ಕಾಪು : ಇಲ್ಲಿನ ಪುರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಸದ್ಯ ಅವಳಿ-ಜವಳಿ ಮಕ್ಕಳಂತೆ ಕಾರ್ಯನಿರ್ವಹಿಸುತ್ತಿದೇಯೆ ಎಂಬ ಅನುಮಾನ ಮತ್ತಷ್ಟು ಬಿಗುವಾಗಿದೆ.
ಈ ಎರಡೂ ಕಚೇರಿಯಲ್ಲಿ ಕೂಡ ದಾಖಲೆ-ಲೈಸನ್ಸ್-ಸರ್ವೆ- ಸೇರಿದಂತೆ ಯಾವುದೇ ಕೆಲಸ ನಡೆಯಬೇಕಾದರೂ ಕೂಡ ನೇರವಾಗಿ ಸಾರ್ವಜನಿಕ ಹೋದರೆ ಕೆಲಸಗಳು ಆಗುತ್ತಿಲ್ಲ ಬದಲಾಗಿ ವಯಾ ಬ್ರೋಕರ್ ಸಮೇತ ದಾಖಲೆ ಸಲ್ಲಿಸಿದರೆ ಮಾತ್ರ ಕೆಲಸ ಕಾರ್ಯಗಳು ನಡೆಯುತ್ತಿದೆ ಎಂಬ ಆರೋಪ ಹಿಂದಿನಿಂದಲೂ ಕೇಳಿ ಬಂದಿತ್ತು ಅದಕ್ಕೆ ಪೂರಕವಾಗಿ ಇತ್ತೀಚಿನ ಬೆಳವಣಿಗೆಗಳು ಅದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಲಂಚದ ಕೋಡ್ ವರ್ಡ್ “ಪೆನ್ನ್”
ಅಸಲಿಗೆ ಕಾಪು ಪುರಸಭೆಗೆ ಆಯ್ಕೆಯಾದ ಸದಸ್ಯರು ಸಾಚರಾಗಿದ್ದರೂ ಕೂಡ ಅಧಿಕಾರ ವರ್ಗ ಮಾತ್ರ ಸಾರ್ವಜನಿಕರ ಕಿಸೆ ನೋಡಿಯೆ ಕೆಲಸ ಮಾಡುತ್ತಿದ್ದಾರೆಂಬ ಆರೋಪ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ.
ನೇರವಾಗಿ ಹಣ ಕೇಳದಿದ್ದರೂ ಬ್ರೋಕರ್ ಮುಖೇನ ಫೈಲ್ ಸಲ್ಲಿಸುವಾಗ ಫೀಸ್ ಜತೆಗೆ ಲಂಚದ ಹಣವೂ ಕೂಡಿರುತ್ತದೆಂಬ ಮಾತು ಚಾಲ್ತಿಯಲ್ಲಿದೆ.
ಪರಿಶೀಲನೆ-ತಪಾಸಣೆ ಎರಡಕ್ಕೂ ಒಂದೇ ಅರ್ಥವಾದರೂ ಕೂಡ ಕಾಪು ಪುರಸಭೆಯಲ್ಲಿ ಇವೆರೆಡಕ್ಕೂ ಬೇರೆ ಬೇರೆ ಅರ್ಥವಿದೆ ಯಾವುದೇ ಕಟ್ಟಡ ಮನೆ ನಿರ್ಮಾಣ ಮಾಡಬೇಕಾದರೂ ಖಾಸಾಗಿ ಕಾರು ಇಲ್ಲದೆ ಅಧಿಕಾರಿ ವರ್ಗದ ಕಾಲು ಭೂಮಿಗೆ ಇಡಲು ಸಾಧ್ಯವೇ ಇಲ್ಲ ಎಂಬ ವರ್ತನೆ ಸಾಲಮಾಡಿ ಮನೆಕಟ್ಟಲು ಹೊರಟಿರುವ ಸಾರ್ವಜನಿಕರ ಪಾಲಿಗೆ ಇರುಸು-ಮುರುಸಾಗಿದೆ.
