Featured

ಕಾಪು : KMJ SYS SSF ವತಿಯಿಂದ ಬೆಳಪು ದೇವಿಪ್ರಸಾದ್ ಶೆಟ್ಟಿಯವರಿಗೆ ಸನ್ಮಾನ – vishwanews24

ಕಾಪು : KMJ SYS SSF ವತಿಯಿಂದ ಬೆಳಪು ದೇವಿಪ್ರಸಾದ್ ಶೆಟ್ಟಿಯವರಿಗೆ ಸನ್ಮಾನ

ಕಾಪು: ಬೆಳಪು ಗ್ರಾಮವನ್ನು ರಾಜ್ಯದಲ್ಲಿಯೇ ಮಾದರಿ ಗ್ರಾಮವಾಗಿ ಅಭಿವೃದ್ಧಿ ಮಾಡಿ, ಕುಗ್ರಾಮವಾಗಿದ್ದ ಬೆಳಪು ಗ್ರಾಮದಲ್ಲಿ ಶಿಕ್ಷಣ, ಉದ್ಯೋಗ, ಆರೋಗ್ಯ ಎಂಬ ತ್ರಿವಳಿ ಮಂತ್ರದೊಂದಿಗೆ ಗ್ರಾಮವನ್ನು ಅಭಿವೃದ್ಧಿಯ ತುತ್ತತುದಿಗೆ ತಂದು ನಿಲ್ಲಿಸಿದ ದೇವಿಪ್ರಸಾದ್ ಶೆಟ್ಟಿಯವರಿಗೆ, ಕರ್ನಾಟಕ ಮುಸ್ಲಿಂ ಜಮಾತ್, SYS ಹಾಗೂ SSF ಬೆಳಪು ಶಾಖೆಯ ವತಿಯಿಂದ ತಾಜುಲ್ ಉಲಮಾ ಭವನದಲ್ಲಿ, ಸನ್ಮಾನಿಸಲಾಯಿತು.

ಬೆಳಪು ಬದರ್ ಜಾಮೀಯಾ ಮಸ್ಜಿದ್ ಖತೀಬರಾದ, ಬಹು ಅಬ್ದುಲ್ ರಶೀದ್ ಸಖಾಫಿಯವರು ಸ್ವಾಗತ ಬಾಷಣ ಮಾಡಿದರು. ಇದೇ ವೇಳೆ ಮಾತಾಡಿದ ಅಬ್ದುಲ್ ರಶೀದ್ ಸಖಾಫಿಯವರು, ಭೂಮಿಯಲ್ಲಿ ಜೀವಂತ ಇರುವಾಗ ಮಾತ್ರವಲ್ಲ ನಂತರದ ಕಾಲದಲ್ಲೂ ಕೆಲವರ ಹೆಸರನ್ನು ನಾವು ಸ್ಮರಿಸಿಕೊಳ್ಳುತ್ತೇವೆ, ಯಾಕೆಂದರೆ ಅವರು ತಮ್ಮ ಜೀವಿತಾವಧಿವಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಿರುತ್ತಾರೆ, ಹಲವಾರು ಸಾಧನೆಗಳನ್ನು ಮಾಡಿರುತ್ತಾರೆ. ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧೀ, ದೇಶವನ್ನು ಆಳಿದ ಹಾಗೂ ಹಲವಾರು ಸ್ಮಾರಕಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ ರಾಜರು, ತಾಜುಲ್ ಉಲಮಾರವರಂತಹ ಮಹಾತ್ಮರು, ಇವರೆಲ್ಲಾ ಇಂದಿಗೂ ನಮ್ಮ ನೆನಪಿನಲ್ಲಿ ಇದ್ದಾರೆ ಅಂದ್ರೆ ಅದಕ್ಕೆ ಕಾರಣ ಅವರು ಜೀವನದಲ್ಲಿ ಮಾಡಿದ ಉತ್ತಮ ಕಾರ್ಯಗಳು, ಅದೇ ರೀತಿ ಏನೂ ಅಲ್ಲದ ಬೆಳಪು ಗ್ರಾಮದಲ್ಲಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಶಿಕ್ಷಣ ಕ್ರಾಂತಿಯನ್ನೇ ಸೃಷ್ಟಿಸಿ, ವಿಶ್ವ ವಿದ್ಯಾನಿಲಯ, ಕಾಲೇಜುಗಳು LKG ಯಿಂದ ಡಿಪ್ಲೋಮ ತನಕ ಉಚಿತ ಶಿಕ್ಷಣ ವ್ಯವಸ್ಥೆ,ಎಲ್ಲವೂ ಬೆಳಪು ಗ್ರಾಮದಲ್ಲಿ ನಿರ್ಮಾಣ ಆಗುವಂತೆ ಮಾಡಿದ್ದು, ಕಾಲ ಕಾಲಕ್ಕೆ ದೇವಿಪ್ರಸಾದ್ ಶೆಟ್ಟಿಯವರ ಹೆಸರು ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಲಿದೆ ಎಂದು ಹೇಳಿದರು.

