್ನು ಕಲ್ಪಿಸುವ ಕೆಲಸ‌ಮಾಡಿದ್ದಾರೆ. ಶಿರ್ವ ಗ್ರಾಮ ಕಾಂಗ್ರೆಸ್ ನ‌ ಭದ್ರಕೋಟೆ. ಶಿರ್ವ ಗ್ರಾಮದಲ್ಲಿ‌ ಕಾಂಗ್ರೆಸ್‌ನ ಒಂದು‌ ಓಟು‌ ಈ‌ ಬಾರಿ‌ ಮಿಸ್ ಆಗೋದಿಲ್ಲ ಅನ್ನೊ‌ ನಂಬಿಕೆ ಇದೆ ಅಂತಾ ಐವನ್ ಡಿಸೋಜ ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಮುಖಂಡರಾದ ನವೀನ್ ಡಿಸೊಜ, ರತನ್ ಶೆಟ್ಟಿ, ‌ನವೀನ್ ಚಂದ್ರ ಶೆಟ್ಟಿ, ದಿನೇಶ್ ಕೋಟ್ಯಾನ್ , ಜಿತೇಂದ್ರ ಪುಟಾರ್ಡೊ, ಪ್ರಕಾಶ್, ಗೀತಾ ವಾಗ್ಲೆ, ಪ್ರಭಾ ಶೆಟ್ಟಿ, ಪ್ರಶಾಂತ್ ಜತ್ತನ್, ವಿಲ್ಸನ್ ಮೊದಲಾದವರು ಉಪಸ್ಥಿತರಿದ್ದರು.

Vishwa News 24

Recent Posts

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ -vishwanews24

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…

14 hours ago

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ -vishwanews24

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…

14 hours ago

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ -vishwanews24

ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…

3 days ago

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

4 days ago

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ – vishwanews24

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…

4 days ago

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ – vishwanews24

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…

4 days ago