Featured

ಕಾಪು : ಸಂಪೂರ್ಣ ಕಿತ್ತುಹೋದ ಮೂಳೂರು ಫಿಶರಿಸ್ ರಸ್ತೆ : ವಾಹನ ಸವರಾರಿಗೆ- ಪಾದಚಾರಿಗಳಿಗೆ ಸಂಕಟ : vishwanews24

ಸಂಪೂರ್ಣ ಕಿತ್ತುಹೋದ ಮೂಳೂರು ಫಿಶರಿಸ್ ರಸ್ತೆ ..

ವಾಹನ ಸವರಾರಿಗೆ- ಪಾದಚಾರಿಗಳಿಗೆ ಸಂಕಟ

ವರ್ಷಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ಪಾವತಿಯಾಗುವ ರಸ್ತೆಯ ದು:ಸ್ಥಿತಿ

ಕಾಪು: ಕಾಪು ಪುರಸಭೆ ವ್ಯಾಪ್ತಿಯ ಮೂಳೂರು ತೊಟ್ಟಂ ವಾರ್ಡಿಗೆ ಸಂಬಂಧಿಸಿದ ಫಿಶರಿಸ್ ರಸ್ತೆಯೂ ಸಂಪೂರ್ಣ ಹದಗೆಟ್ಟ ಪರಿಣಾಮ ಪ್ರತಿದಿನ ವಾಹನ ಸವಾರರು ,ಪಾದಚಾರಿಗಳು ಸಂಕಟ ಪಡುವಂತಾಗಿದೆ.

ಗೆಸ್ಟ್ ಹೌಸ್ ಗಳ ಮೂಲದ ಮನೆ ಎಂಬಂತ್ತಿರುವ ಮೂಳೂರು ತೊಟ್ಟಂ‌ ವಾರ್ಡಿನ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಕಾಪು ದ್ವೀಪಸ್ಥಂಭ-ಮಟ್ಟು ಬೀಚ್-ಮಲ್ಪೆ ಬಂದರಿಗೆ ಸಂಪರ್ಕಕೊಂಡಿಯಾಗಿರುವ ಈ ರಸ್ತೆ ಸದ್ಯ ಕಂಬಳದ ಗದ್ದೆಯಂತೆ ಮಾರ್ಪಟ್ಟಿದೆ.

ಸುಮಾರು ಹತ್ತು ವರ್ಷದ ಹಿಂದೆ ಡಾಂಬರಿಕರಣ ಕಂಡ ಈ ರಸ್ತೆಯೂ ವಾಣಿಜ್ಯ ರಸ್ತೆಯಾಗಿಯೂ ಮಾರ್ಪಡಾಗಿದ್ದು ಘಣ ವಾಹನಗಳು ಸೇರಿದಂತೆ ಬೇರೆ ಊರಿನಿಂದ ಕೂಡ ಬೀಚ್ ಸವಿಯಲು ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಐವತ್ತಕ್ಕೂ ಅಧಿಕ ಗೆಸ್ಟ್ ಹೌಸ್ : 
ಈ ಭಾಗದಲ್ಲಿ ಸುಮಾರು ಐವತ್ತಕ್ಕೂ ಅಧಿಕ ಪ್ರವಾಸಿಗರಿಗಾಗಿ ಐವತ್ತಕ್ಕೂ ಅಧಿಕ ಖಾಸಾಗಿ ಗೆಸ್ಟ್ ಹೌಸ್ ಗಳು ಕೂಡ ತಲೆ ಎತ್ತಿದ್ದು ದಿನದ ಇಪ್ಪತ್ತನಾಲ್ಕು ಗಂಟೆಯೂ ಕೂಡ ವಾಹನ ದಟ್ಟನೆ ಇರುತ್ತದೆ.

ಮಳೆಗಾಲದಲ್ಲಿ ಕೆಸರರು-ಬೇಸಿಗೆ ಧೂಳು ಹೈರಾಣು
ಮಳೆಗಾಲದಲ್ಲಿ ಈ ರಸ್ತೆ ಸಂಪೂರ್ಣ ಕೆಸರುತುಂಬಿ ಪಾದಚಾರಿಗಳಿಗೆ ನಡೆಯಲು ಕಷ್ಟವಾದರೆ,ಇತರ ಸಮಯದಲ್ಲಿ ಸಂಪೂರ್ಣ ಧೂಳು ಅಕ್ಕಪಕ್ಕದ ಮನೆಯೊಳಗೆ ಸೇರಿಕೊಂಡು ಸಮಸ್ಯೆಯಾಗುತ್ತಿದೆ.

ಈ ಬಗ್ಗೆ ಸಂಬಂಧಪಟ್ಟ ಪುರಸಭೆ ಸದಸ್ಯರಿಗೆ ಮನವಿ ಮಾಡಿದ್ದರೂ ಕೂಡ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಅನ್ನುತ್ತಾರೆ ಗ್ರಾಮಸ್ಥರು.

