ಕಾಪು ಕ್ಷೇತ್ರದಲ್ಲಿ 26 ಪಂಚಾಯತ್ ಗೆಲ್ಲುವುದು ಬಿಜೆಪಿ ಬಾಲಿಶ ಹೇಳಿಕೆ: ವಿನಯ್ ಕುಮಾರ್ ಸೊರಕೆ -Vishwanews24

Featured, ಉಡುಪಿ

ಕಾಪು ಕ್ಷೇತ್ರದಲ್ಲಿ 26 ಪಂಚಾಯತ್ ಗೆಲ್ಲುವುದು ಬಿಜೆಪಿ ಬಾಲಿಶ ಹೇಳಿಕೆ: ವಿನಯ್ ಕುಮಾರ್ ಸೊರಕೆ -Vishwanews24

ಕಾಪು: ಕಾಪು ವಿಧಾನಸಭಾ ಕ್ಷೇತ್ರದ 10 ಪಂಚಾಯತ್ ಚುನಾವಣೆಯಾಗಿದೆ ಉಳಿದ16 ಪಂಚಾಯತಿಗೆ 27 ಕ್ಕೆ ಚುನಾವಣೆ ನಡೆಯಲಿದೆ. ಈ‌ ಸಂಧರ್ಬದಲ್ಲಿ ಮಾಜಿ‌ಸಚಿವ ವಿನಯ್ ಕುಮಾರ್ ಸೊರಕೆ ಕಾಪುವಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ಜನ‌ ತಿರ್ಮಾನ ಮಾಡದೇ ಬಿಜೆಪಿಯವರು 26 ಸೀಟ್ ಗೆಲ್ಲುವ ಬಾಲಿಶ ಹೇಳಿಕೆ ನೀಡುತ್ತಿರುವುದುಹಾಸ್ಯಸ್ಪದವಾಗಿದೆ.ಪಂಚಾಯತ್ ಚುನಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಲು ಅವಕಾಶ ಇಲ್ಲದೆ ಇರುವ ಕಾನೂನು‌ ಇದ್ದರೂ ಅದನ್ನು ಗಾಳಿಗೆ ತೂರಿ ಬಿಜೆಪಿ ರಾಜಕೀಯ ಮುಖಂಡರನ್ನು ಮತಯಾಚನೆಗೆ ಬಳಸುತ್ತಿದ್ದಾರೆ.ಕೆಲವು ಪಂಚಾಯತಿಗಳಲ್ಲಿ ಸೀಟ್ ಮೀಸಲಾತಿಯಲ್ಲಿ‌ ಅಧಿಕಾರಿಗಳು ಹಸ್ತಕ್ಷೇಪ ಮಾಡಿ ಅಕ್ರಮ ಮಾಡಿರುವ ಬಗ್ಗೆ ಅನುಮಾನ ಇದೆ ಎಂದರು.

ಹಲವಾರು ಪಂಚಾಯತ್ ವ್ಯಾಪ್ತಿಯಲ್ಲಿ ದಬ್ಬಾಳಿಕೆ ನಡೆಸಿ ಮತಯಾಚನೆ ಮಾಡಿರುವ ಮಾಹಿತಿ ದೊರಕಿದ್ದು ಈ ಬಗ್ಗೆ ಚುನಾವಣಧಿಕಾರಿಗೆ ದೂರು ನೀಡಿದ್ದೇವೆ ಎಂದರು.
ಈ‌ ಸಂಧರ್ಭದಲ್ಲಿ ನವೀನ್ಚಂದ್ರ ಶೆಟ್ಟಿ,ಕ್ಷೇತ್ರಾಧ್ಯಕ್ಷ ನವೀನ್ಚಂದ್ರ ಸುವರ್ಣ ಅಡ್ವೆ, ಯುಸಿ ಶೇಖಬ್ಬ,ಪ್ರಭಾ ಶೆಟ್ಟಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ,ಅಖಿಲೇಶ್ ,ಮೊದಲಾದವರು ಉಪಸ್ಥಿತಿತರಿದ್ದರು