ಕಾಪು: ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಪೂರ್ಣಗೊಂಡ ಬಳಿಕ ನಡೆದ ಮಂಗಲ ಮಂತ್ರಾಕ್ಷತೆ ಸಂದರ್ಭ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಸಮಗ್ರ ಜೀರ್ಣೋದ್ಧಾರದ ರೂವಾರಿ ಕೆ. ವಾಸುದೇವ ಶೆಟ್ಟಿ ಅವರನ್ನು ದೇವಸ್ಥಾನದ ಪ್ರಧಾನ ತಂತ್ರಿ ಕೊರಂಗ್ರಪಾಡಿ ಕೆ. ಪಿ. ಕುಮಾರ ಗುರು ತಂತ್ರಿ, ಅರ್ಚಕ ವೇ| ಕಲ್ಯ ಶ್ರೀನಿವಾಸ ತಂತ್ರಿ ನೇತೃತ್ವದಲ್ಲಿ ಋತ್ವಿಜರೆಲ್ಲರೂ ಸೇರಿ ರಾಜರ್ಷಿ ಬಿರುದು ಪ್ರದಾನಿಸಿ ಗೌರವಿಸಿದರು.
ಬಿರುದು ಪ್ರದಾನಿಸಿದ ಜ್ಯೋತಿಷ್ಯ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ಮಾತನಾಡಿ, ಕಾಪು ಮಾರಿಯಮ್ಮ ದೇವಸ್ಥಾನವು ಸರ್ವಾಂಗ ಸುಂದರವಾಗಿ ಮೂಡಿಬರುವಲ್ಲಿ ಕೊರಂಗ್ರಪಾಡಿ ದೊಡ್ಡಮನೆ ವಾಸುದೇವ ಶೆಟ್ಟಿ ಕಾಪು ಅವರ ಶ್ರಮ, ಪ್ರಯತ್ನ ಬಹಳಷ್ಟಿದೆ. ಅಮ್ಮನ ಮಾನಸ ಪುತ್ರನಂತೆ ಅವರು ಕೆಲಸ ಮಾಡಿದ್ದಾರೆ. ಅವರ ಸೇವಾ ಗುಣಗಳನ್ನು ಗಮನಿಸಿಕೊಂಡು, ಧಾರ್ಮಿಕ ಪೂಜಾ ವಿಧಿಗಳಲ್ಲಿ ಪಾಲ್ಗೊಂಡ ವಿದ್ವಾಂಸರು, ಋತ್ವಿಜರು, ಪುರೋಹಿತರ ಅಭಿಪ್ರಾಯ ಪಡೆದು ರಾಜರ್ಷಿ ಬಿರುದು ಪ್ರದಾನಿಸಲಾಗುತ್ತಿದೆ ಎಂದರು.
ಎಲ್ಲರ ಒತ್ತಾಸೆಯಿಂದಾಗಿ ಬಿರುದನ್ನು ಸ್ವೀಕರಿಸಿದ ವಾಸುದೇವ ಶೆಟ್ಟರು ಮಾತನಾಡಿ, ಅಮ್ಮನ ದೇವಸ್ಥಾನ ನಿರ್ಮಾಣವಷ್ಟೇ ನನ್ನ ಗುರಿಯಾಗಿತ್ತು. ಅಮ್ಮನ ಸೇವೆಯಲ್ಲಿ ಆವುದೇ ಯಾವುದೇ ಫಲಾಪೇಕ್ಷೆ ಬಯಸಿಲ್ಲ. ಎಲ್ ಕರಿಸಿದ್ದೇನೆ. ಈ ಬಿರುದು ಕಾಪುವಿನ ಅಮ್ಮ ಮತ್ತು ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದಲ್ಲಿ ಸಹಕರಿಸಿದ ಕಾಪುವಿನ ಅಮ್ಮನ ಮಕ್ಕಳಿಗೆ ಸಮರ್ಪಿತವಾಗಿದೆ. ಮುಂದೆಯೂ ಕಾಪು ಮಾರಿಗುಡಿಯ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುವುದಾಗಿ ಘೋಷಿಸಿದರು. ಪ್ರಮುಖರು ಉಪಸ್ಥಿತರಿದ್ದರು.
ಪಡುಬಿದ್ರಿ : ವ್ಯಕ್ತಿ ನಾಪತ್ತೆ ; ಪತ್ತೆಗೆ ಮನವಿ ಪಡುಬಿದ್ರಿ : ಕಂಚಿನಡ್ಕದ ನಿವಾಸಿ ರವೀಂದ್ರ (35) ಪಡುಬಿದ್ರಿ ಪೇಟೆಗೆ…
ಪಡುಬಿದ್ರಿ ಪೊಲೀಸರ ವಿಶೇಷ ಕಾರ್ಯಾಚರಣೆ :ರಸ್ತೆ ಅಪಘಾತ ಪ್ರಕರಣದಲ್ಲಿ 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಲಾರಿ ಚಾಲಕ ಅರೆಸ್ಟ್ ಉಡುಪಿ: 2002ರಲ್ಲಿ…
ಬೆಂಗಳೂರು : ಸ್ವಾಮೀಜಿ ವೇಷದಲ್ಲಿ ಬಂದು ಕೈಚಳಕ; ಮನೆಯಲ್ಲಿ ದೋಷ, ಸಾವಿನ ಕಂಟಕ ಎಂದು ಹೆದರಿಸಿ ಚಿನ್ನಾಭರಣ ದೋಚಿ ಪರಾರಿ…
ಬೆಳ್ತಂಗಡಿ: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ ; ಆರೋಪಿ ಅರೆಸ್ಟ್ ಬೆಳ್ತಂಗಡಿ : ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಮಾಡಿ ಬಾಲಕಿ…
ಮಂತ್ರಾಲಯ ಬಳಿ ಅಪಘಾತ: ಮಂಗಳೂರಿನ ಹಾಪ್ಕಾಮ್ಸ್ ನ ಪ್ರಧಾನ ವ್ಯವಸ್ಥಾಪಕ ರವಿ ಶೆಟ್ಟಿ ನಿಧನ ಕರ್ನೂಲು: ಕರ್ನೂಲು ಜಿಲ್ಲೆಯ ಮಂತ್ರಾಲಯದ…
ಉಡುಪಿ ಬಡಗುಬೆಟ್ಟು ಕಂಬಳಕ್ಕೆ ತಡೆ: ಆದೇಶ ತಕ್ಷಣ ಹಿಂಪಡೆಯಲು ಶಾಸಕ ಗುರ್ಮೆ ಆಗ್ರಹ ಉಡುಪಿ: ಉಡುಪಿ ಬಡಗುಬೆಟ್ಟು ಕೋಟಿ–ಚೆನ್ನಯ ಕಂಬಳಕ್ಕೆ…