ಇದೇ ವೇಳೆ ಸನ್ಮಾನಿತ ಡಾ ದೇವಿಪ್ರಸಾದ್ ಶೆಟ್ಟಿ ಮಾತಾಡಿ, ಕಾಡಿನಂತಿದ್ದ ಬೆಳಪು ಗ್ರಾಮ ಇಂದು ಸಂಪೂರ್ಣವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಕೈಗಾರಿಕಾ ಪಾರ್ಕ್, ಅತ್ಯಾಧುನಿಕ ವಿಜ್ಞಾನ ಸಂಶೋಧನೆ ಕೇಂದ್ರ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಮೌಲಾನ ಆಜಾದ್ ಮಾದರಿ ಶಾಲೆ, ಎಲ್ಲವೂ ಆರಂಭವಾಗುತ್ತಿದೆ, ಗ್ರಾಮದ ಬಡ ವಿದ್ಯಾರ್ಥಿಗಳು ಕೂಡ ಅತ್ಯುತ್ತಮ ಶಿಕ್ಷಣ ಕಲಿಯಬೇಕು, ಗ್ರಾಮದ ಯಾರೊಬ್ಬರೂ ವಿಧ್ಯೆಯಿಂದ ವಂಚಿತರಾಗಬಾರದು, ಎನ್ನುವ ಉದ್ದೇಶದಿಂದ ನಮ್ಮ ಗ್ರಾಮದಲ್ಲಿ ಶಿಕ್ಷಣ ಕ್ರಾಂತಿಯನ್ನೇ ಹುಟ್ಟುಹಾಕುತ್ತಿದ್ದೇವೆ, ಅದೇ ರೀತಿ ಗಾಂಜಾಮುಕ್ತ, ಮಾದಕ ದ್ರವ್ಯ ಮುಕ್ತ ಗ್ರಾಮವಾಗಿ ರೂಪಿಸಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯ, ಸ್ವಚ್ಛ ಸುಂದರ ಬೆಳಪು ಗ್ರಾಮ ನಿರ್ಮಾಣ ಆಗಬೇಕಾದರೆ ರಸ್ತೆ ಬದಿ, ಎಲ್ಲೆಂದರಲ್ಲಿ ಕಸ ಹಾಕಬೇಡಿ, ಎಂದು ಹೇಳಿದರು. ಇದೇ ವೇಳೆ KMJ SYS SSF ಸದಸ್ಯರು, ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿಯವರ ಸಮ್ಮುಖದಲ್ಲಿ ಗ್ರಾಮದಲ್ಲಿ ಕೋಮುಸೌಹಾರ್ದತೆ ಕಾಪಾಡಿ, ಶಾಂತಿಯನ್ನು ಸದಾ ಕಾಪಾಡುತ್ತೇವೆ, ಗಾಂಜಾ ಹಾಗೂ ಮಾದಕ ದ್ರವ್ಯದ ವಿರುದ್ಧ ಅಭಿಯಾನ ಕೈಗೊಂಡು, ಅಂತಹಾ ದುಶ್ಚಟಗಳಿಗೆ ನಾವು ಬಲಿಯಾಗುವುದಿಲ್ಲ, ರಸ್ತೆಯಲ್ಲಿ ಕಸ ಎಸೆಯುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಈ ವೇಳೆ ತಾಜುಲ್ ಉಲಮಾ ಭವನದ ಅಧ್ಯಕ್ಷರಾದ ನಝೀರ್ ಬೆಳಪು, ಕೋಶಾಧಿಕಾರಿ ಮುಹಮ್ಮದ್ ಮೋನು,ವಿಶೇಷ ಅತಿಥಿಯಾದ ಇಮ್ತಿಯಾಜ್ ಕೃಷ್ಣಾಪುರ,SYS ಅಧ್ಯಕ್ಷರಾದ ಅಬ್ದುಲ್ ಕರೀಂ ಹಾಜಿ ಕಳತ್ತೂರ್, SYS ಕಾರ್ಯದರ್ಶಿ ಮಯ್ಯದ್ದಿ ಬೆಳಪು, ಕೋಶಾಧಿಕಾರಿ ಅಬ್ಬಾಸ್ ವಿನಯನಗರ, SSF ಅಧ್ಯಕ್ಷರಾದ ಸಾದಿಕ್ ವಿನಯ ನಗರ, ಕಾರ್ಯದರ್ಶಿ ನುಹ್ಮಾನ್, ಬದರ್ ಜಾಮೀಯಾ ಮಸ್ಜಿದ್ ನ ಉಸ್ತಾದರುಗಳು, ಉಪಸ್ಥಿತರಿದ್ದರು, ಅಮೀರ್ ಬೆಳಪು ಕಾರ್ಯಕ್ರಮ ನಿರೂಪಿಸಿದರು.

