ಕಾಪು : ಹೊಸ ಮಾರಿಗುಡಿ ದೇವಸ್ಥಾನ ಬ್ರಹ್ಮಕಲಶೋತ್ಸವ – ಮುಸ್ಲಿಂ ಬಾಂಧವರಿಂದ ಹೊರೆ ಕಾಣಿಕೆ ಸಮರ್ಪಣೆ – vishwanews24
ಕಾಪು : ಹೊಸ ಮಾರಿಗುಡಿ ದೇವಸ್ಥಾನ ಬ್ರಹ್ಮಕಲಶೋತ್ಸವ – ಮುಸ್ಲಿಂ ಬಾಂಧವರಿಂದ ಹೊರೆ ಕಾಣಿಕೆ ಸಮರ್ಪಣೆ
ಕಾಪು : ಕಾಪು ಶ್ರೀ ಹೊಸ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಕಾಪು ಮಲ್ಲಾರು ಕೊಂಬಗುಡ್ಡೆ ಭಾಗದ ಮುಸ್ಲಿಂ ಬಾಂಧವರಿಂದ ಹೊರೆ ಕಾಣಿಕೆ ಸಮರ್ಪಣೆ ಸೋಮವಾರ ನಡೆಯಿತು.
ಈ ಸಂದರ್ಭದಲ್ಲಿ ದೇಗುಲ ನಿರ್ಮಾಣದ ಪ್ರಮುಖರಾದ ಉದಯ ಸುಂದರ ಶೆಟ್ಟಿ ರತ್ನಾಕರ ಶೆಟ್ಟಿ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿಕಲ್ಯಾ ಗೋವರ್ಧನ ಸೇರಿದರು ಜಗದೀಶ ಬಂಗೇರ ಉದಯ ಹೆಗ್ಡೆ ಶೇಖರ ಸಾಲ್ಯಾನ್ ಮೊದಲಾದವರು ಹೊರೆ ಕಾಣಿಕೆಯನ್ನು ಸ್ವೀಕಾರ ಮಾಡಿಕೊಂಡರು.
ಹೊರ ಕಾಣಿಕೆ ಸಮರ್ಪಿಸಿದ ತಂಡದಲ್ಲಿ ಮಹಮ್ಮದ್ ಮುಸ್ತಾಕ್,ಸಾಧಿಕ್ ದಿನಾರ್,ಅಬ್ದುಲ್ ಖಾಜಿ,ಭಾಷ ಸಾಹೇಬ್ ಮೊದಲಾದವರು ಉಪಸ್ಥಿತರಿದ್ದರು.


