ಕಾಪು : ಇಲ್ಲಿನ ಪುರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಸದ್ಯ ಅವಳಿ-ಜವಳಿ ಮಕ್ಕಳಂತೆ ಕಾರ್ಯನಿರ್ವಹಿಸುತ್ತಿದೇಯೆ ಎಂಬ ಅನುಮಾನ ಮತ್ತಷ್ಟು ಬಿಗುವಾಗಿದೆ.
ಈ ಎರಡೂ ಕಚೇರಿಯಲ್ಲಿ ಕೂಡ ದಾಖಲೆ-ಲೈಸನ್ಸ್-ಸರ್ವೆ- ಸೇರಿದಂತೆ ಯಾವುದೇ ಕೆಲಸ ನಡೆಯಬೇಕಾದರೂ ಕೂಡ ನೇರವಾಗಿ ಸಾರ್ವಜನಿಕ ಹೋದರೆ ಕೆಲಸಗಳು ಆಗುತ್ತಿಲ್ಲ ಬದಲಾಗಿ ವಯಾ ಬ್ರೋಕರ್ ಸಮೇತ ದಾಖಲೆ ಸಲ್ಲಿಸಿದರೆ ಮಾತ್ರ ಕೆಲಸ ಕಾರ್ಯಗಳು ನಡೆಯುತ್ತಿದೆ ಎಂಬ ಆರೋಪ ಹಿಂದಿನಿಂದಲೂ ಕೇಳಿ ಬಂದಿತ್ತು ಅದಕ್ಕೆ ಪೂರಕವಾಗಿ ಇತ್ತೀಚಿನ ಬೆಳವಣಿಗೆಗಳು ಅದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಲಂಚದ ಕೋಡ್ ವರ್ಡ್ “ಪೆನ್ನ್”
ಅಸಲಿಗೆ ಕಾಪು ಪುರಸಭೆಗೆ ಆಯ್ಕೆಯಾದ ಸದಸ್ಯರು ಸಾಚರಾಗಿದ್ದರೂ ಕೂಡ ಅಧಿಕಾರ ವರ್ಗ ಮಾತ್ರ ಸಾರ್ವಜನಿಕರ ಕಿಸೆ ನೋಡಿಯೆ ಕೆಲಸ ಮಾಡುತ್ತಿದ್ದಾರೆಂಬ ಆರೋಪ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ.
ನೇರವಾಗಿ ಹಣ ಕೇಳದಿದ್ದರೂ ಬ್ರೋಕರ್ ಮುಖೇನ ಫೈಲ್ ಸಲ್ಲಿಸುವಾಗ ಫೀಸ್ ಜತೆಗೆ ಲಂಚದ ಹಣವೂ ಕೂಡಿರುತ್ತದೆಂಬ ಮಾತು ಚಾಲ್ತಿಯಲ್ಲಿದೆ.
ಪರಿಶೀಲನೆ-ತಪಾಸಣೆ ಎರಡಕ್ಕೂ ಒಂದೇ ಅರ್ಥವಾದರೂ ಕೂಡ ಕಾಪು ಪುರಸಭೆಯಲ್ಲಿ ಇವೆರೆಡಕ್ಕೂ ಬೇರೆ ಬೇರೆ ಅರ್ಥವಿದೆ ಯಾವುದೇ ಕಟ್ಟಡ ಮನೆ ನಿರ್ಮಾಣ ಮಾಡಬೇಕಾದರೂ ಖಾಸಾಗಿ ಕಾರು ಇಲ್ಲದೆ ಅಧಿಕಾರಿ ವರ್ಗದ ಕಾಲು ಭೂಮಿಗೆ ಇಡಲು ಸಾಧ್ಯವೇ ಇಲ್ಲ ಎಂಬ ವರ್ತನೆ ಸಾಲಮಾಡಿ ಮನೆಕಟ್ಟಲು ಹೊರಟಿರುವ ಸಾರ್ವಜನಿಕರ ಪಾಲಿಗೆ ಇರುಸು-ಮುರುಸಾಗಿದೆ.
