ಕಾರ್ಕಳ: ಅಕ್ರಮ ಕಸಾಯಿ ಖಾನೆಗೆ ಪೊಲೀಸರ ದಾಳಿ; 200 ಕೆಜಿ ಗೂ ಅಧಿಕ ದನದ ಮಾಂಸ ಪತ್ತೆ – vishwanews24

Featured, ಉಡುಪಿ

ಕಾರ್ಕಳ: ಅಕ್ರಮ ಕಸಾಯಿ ಖಾನೆಗೆ ಪೊಲೀಸರ ದಾಳಿ; 200 ಕೆಜಿ ಗೂ ಅಧಿಕ ದನದ ಮಾಂಸ ಪತ್ತೆ

ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಶ್ರಪ್ ಆಲಿ ಎಂಬವನ ಮನೆಯಲ್ಲಿ ಅಕ್ರಮವಾಗಿ ದನಗಳನ್ನು ಕೂಡಿ ಹಾಕಿ ಕಡಿದು ಮಾಂಸ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಇವತ್ತು ಬೆಳಿಗ್ಗೆ ಪತ್ತೆಯಾಗಿದೆ. ಸುಮಾರು 200 kg ಮಾಂಸ ಪತ್ತೆಯಾಗಿದ್ದು ಪಕ್ಕದಲ್ಲಿ ಹೋರಿಯನ್ನು ಕಟ್ಟಿ ಹಾಕಿದ್ದು, ಅದಲ್ಲದೇ ಅಲ್ಲೇ ರಕ್ತದ ಕುರುಹು ಮತ್ತು ದನದ ತ್ಯಾಜ್ಯಗಳು ಪತ್ತೆಯಾಗಿದೆ.

ದಿಲ್ಲಿ ಸ್ಫೋಟ : ಉಡುಪಿ ಜಿಲ್ಲೆಯಲ್ಲಿ ಅಲರ್ಟ್ ; ಪೊಲೀಸ್ ವರಿಷ್ಠಾಧಿಕಾರಿ ಸೂಚನೆ – vishwanews24

ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಪೋಲಿಸರೊಂದಿಗೆ ಹಿಂದೂ ಸಂಘಟನೆ ಇಂದು ಬೆಳಗ್ಗೆ ದಾಳಿ ನಡೆಸಿದೆ.

ಈ ಕುರಿತು ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ತಕ್ಷಣ ಅಶ್ರಪ್ ನನ್ನು ಬಂಧಿಸಬೇಕು, ಮತ್ತು ಗೋ ಹತ್ಯೆ ನಿಷೇಧ ಕಾಯ್ದೆ ಅಡಿಯಲ್ಲಿ ಅವನ ಮನೆಯನ್ನು ಹಾಗೂ ಗೋ ವಧೆಗೆ ಬಳಸಿಕೊಂಡಿರುವ ಎಲ್ಲಾ ಜಾಗವನ್ನು ಸರಕಾರ ಮುಟ್ಟುಗೋಲು ಹಾಕಬೇಕು. ಅಶ್ರಫ್ ಎನ್ನುವಾತ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು ಮುಂಬೈ ನಿಂದ ಗಡಿಪಾರು ಮಾಡಿದ ನಂತರ ಕಾರ್ಕಳದಲ್ಲಿ ನೆಲೆಸಿ ಇಲ್ಲಿಯೂ ತನ್ನ ಅಪರಾಧ ಚಟುವಟಿಕೆಗಳನ್ನು ಮುಂದುವರೆಸುತ್ತಾ ಬಂದಿರುತ್ತಾನೆ ಆದ್ದರಿಂದ ಪೋಲಿಸ್ ಇಲಾಖೆ ಈತನ ಮೇಲೆ ಅತ್ಯಂತ ಪ್ರಬಲ ಕಾನೂನು ಕ್ರಮ ಕೈಗೊಳ್ಳುವಂತೆ ಬಜರಂಗದಳ ಆಗ್ರಹಿಸಿದೆ

ಡಾ .ಎಂ ಏನ್ ರಾಜೇಂದ್ರ ಕುಮಾರ್ ಅವರಿಂದ ಕಾರ್ಕಳ ಬಾಹುಬಲಿ ಬೆಟ್ಟಕ್ಕೆ ಶಾಶ್ವತ ದಾರಿದೀಪ ಅಳವಡಿಕೆ – vishwanews24

Leave a Reply