Vishwa News 24

Recent Posts

ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಆರೋಪ ಆತಂಕಕಾರಿ ಬೆಳವಣಿಗೆ : ಶೀರೂರು ಶ್ರೀ – vishwanews24

ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಆರೋಪ ಆತಂಕಕಾರಿ ಬೆಳವಣಿಗೆ : ಶೀರೂರು ಶ್ರೀ ಉಡುಪಿ :…

4 hours ago

ಆರೆಸ್ಸೆಸ್ ಅನ್ನು ಹಿಂದೂ ಧರ್ಮಕ್ಕೆ ಹೋಲಿಸಿರುವುದು ಖಂಡನೀಯ: ಬಿ.ಕೆ. ಹರಿಪ್ರಸಾದ್ – vishwanews24

"ಹಿಂದೂ ಧರ್ಮವೂ ನೋಂದಣಿಯಾಗಿಲ್ಲ ಎಂಬ ಮೋಹನ್ ಭಾಗವತ್ ಅವರ ಹೇಳಿಕೆಗೆ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯೆ ಬೆಂಗಳೂರು: ಆರೆಸ್ಸೆಸ್ ಮುಖ್ಯಸ್ಥ ಮೋಹನ್…

4 hours ago

ಕೊಕ್ಕಡ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ – vishwanews24

ಕೊಕ್ಕಡ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಕೊಕ್ಕಡ,: ಬೆಳ್ತಂಗಡಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ…

4 hours ago

NEET (UG) Re-Exam 2026:  ಭಾರತದಲ್ಲಿ ಟೆಲಿಗ್ರಾಮ್‌ಗೆ ತಾತ್ಕಾಲಿಕ ನಿಷೇಧ – vishwanews24

NEET (UG) Re-Exam 2026:  ಭಾರತದಲ್ಲಿ ಟೆಲಿಗ್ರಾಮ್‌ಗೆ ತಾತ್ಕಾಲಿಕ ನಿಷೇಧ ನವದೆಹಲಿ: ನೀಟ್ (NEET-UG 2026) ಮರು ಪರೀಕ್ಷೆಯನ್ನು ಸಂಪೂರ್ಣ…

4 hours ago

NEET (UG) Re-Exam 2026:  ಭಾರತದಲ್ಲಿ ಟೆಲಿಗ್ರಾಮ್‌ಗೆ ತಾತ್ಕಾಲಿಕ ನಿಷೇಧ – vishwanews24

NEET (UG) Re-Exam 2026:  ಭಾರತದಲ್ಲಿ ಟೆಲಿಗ್ರಾಮ್‌ಗೆ ತಾತ್ಕಾಲಿಕ ನಿಷೇಧ ನವದೆಹಲಿ: ನೀಟ್ (NEET-UG 2026) ಮರು ಪರೀಕ್ಷೆಯನ್ನು ಸಂಪೂರ್ಣ…

4 hours ago

ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜೂ. 19 ರಂದು ರಾಹುಲ್ ಗಾಂಧಿ ಜನ್ಮದಿನಾಚರಣೆ – vishwanews24

ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜೂ. 19 ರಂದು ರಾಹುಲ್ ಗಾಂಧಿ ಜನ್ಮದಿನಾಚರಣೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಕಾಂಗ್ರೆಸ್…

5 hours ago