ಪೆನ್ ಅಂದರೆ ಒಂದು ಸಾವಿರ -ಹೀಗೆ ಪೆನ್ನ್ ಲೆಕ್ಕದಲ್ಲಿ ಲಂಚವತಾರ ಪುರಸಭೆಯ ಪರಿಸರದೆಲ್ಲೆಡೆ ಗಬ್ಬು ನಾರುತ್ತಿದೆ ಎಂಬ ಮಾತು ಜೋರಾಗಿಯೇ ಕೇಳಿ ಬರುತ್ತಿದೆ ಕಳೆದ ವಾರ ಯಾರೊಬ್ಬರೂ ಅಧಿಕಾರಿ ಪೆನ್ನ್ ಕೇಳಿದಕ್ಕೆ ” ಕೆಲಸ ಆಗುವುದಾದರೆ ಐದರ ಬದಲಿಗೆ ಇಪ್ಪತೈದ್ ಪೆನ್ನ್ ನೀಡಿದರಂತೆ ಒಬ್ಬಾತ ಆ ಸಂಧರ್ಭದಲ್ಲಿಯೇ ಪೆನ್ನಿನ ಅಸಲಿ ವಿಚಾರ ಹೊರಗೆ ಬಂದಿರುವಂತದ್ದು ಎಂದು ಒಳಗಿನ ಸಿಬ್ಬಂದಿಗಳು ಗುಟ್ಟಾಗಿ ಗಟ್ಟಿಯಾಗಿ ಹಾಸ್ಯ ಮಾಡುತ್ತಿದ್ದರಂತೆ .
ಇದು ಕಾಪು ಪುರಸಭೆಯ ಹಣೆಬರಹವಾದರೇ ಪ್ರಾಧಿಕಾರ ಇದಕ್ಕಿಂತಲೂ ಒಂದು ಪಟ್ಟು ಮುಂದಕ್ಕೆ ಹೋಗಿ ನಗರಾಭಿವೃದ್ಧಿ ಪ್ರಾಧಿಕಾರ ಬದಲು “ಬ್ರೋಕರಾಬೀವೃದ್ದಿ ಪ್ರಾಧಿಕಾರ ” ವಾಗಿ ಬದಲಾಗಿದೆ.
ಯಾವುದೇ ಕೆಲಸವಾಗಬೇಕಾದರೂ ಕೂಡ ವಯಾ ಬ್ರೋಕರ್ ಜತೆಗೆನೆ ನಿಮ್ಮ ಫೈಲ್ ಹೋಗಬೇಕು ಇಲ್ಲವಾದಲ್ಲಿ ಒಂದೆರಡು ಬಾರಿಗೆ ಆಗುವ ಕೆಲಸ ಎರಡು ತಿಂಗಳಾದರೂ ಆಗುವುದಿಲ್ಲ ಎಂಬ ವಿಚಾರಕ್ಕೆ ಸಾರ್ವಜನಿಕರು ಬಹಿರಂಗವಾಗಿಯೇ ಕಾಪುವಿನ ಅವಳಿ ಜವಳಿ ಮಕ್ಕಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಇನ್ನಾದರೂ ಈ ಬಗ್ಗೆ ಉನ್ನತ ಅಧಿಕಾರಿಗಳು-ಜನಪ್ರತಿನಿಧಿಗಳು ಹೆಚ್ಚಿನ ಕ್ರಮ ವಹಿಸಿ ಜನರ ಪಾಲಿಗೆ ನೆರವಾಗಬೇಕಿದೆ.
ಬ್ಯುರೋ ರಿಪೋರ್ಟ್:vishwanews24ಕಾಪು
ಪಡುಬಿದ್ರಿ: ಹೆಜಮಾಡಿ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ .. ಟೋಲ್ ಗೇಟ ನ್ನು ತಕ್ಷಣ ತೆರವುಗೊಳಿಸಬೇಕು ಎಂದು ಆಗ್ರಹ 15…
ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ: ಹಿಜಾಬ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ : ಪ್ರಿಯಾಂಕ ಖರ್ಗೆ ಸ್ಪಷ್ಟನೆ ಬೆಂಗಳೂರು: ಕರ್ನಾಟಕದ ಪೊಲೀಸ್…
ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿ ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ವಿಶೇಷ ಸೇನಾ…
ಕಡಬ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ :ಭಕ್ತರಿಗೆ ಡ್ರಮ್ಗಳಲ್ಲಿ ಪರ್ಯಾಯ ಸ್ನಾನ ವ್ಯವಸ್ಥೆ ಕಡಬ:ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿರಂತರ ಸುರಿಯುತ್ತಿರುವ…
ಮೀನುಗಾರಿಕಾ ಋತು ಆರಂಭ ಹಿನ್ನೆಲೆ : ಮಲ್ಪೆ ಬಂದರಿಗೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ ಉಡುಪಿ: ಜೂನ್ ಮತ್ತು ಜುಲೈ…
ಕುಂದಾಪುರ ರಿಚರ್ಡ್ ಹತ್ಯೆ ಪ್ರಕರಣ : ಆರೋಪಿ ಭಟ್ಕಳದಲ್ಲಿ ಬಂಧನ ಕುಂದಾಪುರ: ಇಲ್ಲಿನ ಚರ್ಚ್ ರಸ್ತೆಯ ಸಮೀಪ ಗುರುವಾರ ತಡರಾತ್ರಿ…