ಕಾಪು ಪೇಟೆ ಮಧ್ಯಭಾಗದಲ್ಲಿ ನಡೆಯಿತೇ ವಾಮಚಾರ….? ಭಯ ಹುಟ್ಟಿಸುತ್ತಿದೆ ನಡೆದಿರುವ ಪ್ರಕ್ರೀಯೆ: vishwanews24 exclusive
ಕಾಪು ಪೇಟೆ ಮಧ್ಯಭಾಗದಲ್ಲಿ ನಡೆಯಿತೇ ವಾಮಚಾರ….?
ಕಾಪು: ಕಾಪು ಪೇಟೆಯ ಮಧ್ಯಭಾಗದಲ್ಲಿ ಕುಂಬಳಕಾಯಿ ಹಾಗೂ ಇತರ ವಸ್ತುಗಳನ್ನ ಬಳಸಿ ವಾಮಚಾರ ಪ್ರಕ್ರಿಯೆ ನಡೆದಿರುವ ಅನುಮಾನ ವ್ಯಕ್ತವಾಗಿದೆ.
ವಿಚಿತ್ರ ರೀತಿಯಲ್ಲಿ ತೆಂಗಿನಕಾಯಿ ಲಿಂಬೆ ಹಣ್ಣು,ಅರಶಿನ ಹಾಗೂ ಇತರ ಪದರ್ಥಾಗಳು ಪತ್ತೆಯಾಗಿವೆ.
ಒಂದು ಗೊಂಬೆ ಮಾಡಲಾಗಿದೆ. ಮಡಕೆ, ತಗಡಿನ ವಸ್ತು,, ಬಾಳೆ ಹಣ್ಣು ಹಾಗೂ ತಂಗಿನಕಾಯಿ ಒಡೆದು ಗಂಧದ ಕಡ್ಡಿ ಹಚ್ಚಿ ಪೂಜೆ ಮಾಡಲಾಗಿರುವ ಕುರುಹು ಇದೆ.
ಇದನ್ನು ಕಂಡ ಸ್ಥಳೀಯ ಅಂಗಡಿ ಮಾಲಕರು ಮತ್ತು ಸಾರ್ವಜನಿಕರು ಪುರಸಭೆಗೆ ಮಾಹಿತಿ ನೀಡಿದ್ದು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಿಸಿ ಕ್ಯಾಮರ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

