ಕಾರ್ಕಳ ಅ್ಯಂಟಿ ನಕ್ಸಲ್ ನಿಗ್ರಹ ದಳದ ನೂತನ ಎಸ್ಪಿಯಾಗಿ ಯಡಾ ಮಾರ್ಟಿನ್ ನೇಮಕ -Vishwanews24
ಉಡುಪಿ: ಕಾರ್ಕಳ ಅ್ಯಂಟಿ ನಕ್ಸಲ್ ಪಡೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಇಡಾ ಮಾರ್ಟಿನ್ ಮಾರ್ಬನಿಯಂಗ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
17 ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಉಡುಪಿ ಜಿಲ್ಲೆ ಕಾರ್ಕಳದ ಎ ಎನ್ ಎಫ್ ಎಸ್ಪಿಯಾಗಿ ಕಲ್ಬುರ್ಗಿ ಎಸ್ಪಿಯಾಗಿದ್ದ ಇಡಾ ಮಾರ್ಟಿನ್ ಮಾರ್ಬನಿಯಂಗ್ ಅವರನ್ನು ನೇಮಿಸಿದೆ
2012ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಅವರು ಕಲಬುರಗಿ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕಾರ್ಕಳ ಕೇಂದ್ರ ಘಟಕ ಹೊಂದಿರುವ ನಕ್ಸಲ್ ನಿಗ್ರಹ ದಳದಲ್ಲಿ 4 ತಿಂಗಳಿನಿಂದ ಎಎನ್ಎಫ್ ಘಟಕದ ವರಿಷ್ಠಾಧಿಕಾರಿ ಹುದ್ದೆ ಖಾಲಿ ಇದ್ದು, ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಪ್ರಭಾರ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. .
