ಕಾಪು : ಎಲ್ಲೂರು ಮಾಣಿಯೂರಿನಲ್ಲಿ ಮನೆ ಆವರಣದಿಂದ ನಾಯಿಯನ್ನು ಹೊತ್ತೊಯ್ದ ಚಿರತೆ ; ಸ್ಥಳೀಯರಲ್ಲಿ ಆತಂಕ – vishwanews24

Featured, ಉಡುಪಿ

ಕಾಪು : ಎಲ್ಲೂರು ಮಾಣಿಯೂರಿನಲ್ಲಿ ಮನೆ ಆವರಣದಿಂದ ನಾಯಿಯನ್ನು ಹೊತ್ತೊಯ್ದ ಚಿರತೆ ; ಸ್ಥಳೀಯರಲ್ಲಿ ಆತಂಕ

ಕಾಪು: ತಾಲೂಕಿನ ಎಲ್ಲೂರು ಮಾಣಿಯೂರಿನಲ್ಲಿರುವ ಮುರಲಿ ಶೆಟ್ಟಿ ಅವರ ಮನೆಯ ಆವರಣಕ್ಕೆ ಬಂದ ಚಿರತೆಯೊಂದು ನಾಯಿಯನ್ನು ಹೊತ್ತೊಯ್ದ ಘಟನೆ ಗುರುವಾರ ಸಂಭವಿಸಿದೆ.

ರಾತ್ರಿ 9.30 ರ ಸುಮಾರಿಗೆ ಮನೆ ಮಂದಿ ಬಾಗಿಲು ಹಾಕಿ ಮನೆಯೊಳಗೆ ಭಜನೆಯಲ್ಲಿ ನಿರತರಾಗಿದ್ದಾಗ ಈ ಘಟನೆ ನಡೆದಿದೆ.

ಬೊಗಳುತ್ತಿದ್ದ ನಾಯಿ ನಾಪತ್ತೆಯಾಗಿದ್ದನ್ನು ಗಮನಿಸಿ ಸಿಸಿಟಿವಿಯನ್ನು ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಚಿರತೆ ಬಂದಿರುವ ಸುದ್ದಿ ಹಬ್ಬಿ ಸ್ಥಳೀಯರಲ್ಲಿ ಆತಂಕ ಮೂಡಿದೆ.

ಮಣಿಪಾಲ: ಬಿಯರ್ ಬಾಟಲಿಯಿಂದ ಕತ್ತು ಕೊಯ್ದು ಹೋಟೆಲ್ ಕಾರ್ಮಿಕನ ಕೊಲೆ  – vishwanews24

Leave a Reply