ಕಾರ್ಕಳ : ಅತ್ತೂರು ಜಾತ್ರೆ ; ರಾತ್ರಿ 10 ಗಂಟೆಯ ಬಳಿಕ ಧ್ವನಿವರ್ಧಕ ಬಳಸದಂತೆ ಪೊಲೀಸರ ಸೂಚನೆ – vishwanews24

Featured, ಉಡುಪಿ

ಕಾರ್ಕಳ : ಅತ್ತೂರು ಜಾತ್ರೆಗೂ ತಟ್ಟಿತು ಸುಪ್ರೀಂ ಕೋರ್ಟ್‌ ನಿಯಮದ ಬಿಸಿ 

ರಾತ್ರಿ 10 ಗಂಟೆಯ ಬಳಿಕ ಧ್ವನಿವರ್ಧಕ ಬಳಸದಂತೆ ಪೊಲೀಸರ ಸೂಚನೆ 

ಕಾರ್ಕಳ : ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವಕ್ಕೂ ಈ ಬಾರಿ ಸುಪ್ರೀಂ ಕೋರ್ಟ್‌ ನಿಯಮದ ಬಿಸಿ ತಟ್ಟಿದೆ. ರಾತ್ರಿ 10 ಗಂಟೆಯ ಬಳಿಕ ಧ್ವನಿವರ್ಧಕ ಬಳಸದಂತೆ ಅತ್ತೂರು ಚರ್ಚ್ ಪಾಲನಾ ಸಮಿತಿಯವರಿಗೆ ಪೊಲೀಸರು ಸೂಚನೆ ನೀಡಿದ್ದಾರೆ.

ಹೀಗಾಗಿ ಬಹುವರ್ಷಗಳಿಂದ ಹಗಲಿರುಳು 5 ದಿನಗಳ ಕಾಲ ಅದ್ದೂರಿಯಾಗಿ ನಡೆಯುತ್ತಿದ್ದ ಸರ್ವಧರ್ಮೀಯರ ಪುಣ್ಯ ಕ್ಷೇತ್ರ ಅತ್ತೂರಿನ ಜಾತ್ರೆ ಸಡಗರಕ್ಕೂ ತಡೆಯಾಗಿದೆ. ಮುಖ್ಯವಾಗಿ ವ್ಯಾಪಾರ, ವ್ಯವಹಾರಕ್ಕೆ ತೊಡಕಾಗಿದೆ. ಈ ಬಾರಿ ಅತ್ತೂರು ಸುತ್ತಮುತ್ತ ಸುಮಾರು 400 ಸ್ಟಾಲ್‌ಗಳು ಬಾಡಿಗೆ ಆಧಾರ ಮೇಲೆ ತೆರೆದಿದೆ. ಅಮ್ಯೂಸ್‌ಮೆಂಟ್ ಸೇರಿದಂತೆ ಮನೋರಂಜನೆಗಾಗಿ ಒಂದಷ್ಟು ಕೇಂದ್ರಗಳಿವೆ. ರಾತ್ರಿ 10 ಗಂಟೆಯ ಬಳಿಕ ಪೊಲೀಸರು ಧ್ವನಿವರ್ಧಕಕ್ಕೆ ಬ್ರೇಕ್ ಹಾಕುವುದರಿಂದ ಸ್ಟಾಲ್‌ಗಳನ್ನು ಬಾಡಿಗೆಗೆ ಪಡೆದವರು ವ್ಯಾಪಾರ ಕುಂಠಿತದಿಂದಾಗಿ ಕಂಗಾಲಾಗಿದ್ದಾರೆ.

ಮುಡಾದ 160 ನಿವೇಶನ​​ಗಳನ್ನು ಜಪ್ತಿ ಮಾಡುವಂತೆ ಇಡಿ ಅದೇಶ – vishwanews24

ಅತ್ತೂರು ಜಾತ್ರೆಯು ಜ. 26ರಂದು ಪ್ರಾರಂಭಗೊಂಡು ಜ. 30ರವರೆಗೆ ನಡೆಯಲಿದ್ದು, ಈ ಹಿಂದೆ ಮುಂಜಾನೆವರೆಗೂ ಅಂದರೆ ಜನ ವಿರಳವಾಗುವಲ್ಲಿ ತನಕ ಅಂಗಡಿ ಮುಂಗಟ್ಟುಗಳು ತೆರೆದಿರುತ್ತಿದ್ದವು.

ಮೆನ್ ಕಡಿತ
ಅತ್ತೂರಿನ ಬರುವ ಭಕ್ತರ ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಈ ಹಿಂದಿನ ಬಾರಿಯೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗುತ್ತಿತ್ತು. ಡಿವೈಎಸ್‌ಪಿ, ಸಿಪಿಐ, 8 ಪಿಎಸ್‌ಐ, 200 ಮಂದಿ ಸಿವಿಲ್ ಪೊಲೀಸ್, 100 ಡಿಎಆರ್ ತುಕಡಿ, 50 ಮಂದಿ ಗೃಹ ರಕ್ಷಕ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತಿತ್ತು. ಸುಮಾರು 64 ಕಡೆ ಸಿಸಿಟಿವಿ ಅಳವಡಿಸಲಾಗುತ್ತಿತ್ತು. ಆದರೆ ಈ ಬಾರಿ ಕೇವಲ 30 ಮಂದಿ ಪೊಲೀಸರು, 50 ಸೆಕ್ಯೂರಿಟಿ ಗಾರ್ಡ್ ಮತ್ತು 40 ಹೋಂ ಗಾರ್ಡ್‌ಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಅದು ಕೂಡ ಪಾವತಿ ಆಧಾರ ಮೇಲೆಯೇ ಎನ್ನುವುದು ವಿಶೇಷ.

ದ.ಕ.ಜಿಲ್ಲಾ ಬಿಜೆಪಿ‌ ನೂತನ ಅಧ್ಯಕ್ಷರಾಗಿ ಸತೀಶ್ ಕುಂಪಲ ಪುನರಾಯ್ಕೆ – vishwanews24

 

Leave a Reply