Featured

ಕಾಪು : ಸಂಪೂರ್ಣ ಕಿತ್ತುಹೋದ ಮೂಳೂರು ಫಿಶರಿಸ್ ರಸ್ತೆ : ವಾಹನ ಸವರಾರಿಗೆ- ಪಾದಚಾರಿಗಳಿಗೆ ಸಂಕಟ : vishwanews24

ಸಂಪೂರ್ಣ ಕಿತ್ತುಹೋದ ಮೂಳೂರು ಫಿಶರಿಸ್ ರಸ್ತೆ ..

ವಾಹನ ಸವರಾರಿಗೆ- ಪಾದಚಾರಿಗಳಿಗೆ ಸಂಕಟ

ವರ್ಷಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ಪಾವತಿಯಾಗುವ ರಸ್ತೆಯ ದು:ಸ್ಥಿತಿ

ಕಾಪು: ಕಾಪು ಪುರಸಭೆ ವ್ಯಾಪ್ತಿಯ ಮೂಳೂರು ತೊಟ್ಟಂ ವಾರ್ಡಿಗೆ ಸಂಬಂಧಿಸಿದ ಫಿಶರಿಸ್ ರಸ್ತೆಯೂ ಸಂಪೂರ್ಣ ಹದಗೆಟ್ಟ ಪರಿಣಾಮ ಪ್ರತಿದಿನ ವಾಹನ ಸವಾರರು ,ಪಾದಚಾರಿಗಳು ಸಂಕಟ ಪಡುವಂತಾಗಿದೆ.

ಗೆಸ್ಟ್ ಹೌಸ್ ಗಳ ಮೂಲದ ಮನೆ ಎಂಬಂತ್ತಿರುವ ಮೂಳೂರು ತೊಟ್ಟಂ‌ ವಾರ್ಡಿನ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಕಾಪು ದ್ವೀಪಸ್ಥಂಭ-ಮಟ್ಟು ಬೀಚ್-ಮಲ್ಪೆ ಬಂದರಿಗೆ ಸಂಪರ್ಕಕೊಂಡಿಯಾಗಿರುವ ಈ ರಸ್ತೆ ಸದ್ಯ ಕಂಬಳದ ಗದ್ದೆಯಂತೆ ಮಾರ್ಪಟ್ಟಿದೆ.

ಸುಮಾರು ಹತ್ತು ವರ್ಷದ ಹಿಂದೆ ಡಾಂಬರಿಕರಣ ಕಂಡ ಈ ರಸ್ತೆಯೂ ವಾಣಿಜ್ಯ ರಸ್ತೆಯಾಗಿಯೂ ಮಾರ್ಪಡಾಗಿದ್ದು ಘಣ ವಾಹನಗಳು ಸೇರಿದಂತೆ ಬೇರೆ ಊರಿನಿಂದ ಕೂಡ ಬೀಚ್ ಸವಿಯಲು ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಐವತ್ತಕ್ಕೂ ಅಧಿಕ ಗೆಸ್ಟ್ ಹೌಸ್ : 
ಈ ಭಾಗದಲ್ಲಿ ಸುಮಾರು ಐವತ್ತಕ್ಕೂ ಅಧಿಕ ಪ್ರವಾಸಿಗರಿಗಾಗಿ ಐವತ್ತಕ್ಕೂ ಅಧಿಕ ಖಾಸಾಗಿ ಗೆಸ್ಟ್ ಹೌಸ್ ಗಳು ಕೂಡ ತಲೆ ಎತ್ತಿದ್ದು ದಿನದ ಇಪ್ಪತ್ತನಾಲ್ಕು ಗಂಟೆಯೂ ಕೂಡ ವಾಹನ ದಟ್ಟನೆ ಇರುತ್ತದೆ.

ಮಳೆಗಾಲದಲ್ಲಿ ಕೆಸರರು-ಬೇಸಿಗೆ ಧೂಳು ಹೈರಾಣು
ಮಳೆಗಾಲದಲ್ಲಿ ಈ ರಸ್ತೆ ಸಂಪೂರ್ಣ ಕೆಸರುತುಂಬಿ ಪಾದಚಾರಿಗಳಿಗೆ ನಡೆಯಲು ಕಷ್ಟವಾದರೆ,ಇತರ ಸಮಯದಲ್ಲಿ ಸಂಪೂರ್ಣ ಧೂಳು ಅಕ್ಕಪಕ್ಕದ ಮನೆಯೊಳಗೆ ಸೇರಿಕೊಂಡು ಸಮಸ್ಯೆಯಾಗುತ್ತಿದೆ.

ಈ ಬಗ್ಗೆ ಸಂಬಂಧಪಟ್ಟ ಪುರಸಭೆ ಸದಸ್ಯರಿಗೆ ಮನವಿ ಮಾಡಿದ್ದರೂ ಕೂಡ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಅನ್ನುತ್ತಾರೆ ಗ್ರಾಮಸ್ಥರು.

