ಕಾಪು ಧರಣಿ ಸಮಾಜ ಸೇವಾ ಸಂಘದ ವತಿಯಿಂದ 19 ನೇ ವರ್ಷದ ರಕ್ತದಾನ ಶಿಬಿರ: ಕೆ ಲೀಲಾಧರ ಶೆಟ್ಟಿ:- vishwanews24

Featured, ಉಡುಪಿ

ಕಾಪು ಧರಣಿ ಸಮಾಜ ಸೇವಾ ಸಂಘದ ವತಿಯಿಂದ 19 ನೇ ವರ್ಷದ ರಕ್ತದಾನ ಶಿಬಿರ: ಕೆ ಲೀಲಾಧರ ಶೆಟ್ಟಿ

ಕಾಪು: ಧರಣಿ ಸಮಾಜ ಸೇವಾ ಸಂಘ, ಕಾಪು
ಮತ್ತುಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಸಹಯೋಗ (ಜಂಟಿ ಆಶ್ರಯ)ದಲ್ಲಿ ಸತತ 19ನೇ ವರ್ಷದ
ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವನ್ನು ದಿನಾಂಕ : 24-10-2021ನೇ ಆದಿತ್ಯವಾರ
ಬೆಳಗ್ಗೆ ಗಂಟೆ 9-00ರಿಂದ ಮಧ್ಯಾಹ್ನ 2-00ರ ವರೆಗೆ ಶ್ರೀ ವೀರಭದ್ರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ
ಆಯೋಜಿಸಲಾಗಿದೆ ಎಂದು ಧರಣಿ ಸಮಾಜ ಸೇವಾ ಸಂಘ, ಕಾಪು ಇದರ ಅಧ್ಯಕ್ಷರಾದ ಕ. ಲೀಲಾಧರ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿವಿಧ ಸಂಘ ಸಂಸ್ಥೆಗಳು, ರಕ್ತದಾನಿಗಳು ಈ ಸಮಾಜಮುಖಿ ಕಾರ್ಯಕ್ರಮದಲ್ಲ ಭಾಗವಹಿಸಿ, ಬಡವರಿಗೆ ಆಪತ್ಕಾಲದಲ್ಲಿ ನೆರವಾಗುವ ಕಾರ್ಯಕ್ರಮವು ‘ದೇವರ ಕಾರ್ಯ ಎಂದು ತಿಳಿದು, ಹಲವಾರು ವರುಷಗಳಿಂದ ನಮ್ಮ ಈ ಶಿಬಿರಕ್ಕೆ ರಕ್ತದಾನಿಗಳಾಗಿ ಬಂದು ಸಹಕರಿಸಿದ ತಮಗೆಲ್ಲರಿಗೂ ಉತ್ತಮ ಆರೋಗ್ಯ ಮತ್ತು ಜೀವನದಲ್ಲಿ ಯಶಸ್ಸು ಸಮೃದ್ಧಿಯನ್ನು ದೇವರು ದಯಪಾಲಿಸಲಿ ಎಂದು ಹಾರೈಸುತ್ತೇವೆ. ಸಹಕರಿಸಿರುವ ಎಲ್ಲಾ ದಾನಿಗಳಿಗೆ, ಸಂಘ, ಸಂಸ್ಥೆಗಳಿಗೆ ಈ ಮೂಲಕ ಕೃತಜ್ಞತೆಯನ್ನು ಅರ್ಪಿಸುತ್ತಾ, ಮುಂದೆ ಕೂಡಾ ತಮ್ಮ ತುಂಬು ಹೃದಯದ ಸಹಕಾರವನ್ನು ಕೇಳಕೊಳ್ಳುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.