ಕಾಪು ಮಲ್ಲಾರು ಹಝ್ರತ್ ಸದತ್ ವೃಧ್ದಾಶ್ರಮಕ್ಕೆ ರಂಜಾನ್ ಕಿಟ್ ನೀಡಿ ಶುಭ ಹಾರೈಸಿದ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು-vishwanews24
ಕಾಪು ಮಲ್ಲಾರು ಹಝ್ರತ್ ಸದತ್ ವೃಧ್ದಾಶ್ರಮಕ್ಕೆ ರಂಜಾನ್ ಕಿಟ್ ನೀಡಿ ಶುಭ ಹಾರೈಸಿದ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು
ಕಾಪು: ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ಡಾ ದೇವಿಪ್ರಸಾದ್ ಶೆಟ್ಟಿ ಕಾಪು ಮಲ್ಲಾರಿನ ಹಝ್ರತ್ ಸದತ್ ವೃಧ್ದಾಶ್ರಮಕ್ಕೆ ರಂಜಾನ್ ಕಿಟ್ ನೀಡಿ ಶುಭ ಹಾರೈಸಿದರು.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ” ರಂಜಾನ್ ಹಬ್ಬದ ಪುಣ್ಯ ಕಾಲದಲ್ಲಿ ವೃಧ್ದಾಶ್ರಮದಲ್ಲಿರುವ ಅನಾಥರಿಗೆ ರಂಜಾನ್ ವಿಶೇಷ ಆಹಾರದ ಕಿಟ್ ವಿತರಣೆ ಮಾಡಿದ್ದು ಇದೊಂದು ಸಾರ್ಥಕಭಾವ,ಮತ್ತು ಆದಷ್ಟು ಬಂಧುಗಳು ಈ ಆಶ್ರಮಕ್ಕೆ ಸಹಕಾರ ನೀಡಬೇಕು ಎಂದರು.
ಈ ಸಂಧರ್ಭದಲ್ಲಿ ಮಹಮ್ಮದ್ ಶಾರಿಕ್ ಹುಸೇನ್ ,ಆಶ್ರಮದ ಮೇಲ್ವಿಚಾರಕರು ಉಪಸ್ಥಿತರಿದ್ದರು.