“ಮೂರು ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ-ಶಾಸಕರಿಗೆ ದಾಖಲೆ ಸಮೇತ ಮನವಿ ಸಲ್ಲಿಸಿದ್ದು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಆದರೆ ಕಾಮಗಾರಿಗೆ ಹಣ ಬಿಡುಗಡೆಯಾಗಿಲ್ಲ ,ಮುಂದಿನ‌ ಪುರಸಭೆಯ ಸಭೆಯಲ್ಲಿ ಮತ್ತೊಂದು ಬಾರಿ ಧ್ವನಿಎತ್ತುವ ಮುಖೇನ ರಸ್ತೆ ದುರಸ್ತಿಗೆ ಆಗ್ರಹ ಮಾಡಲಾಗುತ್ತದೆ”

ಸತೀಶ್ಚಂದ್ರ : ಪುರಸಭೆ ಸದಸ್ಯರು,ತೊಟ್ಟಂ‌ವಾರ್ಡ್

“ಪ್ರತಿದಿನ ಸಾವಿರಾರು ವಾಹನಗಳು ಓಡಾಡುತ್ತಿದೆ ಅಷ್ಟು ಮಾತ್ರವಲ್ಲದೆ ಘನವಾಹನಗಳ‌ ಸಂಚಾರ ಕೂಡ ಜಾಸ್ತಿಯಾಗಿಯೇ ಇದೆ ,ಸುಮಾರು ಹತ್ತು ವರ್ಷದ ಹಿಂದೆ ಹಾಕಿದ ಡಾಂಬರು ಸಂಪೂರ್ಣ ಮಳೆ-ಹಾಗೂ ವಾಹನದ ದಟ್ಟಣೆಯಿಂದ ಕೊಚ್ಚಿಹೋಗಿದೆ ಮನವಿಗೆ ಯಾವುದೇ ರೀತಿಯ ಸ್ಪಂದನೆ ಇಲ್ಲ “
ಹೇಮನಾಥ್ : ಗ್ರಾಮಸ್ಥರು

Vishwa News 24

Recent Posts

ಪಡುಬಿದ್ರಿ: ಹೆಜಮಾಡಿ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ; ಟೋಲ್ ಗೇಟನ್ನು ತಕ್ಷಣ ತೆರವುಗೊಳಿಸಬೇಕೆಂದು ಆಗ್ರಹ – vishwanews24

ಪಡುಬಿದ್ರಿ: ಹೆಜಮಾಡಿ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ .. ಟೋಲ್ ಗೇಟ ನ್ನು ತಕ್ಷಣ ತೆರವುಗೊಳಿಸಬೇಕು ಎಂದು ಆಗ್ರಹ 15…

22 hours ago

ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ: ಹಿಜಾಬ್ ಧರಿಸಲು ಅವಕಾಶ ಇಲ್ಲ : ಧಾರ್ಮಿಕ ಉಡುಪುಗಳ ಗೊಂದಲ ಬಗ್ಗೆ ಪ್ರಿಯಾಂಕ ಖರ್ಗೆ ಸ್ಪಷ್ಟನೆ – vishwanews24

ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ: ಹಿಜಾಬ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ : ಪ್ರಿಯಾಂಕ ಖರ್ಗೆ ಸ್ಪಷ್ಟನೆ ಬೆಂಗಳೂರು: ಕರ್ನಾಟಕದ ಪೊಲೀಸ್…

23 hours ago

ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿ – vishwanews24

ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿ ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ವಿಶೇಷ ಸೇನಾ…

24 hours ago

ಕಡಬ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ – vishwanews24

ಕಡಬ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ :ಭಕ್ತರಿಗೆ ಡ್ರಮ್‌ಗಳಲ್ಲಿ ಪರ್ಯಾಯ ಸ್ನಾನ ವ್ಯವಸ್ಥೆ ಕಡಬ:ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿರಂತರ ಸುರಿಯುತ್ತಿರುವ…

24 hours ago

ಮೀನುಗಾರಿಕಾ ಋತು ಆರಂಭ ಹಿನ್ನೆಲೆ : ಮಲ್ಪೆ ಬಂದರಿಗೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ – vishwanews24

ಮೀನುಗಾರಿಕಾ ಋತು ಆರಂಭ ಹಿನ್ನೆಲೆ : ಮಲ್ಪೆ ಬಂದರಿಗೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ ಉಡುಪಿ: ಜೂನ್ ಮತ್ತು ಜುಲೈ…

24 hours ago

ಕುಂದಾಪುರ ರಿಚರ್ಡ್‌ ಹತ್ಯೆ ಪ್ರಕರಣ : ಆರೋಪಿ ಭಟ್ಕಳದಲ್ಲಿ ಬಂಧನ – vishwanews24

ಕುಂದಾಪುರ ರಿಚರ್ಡ್‌ ಹತ್ಯೆ ಪ್ರಕರಣ : ಆರೋಪಿ ಭಟ್ಕಳದಲ್ಲಿ ಬಂಧನ ಕುಂದಾಪುರ: ಇಲ್ಲಿನ ಚರ್ಚ್ ರಸ್ತೆಯ ಸಮೀಪ ಗುರುವಾರ ತಡರಾತ್ರಿ…

24 hours ago