ಕಾಪು ಪುರಸಭಾ ಚುನಾವಣೆ- ಕೆಲವೊಂದು ವಾರ್ಡಿನಲ್ಲಿ ಮೊದಲ ರೌಂಡ್ ಫೀಲ್ಡ್ನಲ್ಲಿ ಬಿಜೆಪಿಗರಿಗೆ ಮಂಗಳಾರತಿ ಮಾಡಿದ ಮತದಾರರು;- vishwanews24

Featured, ರಾಜ್ಯ ನ್ಯೂಸ್

ಕಾಪು ಪುರಸಭಾ ಚುನಾವಣೆ- ಕೆಲವೊಂದು ವಾರ್ಡಿನಲ್ಲಿ ಮೊದಲ ರೌಂಡ್ ಫೀಲ್ಡ್ನಲ್ಲಿ ಬಿಜೆಪಿಗರಿಗೆ ಮಂಗಳಾರತಿ ಮಾಡಿದ ಮತದಾರರು

ಕಾಪು: ಪುರಸಭಾ ಚುನಾವಣೆಯ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಮಹಾಅಭಿಯಾನ ಪ್ಲಾಪ್ ಶೋ ಕಂಡಿದೆ ಎಂಬ ಗುಸು ಗುಸು ಶುರುವಾಗಿದೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುರಸಭಾ ವ್ಯಾಪ್ತಿಯ ಸಮಸ್ಯೆ ಸರಿ ಮಾಡುವುದಾಗಿ ಭರವಸೆ ಕೊಟ್ಟಿದ್ದ ಬಿಜೆಪಿ ಅತ್ತ ತಲೆಹಾಕಿ ಮಲಗದೇ ಇರುವುದರಿಂದ ಈ ಚುನಾವಣೆಯ ಫೀಲ್ಡ್ಗೆ ಇಳಿದ ಕೆಲವೊಂದು ವಾರ್ಡಿನಲ್ಲಿ  ನಾಯಕರನ್ನು ಸೇರಿಸಿ ಮಂಗಳಾರತಿ ಮಾಡಿದ್ದಾರೆ ಅನ್ನುವ ಸುದ್ದಿ ಹರಿದಾಡುತ್ತಿದೆ.


ಪ್ರತಿ ಚುನಾವಣೆಯಲ್ಲಿ ಮೋದಿಯನ್ನು ತೋರಿಸಿ ಬಡಜನ ನಮಗೆ ಮೋಸ ಮಾಡುವ ಅಗತ್ಯವಿಲ್ಲ, ಪುರಭಾ ವ್ಯಾಪ್ತಿಯಲ್ಲಿ ಮಾಡಿದ ಕೆಲಸ ತೋರಿಸಿ ಓಟ್ ಹಾಕ್ತೇವೆ- ಮೋದಿ ಚುನಾವಣೆಗೆ ಯಾವತ್ತಿದ್ದಾರೂ ನಾವೆಲ್ಲರೂ ಮೋದಿ ಪರ ಆದರೇ ಈ ಸಲ ಮಾತ್ರ ಬರಬೇಡಿ ಅಂದಿದ್ದಾರೆAಬ ಮಾತು ಕೇಳಿ ಬರುತ್ತಿದೆ.


ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಆಡಳಿತಕ್ಕೆ ಬಂದರೆ ಪ್ರಾಧಿಕಾರ ಸಮಸ್ಯೆ,ತೆರಿಗೆ ಹೆಚ್ಚಳ, ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವುದಾಗಿ ಭರವಸೆ ನೀಡಿತ್ತು ಅದ್ಯಾವುದನ್ನು ಮಾಡಿಲ್ಲ ಎಂಬುದು ಮತದಾರರ ಆರೋಪವಾಗಿದೆ.