ಕಾಪು ಕರಾವಳಿ ವಾರ್ಡಿನಲ್ಲಿ ಮೀನುಗಾರ ಬಂಧುಗಳ ಜತೆ ಸೇರಿ ಕಾಪು ದಿವಾಕರ ಶೆಟ್ಟಿ ಮತಯಾಚನೆ- ಉತ್ತಮ ಪ್ರತಿಕ್ರೀಯೆ.vishwanews24
ಕಾಪು ಕರಾವಳಿ ವಾರ್ಡಿನಲ್ಲಿ ಮೀನುಗಾರ ಬಂಧುಗಳ ಜತೆ ಸೇರಿ ಕಾಪು ದಿವಾಕರ ಶೆಟ್ಟಿ ಮತಯಾಚನೆ- ಉತ್ತಮ ಪ್ರತಿಕ್ರೀಯೆ.
ಕಾಪು : ಪುರಸಭಾ ಚುನಾವಣೆ ಹಿನ್ನಲೆಯಲ್ಲಿ ೨೩ ವಾರ್ಡಿನಲ್ಲಿ ಕಾಂಗ್ರೇಸ್ ಪಕ್ಷದ ಮತಯಾಚನೆ ಭರದಿಂದ ಸಾಗುತ್ತಿದೆ.ಈ ಪೈಕಿ ಬಿಜೆಪಿಯ ಭದ್ರಕೋಟೆ ಅನಿಸಿರುವ ಕರಾವಳಿ ವಾರ್ಡಿನಲ್ಲಿಂದು ಅಭ್ಯರ್ಥಿ ಅರುಣ್ ಶೆಟ್ಟಿ ಪರ ಮೀನುಗಾರ ಬಂಧುಗಳೊAದಿಗೆ ಕಾಂಗ್ರೇಸ್ ಹಿರಿಯ ಮುಖಂಡ ಕಾಪು ದಿವಾಕರ ಶೆಟ್ಟಿ ಮತಯಾಚನೆ ನಡೆಸಿದರು.

ಈ ಸಂಧರ್ಭ ಮಾಧ್ಯಮಕ್ಕೆ ಪ್ರತಿಕ್ರೀಯೆ ನೀಡಿ” ಈ ಬಾರಿ ಕಾಪು ಪುರಸಭೆ ಕಾಂಗ್ರೇಸ್ ಆಡಳಿತದ ಚುಕ್ಕಾಣಿ ಹಿಡಿಯಬೇಕು ಇಲ್ಲವಾದಲ್ಲಿ ಬಡವರ, ಮಧ್ಯಮ ವರ್ಗದ ಜನರ ಸಮಸ್ಯೆ ಸಮಸ್ಯೆಯಾಗಿಯೇ ಉಳಿದುಹೋಗುತ್ತೆ ಹಾಗೇ ಆಗಬಾರದಾದರೆ ಪುರಸಭೆ ಕಾಂಗ್ರೇಸ್ ಪರ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಬೇಕು, ನಿಮ್ಮ ಮನೆಬಾಗಿಲಿಗೆ ಸೇವೆ ನೀಡುವ ಕೆಲಸ ಕಾಂಗ್ರೇಸ್ ಖಂಡಿತವಾಗಿಯೂ ಮಾಡುತ್ತೇವೆ ಮಾತ್ರವಲ್ಲದೆ ೨೩ ವಾರ್ಡಿನಲ್ಲಿಯೂ ಕೂಡ ಕಾಂಗ್ರೇಸ್ ಪರ ಉತ್ತಮ ಪ್ರತಿಕ್ರೀಯೆ ಇದೆ ಎಂದರು.
