ಲಾಕ್-ಡೌನ್ –15000 ಸಾವಿರ ಮಂದಿಗೆ ಅನ್ನದಾನ-500 ಕುಟುಂಬಗಳಿಗೆ ಕಿಟ್ ವಿತರಿಸಿದ ಕೊರಂಗ್ರಪಾಡಿ ಶ್ರೀನಿವಾಸ್ ತಂತ್ರಿ ಮಡುಂಬು.VISHWANEWS24

ಲಾಕ್-ಡೌನ್ 15000 ಸಾವಿರ ಮಂದಿಗೆ ಅನ್ನದಾನ-500 ಕುಟುಂಬಗಳಿಗೆ ಕಿಟ್ ವಿತರಿಸಿದ ಕೊರಂಗ್ರಪಾಡಿ ಶ್ರೀನಿವಾಸ್ ತಂತ್ರಿ ಮಡುಂಬು.

ಕಾಪು: ಕೊರೋನಾ ಲಾಕ್-ಡೌನ್ ಸಮಸ್ಯೆಯಿಂದ ಜನರು ಹಸಿವಿನಿಂದ ಉಳಿಯಬಾರದು ಎಂಬ ದೃಷ್ಟಿಯಿಂದ ಸುಮಾರು 18 ದಿನಗಳಿಂದ ಹದಿನೈದು ಸಾವಿರಕ್ಕೂ ಅಧಿಕ ಜನರಿಗೆ ಅನ್ನದಾನ ಮತ್ತು 500 ಕ್ಕೂ ಅಧಿಕ ಕುಟುಂಬಗಳಿಗೆ ಕೊರಂಗ್ರಪಾಡಿ ಶ್ರೀನಿವಾಸ್ ತಂತ್ರಿ ಮಡುಂಬು ಆಹಾರದ ಕಿಟ್ ವಿತರಿಸಿದ್ದಾರೆ. ಕಾಪು ಕಾರ್ಕಳ ಪಾಂಗಾಳ ಇನ್ನಂಜೆ ಮಲ್ಲಾರು ಸೇರಿದಂತೆ ವಿವಿಧ ಭಾಗದ ಜನರಿಗೆ ಪ್ರತಿನಿತ್ಯ ಉತ್ತಮ ಗುಣಮಟ್ಟದ ರುಚಿ ಶುಚಿಯಾದ ಊಟ ತಯಾರಿಸಿ ಹಂಚ್ಚುವ ಕಾರ್ಯ ತಂತ್ರಿಯವರು ಮಾಡುತ್ತಿದ್ದಾರೆ .

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಭಗವಂತನ ಕಾರ್ಯ ಎಂಬ ನಿಲುವಿನಿಂದ ಯಾವುದೇ ಪ್ರಚಾರದಲ್ಲಿ ಭಾಗಿಯಾಗದೇತನ್ನ ಸೇವೆ ಮುಂದುವರೆಸುತ್ತಿರುವುದು ಶ್ಲಾಘನೀಯವಾಗಿದೆ.

ಪ್ರತಿದಿನ ಊಟ ತಯಾರಿಸುವಲ್ಲಿ ಕಾಪು ಲಕ್ಷ್ಮೀ ಜನಾರ್ಧನ ದೇಗುಲದ ಪಾಕ ತಜ್ಞರಾದ ಶ್ರೀಧರ್ ಭಟ್ ಮತ್ತು ಕೆ.ಪಿ ಶ್ರೀನಿವಾಸ ತಂತ್ರಿಯವ ಧರ್ಮ ಪತ್ನಿ ದೀಕ್ಷಾ ಸೇರಿದಂತೆ ಕುಟುಂಬ ವರ್ಗದವರು ಹಾಗೂ ಶಿಷ್ಯಂದಿರು ಸಹಕಾರ ನೀಡುತ್ತಿದ್ದಾರೆ.

ಈ ಬಗ್ಗೆ ಮಾಧ್ಯಮದ ಜತೆ ಮಾತಾಡಿದ ಅವರು” ಉಡುಪಿ ಅನ್ನಬ್ರಹ್ಮ ಕ್ಷೇತ್ರ ಹಾಗಾಗಿ ನನ್ನ ಗುರುಗಳ ಪ್ರೇರಣೆಯಿಂದ ನಮ್ಮ ಸುತ್ತಾ ಮುತ್ತ ಯಾರು ಕೂಡ ಹಸಿವಿನಿಂದ ಇರಬಾರದು ಹಾಗಾಗಿ ಕೋವಿಡ್೧೯ ನ ಲಾಕ್ ಡೌನ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪ್ರತಿದಿನ ಅನ್ನದಾನ ಮಾಡುವ ಕಾರ್ಯ ಮಾಡುತ್ತಿದ್ದೇವೆ.ಇದು ಪ್ರಚಾರಕ್ಕಾಗಿ ಅಥಾವ ಹೆಸರಿಗೆ ಮಾಡುವುದಲ್ಲ ಜಾತಿ ಮತ ಭೇಧವಿಲ್ಲದೆ ಹಸಿವು ನೀಗಿಸಲು ಗುರುಗಳ ಮಾರ್ಗದರ್ಶನ ಪ್ರಕಾರ ನಮ್ಮದೊಂದು ಸೇವೆ ಮಾಡುತ್ತಿದ್ದೇವೆ ಅದರ ಜತೆಗೆ ಮಧ್ಯಮ ಮತ್ತು ಬಡ ಕುಟುಂಬಗಳಿಗೆ, ರಿಕ್ಷಾ ಚಾಲಕರಿಗೆ, ಆಹಾರ ಧಾನ್ಯದ ಕಿಟಗ ತಯಾರು ಮಾಡಿ ವಿತರಿಸುವ ಕಾರ್ಯ ನಡೆಯುತ್ತಿದೆ ಇದಕ್ಕೆ ಕೆಲವು ಆತ್ಮೀಯರು ೩೦೦ ಕೇಜಿ ಅಕ್ಕಿಯ ಸಹಕಾರ ಮಾಡಿದ್ದಾರೆ, ವೈಯಕ್ತಿಕವಾಗಿ ಸುಮಾರು ಅಂದಾಜು ಐದು ಲಕ್ಷ ರೂಪಾಯಿ ಖರ್ಚು ಇದುವರೆಗೆ ಆಗಿದೆ ಮುಂದಿನ ದಿನವೂ ಕೂಡ ಇದನ್ನು ಮುಂದುವರೆಸುತ್ತೇವೆ ಮತ್ತು ಇದು ಭಗವಂತನ ಸೇವೆ ಮಾಡುವ ಭಾಗ್ಯ ಎಂದರು.ವಿತರಣೆ ಮತ್ತು ಪ್ಯಾಕ್ ಮಾಡುವಲ್ಲಿ ಉಮೇಶ್ ಪೂಜಾರಿ ಹರೀಶ್ ಸೇರಿದಂತೆ ಗ್ರಾಮದ ಪರಿಸರದ ಯುವಕ ಯುವತಿಯರು ಕೈ ಜೋಡಿಸುತ್ತಿದ್ದಾರೆ.\

 

FACEBOOK VIDEO NEWS

YOUTUBE VIDEO NEWS

Vishwa News 24

Recent Posts

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ -vishwanews24

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…

9 hours ago

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ -vishwanews24

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…

9 hours ago

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ -vishwanews24

ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…

2 days ago

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

3 days ago

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ – vishwanews24

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…

3 days ago

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ – vishwanews24

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…

3 days ago