“ಮೂರು ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ-ಶಾಸಕರಿಗೆ ದಾಖಲೆ ಸಮೇತ ಮನವಿ ಸಲ್ಲಿಸಿದ್ದು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಆದರೆ ಕಾಮಗಾರಿಗೆ ಹಣ ಬಿಡುಗಡೆಯಾಗಿಲ್ಲ ,ಮುಂದಿನ‌ ಪುರಸಭೆಯ ಸಭೆಯಲ್ಲಿ ಮತ್ತೊಂದು ಬಾರಿ ಧ್ವನಿಎತ್ತುವ ಮುಖೇನ ರಸ್ತೆ ದುರಸ್ತಿಗೆ ಆಗ್ರಹ ಮಾಡಲಾಗುತ್ತದೆ”

ಸತೀಶ್ಚಂದ್ರ : ಪುರಸಭೆ ಸದಸ್ಯರು,ತೊಟ್ಟಂ‌ವಾರ್ಡ್

“ಪ್ರತಿದಿನ ಸಾವಿರಾರು ವಾಹನಗಳು ಓಡಾಡುತ್ತಿದೆ ಅಷ್ಟು ಮಾತ್ರವಲ್ಲದೆ ಘನವಾಹನಗಳ‌ ಸಂಚಾರ ಕೂಡ ಜಾಸ್ತಿಯಾಗಿಯೇ ಇದೆ ,ಸುಮಾರು ಹತ್ತು ವರ್ಷದ ಹಿಂದೆ ಹಾಕಿದ ಡಾಂಬರು ಸಂಪೂರ್ಣ ಮಳೆ-ಹಾಗೂ ವಾಹನದ ದಟ್ಟಣೆಯಿಂದ ಕೊಚ್ಚಿಹೋಗಿದೆ ಮನವಿಗೆ ಯಾವುದೇ ರೀತಿಯ ಸ್ಪಂದನೆ ಇಲ್ಲ “
ಹೇಮನಾಥ್ : ಗ್ರಾಮಸ್ಥರು

Vishwa News 24

Recent Posts

ಆರ್‌ಎಸ್‌ಎಸ್​ ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ – vishwanews24

ಆರ್‌ಎಸ್‌ಎಸ್​ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ ಮೈಸೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಂತರ ಸಚಿವ ಯತೀಂದ್ರ…

14 hours ago

ಬೆಳ್ತಂಗಡಿ: ಎಸ್‌ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ – vishwanews24

ಬೆಳ್ತಂಗಡಿ: ಎಸ್‌ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ ಮಂಗಳೂರು: ಧರ್ಮಸ್ಥಳ  ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಎಸ್ಪಿ ಪ್ರಯಾಣಿಸುತ್ತಿದ್ದ…

14 hours ago

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್‌ ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ – vishwanews24

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್‌ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ ನವದೆಹಲಿ:…

14 hours ago

ತಮಿಳುನಾಡಿನ ರೈತರಿಗೆ ಬಂಪರ್ ಕೊಡುಗೆ: 75,000 ರೂ. ವರೆಗಿನ ಸಾಲ ಸಂಪೂರ್ಣ ಮನ್ನಾ ಮಾಡಿದ ಸಿಎಂ ವಿಜಯ್ – vishwanews24

ತಮಿಳುನಾಡಿನ ರೈತರಿಗೆ ಬಂಪರ್ ಕೊಡುಗೆ: 75,000 ರೂ. ವರೆಗಿನ ಸಾಲ ಸಂಪೂರ್ಣ ಮನ್ನಾ ಮಾಡಿದ ಸಿಎಂ ವಿಜಯ್ ಚೆನ್ನೈ: ಸಿಎಂ ಸಿ.…

15 hours ago

ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಆರೋಪ ಆತಂಕಕಾರಿ ಬೆಳವಣಿಗೆ : ಶೀರೂರು ಶ್ರೀ – vishwanews24

ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಆರೋಪ ಆತಂಕಕಾರಿ ಬೆಳವಣಿಗೆ : ಶೀರೂರು ಶ್ರೀ ಉಡುಪಿ :…

19 hours ago

ಆರೆಸ್ಸೆಸ್ ಅನ್ನು ಹಿಂದೂ ಧರ್ಮಕ್ಕೆ ಹೋಲಿಸಿರುವುದು ಖಂಡನೀಯ: ಬಿ.ಕೆ. ಹರಿಪ್ರಸಾದ್ – vishwanews24

"ಹಿಂದೂ ಧರ್ಮವೂ ನೋಂದಣಿಯಾಗಿಲ್ಲ ಎಂಬ ಮೋಹನ್ ಭಾಗವತ್ ಅವರ ಹೇಳಿಕೆಗೆ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯೆ ಬೆಂಗಳೂರು: ಆರೆಸ್ಸೆಸ್ ಮುಖ್ಯಸ್ಥ ಮೋಹನ್…

19 hours ago