ಕಾಪು ಪುರಸಭಾ ಚುನಾವಣೆ ಸ್ಪರ್ಧಿಸುವುದಾಗಿ ಹೈಡ್ರಾಮ ಮಾಡಿ ಎಸ್ಕೇಪ್ ಆದ ಆಮ್ಆದ್ಮಿ.: vishwanews24
ಕಾಪು ಪುರಸಭಾ ಚುನಾವಣೆ ಸ್ಪರ್ಧಿಸುವುದಾಗಿ ಹೈಡ್ರಾಮ ಮಾಡಿ ಎಸ್ಕೇಪ್ ಆದ ಆಮ್ಆದ್ಮಿ.
ಕಾಪು: ಪುರಸಭೆ ಚುನಾವಣೆಗೆ ದಿನ ನಿಗದಿಯಾದಂತೆ ರಾಜಕೀಯ ಪಕ್ಷಗಳ ಕಾವು ಜಾಸ್ತಿಯಾಗುವುದು ಸಾಮಾನ್ಯವಾಗಿದೆ ಅದರ ನಡುವೆ ಒಂದಿಷ್ಟು ಪಕ್ಷಗಳು ಬೇಲೆಬೇಯಿಸಿಕೊಳ್ಳಲು ಕೂಡ ಪ್ರಯತ್ನಿಸುವುದು ಸಾಮಾನ್ಯ ಅದೇ ರೀತಿಯ ಘಟನೆ ಇಲ್ಲಿಯೂ ನಡೆದಿದೆ.

ಪುರಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ನಾಮಪತ್ರ ಸಲ್ಲಿಸುವ ಮುನ್ನಾ ಉಡುಪಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡು ಹೈಡ್ರಾಮ ನಡೆಸಿ ಒಂದೇ ಒಂದು ವಾರ್ಡಿಗೆ ನಾಮ ಪತ್ರ ಸಲ್ಲಿಸದೆ ಎಸ್ಕೇಪ್ ಆಗಿದೆ.

ಕರಾವಳಿ ಭಾಗದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸರಿಯಾಗಿ ಅಸ್ಥಿತ್ವ ಇಲ್ಲ ಯಾವುದಾದರೂ ಪಕ್ಷದಲ್ಲಿ ಬಂಡಾಯ ಅಭರ್ಥಿಗಳಿದ್ದರೆ ಅವರಿಗೆ ಪ್ರಚೋದಿಸಿ ಬೇಳೆಬೇಯಿಸಿಕೊಳ್ಳುವುದು ಮಾತ್ರ ಉದ್ದೇಶ ಎಮದು ನೆಟ್ಟಿಗರು ಬರೆದುಕೊಂಡಿದ್ದಾರೆ.

