ಕಾಪು: ಕೊರೋನಾ ಸಮಸ್ಯೆಯಿಂದ ಭಾರತ ಲಾಕ್-ಡೌನ್ ಆಗಿರುವುದರಿಂದ ಕಾಪು ಕೋತ್ವಾಲಗುತ್ತು ದಿವಂಗತ ಗುಲಾಬಿ ಶೆಡ್ತಿ,ದಿ.ಪ್ರೇಮ ಶೆಟ್ಟಿ ಮತ್ತು ದಿ.ಸದಾನಂದ ಶೆಟ್ಟಿ ಸ್ಮರಣಾರ್ಥ ಕಾಪು ದಿವಾಕರ್ ಶೆಟ್ಟಿ ವತಿಯಿಂದ ೩೭೦ ಕುಟುಂಬಗಳಿಗೆ ಅಕ್ಕಿ ಸಹಿತ ಅಹಾರ ಧಾನ್ಯದ ಕಿಟ್ ವಿತರಿಸಿದರು.
ಕಾಪು ಉಳಿಯಾರಗೋಳಿಯ ತನ್ನ ಸುತ್ತಮುತ್ತಲಿನ ಪರಿಸರದ ಅತ್ಯಂತ ಬಡ ಮತ್ತು ಮಧ್ಯಮ ವರ್ಗದ ಜನರನ್ನು ಗುರುತಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಟೋಕನ್ ಮೂಲಕ ಜಿನಸು ಪದಾರ್ಥ ಸೇರಿದ ಕಿಟ್ಟ್ ವಿತರಿಸಿದರು.
ಈ ಬಗ್ಗೆ ಮಾತಾಡಿದ ಅವರು” ಕೊರೋನಾ ವಿಶ್ವಕ್ಕೆ ಬಂದಿರುವ ಸಂಕಟ ಇದರಿಂದ ಭಾರತ ಕೂಡ ಎಲ್ಲಾ ವಿಚಾರದಲ್ಲೂ ಕುಸಿತ ಕಾಣುತ್ತಿದೆ, ವಿಶೇಷವಾಗಿ ಈ ಸಂಧರ್ಭದಲ್ಲಿ ಮಾನ್ಯ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗಳು ಕೂಡ ಜನರಿಗೆ ಸಹಕಾರ ಮಾಡಿ ಎಂದು ಮನವಿವನ್ನು ದೇಶದ ಜನತೆಯ ಮುಂದೆ ಇಟ್ಟಿದ್ದಾರೆ.ಹಾಗಾಗಿ ನಾನು ನಮ್ಮ ಕುಟುಂಬದ ವತಿಯಿಂದ ಪರಿಸರದ ಸುತ್ತಮುತ್ತಲಿನ ಮಧ್ಯಮ ಮತ್ತು ಬಡ ಜನರನ್ನು ಗುರುತಿಸಿ ಉತ್ತಮ ಗುಣ ಮಟ್ಟದ ಆಹಾರ ಪದಾರ್ಥ ವಿತರಿಸುವ ಕಾರ್ಯ ಮಾಡುತ್ತಿದ್ದೇನೆ,ಇದು ಪ್ರಚಾರ ಅಥವಾ ರಾಜಕೀಯದ ಉದ್ದೇಶಕ್ಕಾಗಿ ಮಾಡುವ ಕಾರ್ಯ ಅಲ್ಲ ದೇವರ ಸೇವೆ ಎಂಬ ನಿಟ್ಟಿನಲ್ಲಿ ವೈಯಕ್ತಿಕವಾಗಿ ಮಾಡುತ್ತಿದ್ದೇನೆ ಎಂದರು”.
ವಿತರಣೆಯ ಸಂಧರ್ಭದಲ್ಲಿ ಯಾವುದೇ ರೀತಿಯ ಸಾಮಾಜಿಕ ಅಂತರ ಉಲ್ಲಂಘಣೆಯಾಗ ಬಾರದೆಂಬ ಉದ್ದೇಶದಿಂದ ಟೋಕನ್ ಸರದಿ ಪ್ರಕಾರ ಕಿಟ್ ವಿತರಿಸಲಾಯಿತು.ಕಿಟ್ ವಿತರಣೆ ಆತ್ಮೀಯರಾದ ರಾಧರಮಣ ಶಾಸ್ತ್ರಿ,ಸುರೇಶ್.ಅಮೀರ್ ಉಪಸ್ಥಿತರಿದ್ದರು.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…