ಪೆನ್ ಅಂದರೆ ಒಂದು ಸಾವಿರ -ಹೀಗೆ ಪೆನ್ನ್ ಲೆಕ್ಕದಲ್ಲಿ ಲಂಚವತಾರ ಪುರಸಭೆಯ ಪರಿಸರದೆಲ್ಲೆಡೆ ಗಬ್ಬು ನಾರುತ್ತಿದೆ ಎಂಬ ಮಾತು ಜೋರಾಗಿಯೇ ಕೇಳಿ ಬರುತ್ತಿದೆ ಕಳೆದ ವಾರ ಯಾರೊಬ್ಬರೂ ಅಧಿಕಾರಿ ಪೆನ್ನ್ ಕೇಳಿದಕ್ಕೆ ” ಕೆಲಸ ಆಗುವುದಾದರೆ ಐದರ ಬದಲಿಗೆ ಇಪ್ಪತೈದ್ ಪೆನ್ನ್ ನೀಡಿದರಂತೆ ಒಬ್ಬಾತ ಆ ಸಂಧರ್ಭದಲ್ಲಿಯೇ ಪೆನ್ನಿನ ಅಸಲಿ ವಿಚಾರ ಹೊರಗೆ ಬಂದಿರುವಂತದ್ದು ಎಂದು ಒಳಗಿನ ಸಿಬ್ಬಂದಿಗಳು ಗುಟ್ಟಾಗಿ ಗಟ್ಟಿಯಾಗಿ ಹಾಸ್ಯ ಮಾಡುತ್ತಿದ್ದರಂತೆ .
ಇದು ಕಾಪು ಪುರಸಭೆಯ ಹಣೆಬರಹವಾದರೇ ಪ್ರಾಧಿಕಾರ ಇದಕ್ಕಿಂತಲೂ ಒಂದು ಪಟ್ಟು ಮುಂದಕ್ಕೆ ಹೋಗಿ ನಗರಾಭಿವೃದ್ಧಿ ಪ್ರಾಧಿಕಾರ ಬದಲು “ಬ್ರೋಕರಾಬೀವೃದ್ದಿ ಪ್ರಾಧಿಕಾರ ” ವಾಗಿ ಬದಲಾಗಿದೆ.
ಯಾವುದೇ ಕೆಲಸವಾಗಬೇಕಾದರೂ ಕೂಡ ವಯಾ ಬ್ರೋಕರ್ ಜತೆಗೆನೆ ನಿಮ್ಮ ಫೈಲ್ ಹೋಗಬೇಕು ಇಲ್ಲವಾದಲ್ಲಿ ಒಂದೆರಡು ಬಾರಿಗೆ ಆಗುವ ಕೆಲಸ ಎರಡು ತಿಂಗಳಾದರೂ ಆಗುವುದಿಲ್ಲ ಎಂಬ ವಿಚಾರಕ್ಕೆ ಸಾರ್ವಜನಿಕರು ಬಹಿರಂಗವಾಗಿಯೇ ಕಾಪುವಿನ ಅವಳಿ ಜವಳಿ ಮಕ್ಕಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಇನ್ನಾದರೂ ಈ ಬಗ್ಗೆ ಉನ್ನತ ಅಧಿಕಾರಿಗಳು-ಜನಪ್ರತಿನಿಧಿಗಳು ಹೆಚ್ಚಿನ ಕ್ರಮ ವಹಿಸಿ ಜನರ ಪಾಲಿಗೆ ನೆರವಾಗಬೇಕಿದೆ.
ಬ್ಯುರೋ ರಿಪೋರ್ಟ್:vishwanews24ಕಾಪು
ಮೈಸೂರು: ಕಾಲೇಜು ಕ್ಯಾಂಪಸ್ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…
ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…
ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…
ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ…
ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…
ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ - ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು ವಿಟ್ಲ:…