ಕಾಪು: ಕೊರೋನಾ ಸಮಸ್ಯೆಯಿಂದ ಭಾರತ ಲಾಕ್-ಡೌನ್ ಆಗಿರುವುದರಿಂದ ಕಾಪು ಕೋತ್ವಾಲಗುತ್ತು ದಿವಂಗತ ಗುಲಾಬಿ ಶೆಡ್ತಿ,ದಿ.ಪ್ರೇಮ ಶೆಟ್ಟಿ ಮತ್ತು ದಿ.ಸದಾನಂದ ಶೆಟ್ಟಿ ಸ್ಮರಣಾರ್ಥ ಕಾಪು ದಿವಾಕರ್ ಶೆಟ್ಟಿ ವತಿಯಿಂದ ೩೭೦ ಕುಟುಂಬಗಳಿಗೆ ಅಕ್ಕಿ ಸಹಿತ ಅಹಾರ ಧಾನ್ಯದ ಕಿಟ್ ವಿತರಿಸಿದರು.
ಕಾಪು ಉಳಿಯಾರಗೋಳಿಯ ತನ್ನ ಸುತ್ತಮುತ್ತಲಿನ ಪರಿಸರದ ಅತ್ಯಂತ ಬಡ ಮತ್ತು ಮಧ್ಯಮ ವರ್ಗದ ಜನರನ್ನು ಗುರುತಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಟೋಕನ್ ಮೂಲಕ ಜಿನಸು ಪದಾರ್ಥ ಸೇರಿದ ಕಿಟ್ಟ್ ವಿತರಿಸಿದರು.
ಈ ಬಗ್ಗೆ ಮಾತಾಡಿದ ಅವರು” ಕೊರೋನಾ ವಿಶ್ವಕ್ಕೆ ಬಂದಿರುವ ಸಂಕಟ ಇದರಿಂದ ಭಾರತ ಕೂಡ ಎಲ್ಲಾ ವಿಚಾರದಲ್ಲೂ ಕುಸಿತ ಕಾಣುತ್ತಿದೆ, ವಿಶೇಷವಾಗಿ ಈ ಸಂಧರ್ಭದಲ್ಲಿ ಮಾನ್ಯ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗಳು ಕೂಡ ಜನರಿಗೆ ಸಹಕಾರ ಮಾಡಿ ಎಂದು ಮನವಿವನ್ನು ದೇಶದ ಜನತೆಯ ಮುಂದೆ ಇಟ್ಟಿದ್ದಾರೆ.ಹಾಗಾಗಿ ನಾನು ನಮ್ಮ ಕುಟುಂಬದ ವತಿಯಿಂದ ಪರಿಸರದ ಸುತ್ತಮುತ್ತಲಿನ ಮಧ್ಯಮ ಮತ್ತು ಬಡ ಜನರನ್ನು ಗುರುತಿಸಿ ಉತ್ತಮ ಗುಣ ಮಟ್ಟದ ಆಹಾರ ಪದಾರ್ಥ ವಿತರಿಸುವ ಕಾರ್ಯ ಮಾಡುತ್ತಿದ್ದೇನೆ,ಇದು ಪ್ರಚಾರ ಅಥವಾ ರಾಜಕೀಯದ ಉದ್ದೇಶಕ್ಕಾಗಿ ಮಾಡುವ ಕಾರ್ಯ ಅಲ್ಲ ದೇವರ ಸೇವೆ ಎಂಬ ನಿಟ್ಟಿನಲ್ಲಿ ವೈಯಕ್ತಿಕವಾಗಿ ಮಾಡುತ್ತಿದ್ದೇನೆ ಎಂದರು”.
ವಿತರಣೆಯ ಸಂಧರ್ಭದಲ್ಲಿ ಯಾವುದೇ ರೀತಿಯ ಸಾಮಾಜಿಕ ಅಂತರ ಉಲ್ಲಂಘಣೆಯಾಗ ಬಾರದೆಂಬ ಉದ್ದೇಶದಿಂದ ಟೋಕನ್ ಸರದಿ ಪ್ರಕಾರ ಕಿಟ್ ವಿತರಿಸಲಾಯಿತು.ಕಿಟ್ ವಿತರಣೆ ಆತ್ಮೀಯರಾದ ರಾಧರಮಣ ಶಾಸ್ತ್ರಿ,ಸುರೇಶ್.ಅಮೀರ್ ಉಪಸ್ಥಿತರಿದ್ದರು.
ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…
ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…
ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…
ಪುತ್ತೂರು: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…
ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…
ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…