ಕಾಪು: ಕಾಪುವಿನ ವಿಜಯ ಬ್ಯಾಂಕ್ ಮುಂಭಾಗದಲ್ಲಿ ಹಾದುಹೋಗುವ ರಸ್ತೆಯ ಪಕ್ಕದಲ್ಲಿ ಒಳಚರಂಡಿ ಕಾಮಗಾರಿಯ ಕಾರಣದಿಂದ ಮ್ಯಾನ್ ಹೋಲ್ ಕುಸಿದು ಮರಣ ಗುಂಡಿಯೊಂದು ಜೀವ ಬಲಿಗಾಗಿ ಬಾಯ್ದೆರೆದು ಕುಳಿತುಕೊಂಡಿದ್ದು, ರಸ್ತೆ ಸಂಚಾರಿಗಳಲ್ಲಿ ಭೀತಿ ಮೂಡಿಸಿದೆ.
ಈ ಮರಣ ಗುಂಡಿಯ ಪಕ್ಕದಲ್ಲೇ ಕಾಪು ವಿಜಯಬ್ಯಾಂಕ್ ಕಚೇರಿಯೂ ಇದ್ದು, ಬ್ಯಾಂಕ್ಗೆ ಬರುವವರಿಗೂ ಇಲ್ಲಿನ ಮಾರಣಾಂತಿಕ ಸ್ಪಾಟ್ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಇಲ್ಲಿನ ಸಮಸ್ಯೆ ಮತ್ತು ಅಪಾಯದ ಪ್ರದೇಶವನ್ನು ಅರಿತು ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಮುನ್ಸೂಚನೆಯಾಗಿ ಮರದ ಹಲಗೆ ಮತ್ತು ಕಲ್ಲುಗಳನ್ನಿಟ್ಟು ಸೌಜನ್ಯ ಮೆರೆದಿದ್ದಾರೆ.
ಗುತ್ತಿಗೆದಾರನ ನೂತನ ಕಟ್ಟಡದ ಮುಂಭಾಗವೇ ಇದೆ ಈ ಗುಂಡಿ..!
ಹೌದು ಕಾಪು ಪುರಸಭಾ ವ್ಯಾಪ್ತಿಯ ಒಳಚರಂಡಿ ಕಾಮಗಾರಿಯ ಗುತ್ತಿಗೆಯನ್ನ ವಹಿಸಿಕೊಂಡಿರುವ ಗುತ್ತಿಗೆದಾರನ ನೂತನ ಕಟ್ಟಡ ಕಾಮಗಾರಿ ನಡೆಯುವ ಮುಂಭಾಗವೇ ಮ್ಯಾನ್ ಹೋಲ್ ಕುಸಿದು ಮೂರು ದಿನವಾದರೂ ಅವರ ಗಮನಕ್ಕೆ ಬಾರದಿರುವುದು ಮಾತ್ರ ಹಾಸ್ಯಸ್ಪದ.
ಈ ರಸ್ತೆಯ ಮೂಲಕ ಸಂಚರಿಸುವ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರೂ ಸೇರಿದಂತೆ ಎಲ್ಲರೂ ಕೂಡಾ ಇಲ್ಲಿನ ಮರಣ ಗುಂಡಿಯ ಬಗ್ಗೆ ಕೂಡಾ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು, ಪ್ರಾಣ ಹಿಂಡುವ ಗಂಭೀರ ಅವಘಡವೊಂದು ಸಂಭವಿಸಿ, ಜೀವ ಬಲಿ ನೀಡುವ ಮುನ್ನ ಇಲ್ಲಿನ ಕುಸಿದುಹೋದ ಮ್ಯಾನ್ ಹೋಲ್ ಪುನರ್ ನಿರ್ಮಿಸಿದಲ್ಲಿ ಒಳಿತು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
ಬೈಕಂಪಾಡಿಯಲ್ಲಿ ದರೋಡೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ ಸುರತ್ಕಲ್: ಬೈಕಂಪಾಡಿಯಲ್ಲಿ ನಡೆದಿದ್ದ ಕೇರಳದ ಜ್ಯುವೆಲ್ಲರಿ ಉದ್ಯಮಿ ವಿಕಾಸ್ ಅವರ…
ಕರ್ನಾಟಕ ಬಂದ್ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ ಉಡುಪಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ…
ವಿಧಾನ ಪರಿಷತ್ ಸಭಾ ನಾಯಕರಾಗಿ ಯತೀಂದ್ರ ಸಿದ್ದರಾಮಯ್ಯ ಬೆಂಗಳೂರು: ವಿಧಾನಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಪ್ರಾರಂಭವಾಗಿದ್ದು, ವಿಧಾನ ಪರಿಷತ್ ಕಲಾಪ…
ಬೆಂಗಳೂರು: ಸ್ಕೂಟರ್ ಸ್ಕಿಡ್ ಆಗಿ ಲಾರಿಗೆ ಡಿಕ್ಕಿ; ಮಹಿಳೆ ಸಾವು ಬೆಂಗಳೂರು : ಸಿಲಿಕಾನ್ ಸಿಟಿಯ ಎಲೆಕ್ಟ್ರಾನಿಕ್ ಸಿಟಿಯ ಜನನಿಬಿಡ…
ಹಿಂದೂ ಸಂಘಟನೆಗಳ ಮುಖಂಡರಿಗೆ ಉಡುಪಿ ಜಿಲ್ಲೆಗೆ ಪ್ರವೇಶ ನಿಷೇಧಿಸಿರುವುದು ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿ : ದಿನೇಶ್ ಮೆಂಡನ್ ಆರೋಪ…
ಉಡುಪಿ ಜಿಲ್ಲೆಗೆ ಹಿಂದೂ ಸಂಘಟನೆಗಳ ಮುಖಂಡರನ್ನು ನಿರ್ಬಂಧಿಸಿರುವುದು ಖಂಡನೀಯ : ಸುನಿಲ್ ಕೆ.ಆರ್ ಉಡುಪಿ: ಕಾಪು ಪ್ರಖಂಡದ ಬಜರಂಗದಳದ ವತಿಯಿಂದ…